ತಿಪಟೂರು : ಫಲಾನುಭವಿಗಳ ಮೇಲೆ ಗುತ್ತಿಗೆದಾರ ದರ್ಪ

ತಿಪಟೂರು :

      ಸಣ್ಣ ನೀರಾವರಿಇಲಾಖೆಯಿಂದ ವಿತರಿಸುತ್ತಿದ್ದ ಪಂಪ್‍ಸೆಟ್ ಮತ್ತುಅದರ ಪರಿಕರಗಳನ್ನು ವಿತರಿಸುವಾಗ ನಮಗೆ ಇಲ್ಲಿಯೇಕೊಡಿಎಂದು ಫಲಾನುಭವಿಗಳು ಕೇಳಿದ್ದಕ್ಕೆ ನಾವು ಚೀಟಿಕೊಡುತ್ತೇವೆ. ಅಂಗಡಿಯ ಹತ್ತಿರ ಬಂದುತೆಗೆದುಕೊಂಡು ಹೋಗಿ ಎಂದು ಗುತ್ತಿಗೆದಾರರು ಅಧಿಕಾರಿಗಳ ಸಮ್ಮುಖದಲ್ಲೇ ದರ್ಪವನ್ನು ತೋರ್ಪಡಿಸಿದ ಘಟನೆ ನಗರದ ಸಕಾರಿ ಬಾಲಕರ ಪದವಿಪೂರ್ವಕಾಲೇಜಿನ ಆವರಣದಲ್ಲಿ ಸಣ್ಣ ನೀರಾವರಿಇಲಾಖೆಯಿಂದ ಗಂಗಾಕಲ್ಯಾಣ ಮತ್ತುಗಿರಿಜನಕಲ್ಯಾಣಯೋಜನೆಯ ಫಲಾನುಭವಿಗಳಿಗೆ ಮೋಟಾರ್ ಪಂಪ್ ಮತ್ತು ಪರಿಕರಗಳ ವಿತರಣೆ ವೇಳೆ ನಡೆದಿದೆ.

      ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ದೊಡ್ಡಯ್ಯ, ಮತ್ತುಇತರೆ ಅಧಿಕಾರಿಗಳ ಬಳಿ ಫಲಾನುಭವಿಗಳು ಮಾಹಿತಿ ಪಡೆಯಬೇಕಾದರೆ ಗುತ್ತಿಗೆದಾರ ಹೇಮಂತ್‍ಕುಮಾರ್.ಜಿ.ಜಿ ಮದ್ಯಪ್ರವೇಶಿಸಿ ಅಧಿಕಾರಿಗಳಿಗೆ ನೀವು ಇಲ್ಲಿಯಾವುದೇ ಮಾಹಿತಿಕೊಡಬೇಡಿ, ಕೊಡಲು ಸಾಧ್ಯವಿಲ್ಲವೆಂದು ಹೇಳಿ. ಇಲ್ಲಿನೀವೇಕೆ ಬಂದಿದ್ದೀರಿ ಕೇಳುವಂತೆ ಸರ್ಕಾರಿ ಅಧಿಕಾರಿಗೆ ಧಮಕಿ ಹಾಕಿದ್ದಲ್ಲದೇ ಕೆಲವು ಫಲಾನುಭವಿಗಳಿಗೆ ಇಲ್ಲಿ ಮೋಟಾರ್ ಪಂಪ್‍ಕೊಡಲು ಆಗುವುದಿಲ್ಲ, ನಿಮಗೆ ಬೇಕಾದರೆ ಚೀಟಿ ಕೊಡುತ್ತೇವೆಅಂಗಡಿಯ ಹತ್ತಿರಹೋಗಿ ತೆಗೆದುಕೊಳ್ಳಿ ಇಲ್ಲ ಇಲ್ಲೇ ಬೇಕು ಎಂದರೆ ಸಂಜೆವರೆಗೂ ಕಾಯಬೇಕಾಗುತ್ತದೆ ಎಂದು ಫಲಾನುಭವಿಗಳಿಗೆ ಧಮಕಿ ಹಾಕುತ್ತಿದ್ದರು.

