ತುರುವೇಕೆರೆ:
ತಾಲ್ಲೂಕಿನ ತೊರೆಮಾವಿನಹಳ್ಳಿ ಗೇಟ್ನಿಂದ ಬೂವನಹಳ್ಳಿ-ಆನೆಕೆರೆ ಮಾರ್ಗವಾಗಿ ಮಲ್ಲಾಘಟ್ಟ ಕೆರೆ, ನಲ್ಲಿಕೆರೆ ಮಾರ್ಗವಾಗಿ ತಿಪಟೂರಿಗೆ ತಲುಪುವ ಸಂಪರ್ಕ ರಸ್ತೆ, ತೊರೆಮಾವಿನಹಳ್ಳಿ ಗೇಟ್ನ ಬಸವನತೋಟದ ಸಮೀಪ ಅಕಾಲಿಕ ಮತ್ತು ಸತತ ಮಳೆಯಿಂದ ಸಂಪೂರ್ಣ ಹಾಳಾಗಿದ್ದು, ಜನ ಜಾನುವಾರುಗಳು, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಸಂಬಂಧಪಟ್ಟವರು ಕೂಡಲೆ ಗಮನ ಹರಿಸಿ, ರಸ್ತೆ ದುರಸ್ತಿ ಮಾಡಿಕೊಡುವಂತೆ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
