ತಿಪಟೂರು :
ನಗರದ ವೈಭವ ಮಾಲ್ ಮತ್ತು ಕಾಮತ್ ಹೋಟೆಲ್ ಮುಂಭಾಗದಲ್ಲಿ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆಇಲ್ಲ. ಇಲ್ಲಿ ರಾತ್ರಿ ವೇಳೆ ಪ್ರಯಾಣಿಕರು ಬಸ್ಸಿಗಾಗಿ ಕತ್ತಲೆಯಲ್ಲಿ ಜೀವಹಿಡಿದು ಕಾಯುವಂತಾಗಿದೆ.
ನಗರದ ಬಸ್ನಿಲ್ದಾಣಕ್ಕೆ ದಿನಪತ್ರಿ ನೂರಾರು ಸರ್ಕಾರಿ ಹಾಗೂ ಖಾಸಗಿ ಬಸ್ಗಳು ಬರುತ್ತವೆ. ಇದರಲ್ಲಿ ಹಗಲು ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ರಾತ್ರಿ ಮತ್ತು ಬೆಳಗಿನ ಜಾವ ಸಂಚರಿಸುವ ಪ್ರಯಾಣಿಕರು ಜೀವವನ್ನು ಕೈನಲ್ಲಿಡಿದು ಬಸ್ಹತ್ತುವ ಪರಿಸ್ಥಿತಿ ನಗರದ ಬಸ್ನಿಲ್ದಾಣದ ಹತ್ತಿರ ನಿರ್ಮಾಣವಾಗಿದೆ. ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದೆ ಪಕ್ಕದಲ್ಲಿ ಸಣ್ಣ ಸದ್ದಾದರೂ ಪ್ರಯಾಣಿಕರು ಬೆಚ್ಚಿಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಹಿಳೆಯರ ಸ್ಥಿಯನ್ನಂತು ಕೇಳುವ ಹಾಗಿಲ್ಲ. ಬಸ್ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ವಿಪರೀತವಾಗಿ ನಾಯಿಗಳ ಕಾಟವಿದ್ದು ಎಷ್ಟು ಜನ ಬೆಳಗಿನ ವೇಳೆಯಲ್ಲಿ ತಮ್ಮ ವಾಹನಗಳನ್ನು ಜೀವವಿದ್ದರೆ ತೆಗೆದುಕೊಂಡರಾಯಿತು ಎಂದು 2 ಪಟ್ಟು ಆಟೋಗಳಿಗೆ ಹಣ ನೀಡಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪೌರಕಾರ್ಮಿಕರು ಎಂದಿನಂತೆ ಬೆಳಗೆದ್ದು ನಾಗರೀಕರು ಮಾಡಿರುವ ಕಸವನ್ನು ತೆಗೆದು ಸುಂದರವಾದ ನಗರ ನಿರ್ಮಾಣಮಾಡಲು ರಸ್ತೆಗಿಳಿದರೆ ಪ್ರತಿದಿನವೂ ಅಮವಾಸ್ಯೆಯ ಕತ್ತಲೆಂದು ತಿಳಿದು ಕೆಲಸವನ್ನು ನಿರ್ವಹಿಸಬೇಕು. ನಗರಸಭೆ ವೃತ್ತದಲ್ಲೇ ಕತ್ತಲು ಆವರಿಸಿದ್ದು ಪೌರಕಾರ್ಮಿಕರು ಕತ್ತಲಲ್ಲೆ ಅಂದಾಜಿನ ಮೂಲಕ ಕಾಲುಹಾಕುತ್ತ ಕಛೇರಿಗೆ ಸಹಿಹಾಕಲು ತೆರಳಬೇಕು. ಇಷೆಲ್ಲಾ ಸಮಸ್ಯೆಗಳಿದ್ದರು ಪೌರಾಯುಕ್ತರು ಬೀದಿದೀಪವನ್ನು ಸರಿಪಡಿಸಬೇಕು. ನಗರಸಭೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಈ ಬಗ್ಗೆ ಕಾಳಜಿವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