ನೀವು ಏನನ್ನಾದರು ಬರೆದುಕೊಳ್ಳಿ ಏನು ಮಾಡಲು ಸಾಧ್ಯವಿಲ್ಲ :

      ಮೋಟಾರ್‍ ಯಾವ ಕಂಪನಿಯದ್ದು, ಕೇಬಲ್ ಯಾವ ಕಂಪನಿಯದು ಎಂದು ಮಾದ್ಯಮದವರು ಕೇಳಿದಾಗ ನೀವು ಏನನ್ನಾದರು ಬರೆದುಕೊಳ್ಳಿ ನನಗೇನು ಆಗುವುದಿಲ್ಲ. ಅದನ್ನು ಕೇಳಲು ನೀವು ಯಾರು, ನಿಮ್ಮನ್ನುಇಲ್ಲಿಗೆ ಕರೆದವರು ಯಾರು? ನಿಮಗೆ ಇದರಬಗ್ಗೆ ಅನುಮಾನವಿದ್ದರೆ ನೀವು ಏನನ್ನಾದರು ಮಾಡಿಕೊಳ್ಳಿ. ನಿಮಗೆ ನಾವು ಹೆದರುವುದಿಲ್ಲವೆಂದು ಮಾದ್ಯಮದವರಿಗೆಗುತ್ತಿಗೆದಾರ ಹೇಮಂತ್‍ಕುಮಾರ್.ಜಿ.ಜಿಧಮಕಿಹಾಕಿದನು. ಅಂಗಡಿಯ ಹತ್ತಿರ ಹೋದರೆಅಲ್ಲೇನು ಕಳಪೆ ದರ್ಜೆಯ ವಸ್ತುಗಳನ್ನೇನು ಕೊಡುವುದಿಲ್ಲ ಬೇಕಾದರೆಅಲ್ಲಿಗೆಹೋಗಿ ತೆಗೆದುಕೊಳ್ಳಿ ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆಆರ್.ಟಿ.ಇ ಮುಖಾಂತರ ಪಡೆದುಕೊಳ್ಳಿ ಎಂದನು.

 ಏನೇನು ವಸ್ತುಗಳನ್ನು ಕೊಡುತ್ತಿದ್ದೀರ ಎಂಬುದಕ್ಕೆ ದಾಖಲೆಗಳೇ ಇಲ್ಲ :

      ಇಂದು 15 ಜನ ಫಲಾನುಭವಿಗಳಿಗೆ ಮೋಟಾರ್ ಪಂಪ್‍ಗಳನ್ನು ಕೊಡಲಾಗುತ್ತಿದ್ದುಅವರಕಿಟ್‍ನಲ್ಲಿ ಏನೇನು ಪರಿಕರಗಳಿವೆ ಅವುಗಳ ದಾಖಲೆ ಕೇಳಿದರೆ ಅವುಗಳನ್ನೆಲ್ಲಾ ಇಲ್ಲಕೊಡಲಾಗುವುದಿಲ್ಲ. ಬೇಕಾದರೆಕಚೇರಿಗೆ ಬನ್ನಿ ಇಲ್ಲಆರ್.ಟಿ.ಐನಲ್ಲಿ ಕೇಳಿ ಎಂದ ಗುತ್ತಿಗೆದಾರನಿಗೆ ಸಣ್ಣ ನೀರಾವರಿಇಂಜಿನಿಯರ್‍ದೊಡ್ಡಯ್ಯ ಧನಿಗೂಡಿಸಿದ್ದು ವಿಶೇಷವಾದರುಇಲ್ಲಿಅಧಿಕಾರಿಗುತ್ತಿಗೆದಾರನ ಪರವಾಗಿ ನಿಂತಿರುವುದು.ಇಲ್ಲೇನೋ ಭ್ರಷ್ಟಾಚಾರವಾಗಿರುವುದರ ಬಗ್ಗೆ ಅನುಮಾನ ಮೂಡಿಸಿದೆ.

