ತಿಪಟೂರು :
ತಾಲ್ಲೂಕಿನ ಗುಡಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಅತ್ತಿಕಟ್ಟೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದು ಕಂಡುಬಂದಿದ್ದು, ರಾಯಲ್ಟಿ ಕಟ್ಟಿದ್ದೇವೆಂದು ಹೇಳಿ ಕೆರೆಯಲ್ಲಿ ಸುಮಾರು 12 ಅಡಿಗೂ ಹೆಚ್ಚು ಮಣ್ಣನ್ನು ತೆಗೆಯಲಾಗುತಿದೆ.
ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರನ್ನು ತುಮಕೂರಿನಿಂದ ಶಿವಮೊಗ್ಗದ ವರೆಗೆ ಚತುಷ್ಪತ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗೆ ಬೇಕಾಗುವ ಮಣ್ಣನ್ನು ಹತ್ತಿರದ ರೈತರ ಹತ್ತಿರ ಎಕರೆಗೆ ಸುಮಾರು 60 ಸಾವಿರಕೊಟ್ಟು ಮಣ್ಣನ್ನು ಗುತ್ತಿಗೆದಾರರು ಖರೀದಿಸುತ್ತಿದ್ದರು. ಆದರೆ ಈ ಮಣ್ಣು ಸಾಲದೇ ಇದ್ದಾಗ ಅಕ್ಕಪಕ್ಕದ ಕೆರೆ ಕಟ್ಟೆಗಳ ಮೇಲೆ ಕಣ್ಣುಹಾಕಿದ ಗುತ್ತಿಗೆದಾರರು ಸಣ್ಣನೀರಾವರಿ ಇಲಾಖೆಗೆ ಹಣವನ್ನು ರಾಜಧನವನ್ನು ಕಟ್ಟಿದ್ದೇನೆ ಎಂದು ಹೇಳಿ ಅನೇಕ ಕೆರೆಕಟ್ಟೆಗಳಲ್ಲಿ ಸುಮಾರು 10-12 ಅಡಿಗೂ ಹೆಚ್ಚಿನ ಆಳವನ್ನು ಮಾಡಿ ಮಣ್ಣನ್ನು ತಗೆಯುತ್ತಿದ್ದಾರೆ.
ಇದರ ಬಗ್ಗೆ ಸ್ಥಳೀಯರು ಗುಡಿಗೊಂನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ತಹಸೀಲ್ದಾರ್ ಗಮನಕ್ಕೆ ತಂದಾಗ ಆರಕ್ಷಕರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳ ಪರೀಶೀಲಿಸಿದಾಗ ನಾವು ರಾಜಧನವನ್ನು ಕಟ್ಟಿದ್ದೇವೆಂದು ತಿಳಿಸಿದ ಗುತ್ತಿಗೆದಾರರ ಕಡೆಯವರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುವ ಭರದಲ್ಲಿ ಆ ರಸ್ತೆಗೆ ಬೇಕಾಗುವ ಮಣ್ಣನ್ನು ತೆಗೆದುಕೊಂಡು ಹೋಗಲು ವಾಹನಗಳಲ್ಲಿ ರಸ್ತೆಯ ಮಿತಿಗಿಂತ ಹೆಚ್ಚಿನ ಮಣ್ಣನ್ನು ತುಂಬಿಕೊಂಡು ಹೋಗುತ್ತಿರುವುದರಿಂದ ಕೆಲದಿನಗಳ ಹಿಂದೆ ನಿರ್ಮಿಸಿದ್ದ ತಿಪಟೂರು- ಗುಡಿಗೊಂಡನಹಳ್ಳಿ- ಹೊನ್ನವಳ್ಳಿ ರಸ್ತೆಯು ಈಗಾಗಲೇ ಶಿಥಿಲಾವಸ್ಥೆಯನ್ನು ತಲುಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅತ್ತಿಕಟ್ಟೆಯಯಲ್ಲಿ ಮಣ್ಣು ತೆಗೆಯುತ್ತಿರುವುದುರಿಂದ ಗುಂಡಿಗಳಾಗುತ್ತಿವೆ ಹಾಗೂ ಗುತ್ತಿಗೆದಾರನಿಗೆ ಯಾವಯಾವ ಕೆರೆಗಳಲ್ಲಿ ರುವಂತೆ ತಿಳಿಸಿದ್ದೇವೆ.
– ಚಂದ್ರಶೇಖರ್ ತಹಸೀಲ್ದಾರ್, ತಿಪಟೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