ಎಷ್ಟೋ ಜನ ಮಾರಿಕೊಳ್ಳುತ್ತಾರೆ :

      ಪಂಪ್‍ಸೆಟ್ ತೆಗೆದುಕೊಳ್ಳುವ ಫಲಾನುಭವಿಗಳು ಎಷ್ಟೋ ಜನ ತೆಗೆದುಕೊಳ್ಳುವುದೇ ಇಲ್ಲ ಅವರೆಲ್ಲರು ಮಾರಿಕೊಳ್ಳುತ್ತಾರೆ. ಮುಖ್ಯವಾಗಿ ನೀರು ಬರದೇ ಇರುವ ಬೋರ್‍ವೆಲ್‍ಗಳಿಗೆ ಮೋಟಾರ್‍ ಪಂಪ್‍ಗಳನ್ನು ಅಧಿಕಾರಿಗಳು ಕೊಟ್ಟಿರುತ್ತಾರೆ.ಕೊಟ್ಟನಂತರ ನಮಗೂ ಅದಕೂ ಸಂಬಂಧವೇ ಇಲ್ಲ ಎನ್ನುವಂತೆ ಅಧಿಕಾರಿಗಳು ವರ್ತಿಸುತ್ತಿದ್ದು ಕೊಟ್ಟ ಮೋಟಾರ್‍ ಪಂಪ್‍ಗಳು ಏನಾಗಿವೆ, ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿವೆಯೇ ಇಲ್ಲವೇ, ಏನಾದರು ಅಡಚಣೆಯಾಯಿತೇ, ಅವರೇ ಬಳಸುತ್ತಿದ್ದಾರೋ ಇಲ್ಲಾ ಮಾರಿಕೊಂಡಿದ್ದಾರೋ ಎಂಬುದನ್ನು ಸೌಜನ್ಯಕ್ಕಾದರು ಅಧಿಕಾರಿಗಳು ರೈತರ ಜಮೀನುಗಳಿಗೆ ಬೇಟಿ ಕೊಡದೇ ಇರುವುದು ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯನ್ನು ಪ್ರಶ್ನಿಸುವಂತಿದೆ.

     ಇಷ್ಟೆಲ್ಲಾ ಸಮಸ್ಯೆಗಳ ನಡುವೆ ನಿಂತಿರುವ ಸರ್ಕಾರಿ ಯೋಜನೆಗಳು ಯಾವ ಮಟ್ಟಿಗೆ ಗುತ್ತಿಗೆದಾರರ ಮತ್ತು ಅಧಿಕಾರಿಗಳ ಅಸಡ್ಡೆಯಿಂದ ಏನಾಗುತ್ತಿದೆ ಎಂಬುದನ್ನು ಸರ್ಕಾರ ತಿಳಿದುಕೊಂಡರೆ ರೈತರ ಬಾಳು ಹಸನಾಗುತ್ತದೆ ಇಲ್ಲದಿದ್ದರೆ ವ್ಯವಸಾಯ ಮನೆ ಮಕ್ಕಳೆಲ್ಲಾ ಸಾಯ ಎಂಬ ಮಾತು ನಿಜ ಮಾಡುವುದರಲ್ಲಿ ಸರ್ಕಾರವು ಅಧಿಕಾರಿಗಳ ಜೊತೆ ಕೈಜೊಡಿಸಿದಂತಾಗುವುರೊಂದಿಗೆ ರೈತರ ಆದಾಯ 2 ಪಟ್ಟಾಗುತ್ತದೆಂಬ ಪ್ರಧಾನಿ ಮೋದಿ ಮಾತು ಏನಾಗುತ್ತದೆಯೋ ಕಾಯ್ದು ನೋಡಬೇಕಾದ ಸ್ಥಿತಿಯಲ್ಲಿ ಸಾರ್ವಜನಿಕರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link