ಪ್ರಗತಿ ವರದಿ ಫಲಶೃತಿ : ಎಚ್ಚೆತ್ತ ಬೆಸ್ಕಾಂ ಅಧಿಕಾರಿಗಳು

 ತಿಪಟೂರು : 

      ಫೆಬ್ರವರಿ 06ರಂದು ಪತ್ರಿಕೆಯಲ್ಲಿ ನಾನಾ ಸಂಕಷ್ಟ ತಂದೊಡ್ಡಿರುವ ಕಲ್ಲುಕ್ವಾರಿ ಅಡಿಬರದಹಲ್ಲಿ ಪ್ರಕಟವಾಗಿದ್ದ ವರದಿಯಲ್ಲಿ ರೈತರಿಗೆ ಒಂದು ನ್ಯಾಯ, ಉದ್ಯಮಿಗಳಿಗೆ ಒಂದು ನ್ಯಾಯ ರೈತರು ತಮ್ಮ ದೈನಂದಿನ ಉದ್ದೇಶಕ್ಕೂ ಇಲ್ಲ ಯಾವುದಾರು ಉದ್ದೇಶಕ್ಕೆ ವಿದ್ಯುತ್ ಎಳೆದುಕೊಂಡರೆ ಅವರಿಗೆ ಹಲವಾರು ದಂಡವನ್ನು ವಿಧಿಸುವ ಬೆಸ್ಕಾಂ ಅಧಿಕಾರಿಗಳು ಇಲ್ಲಿಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಸುಮಾರು 1 ಕಿಲೋ ಮೀಟರ್ ದೂರದಿಂದ ನೇರವಾಗಿ ವಿದ್ಯುತ್ ಪರಿವರ್ತಕದಿಂದೇ ವಿದ್ಯುತ್ ಕದಿಯುತ್ತಿದ್ದರೂ ಕಣ್ಮುಚ್ಚಿಕುಳಿತಿದ್ದಾರೆ ಇದರಿಂದ ರೈತರಿಗೆ ಒಂದು ಕಾನೂನು ಉದ್ಯಮಿಗಳಿಗೆ ಒಂದು ಕಾನೂನು ಎಂಬಂತಾಗಿದೆ ಎಂದು ವರದಿಯಾಗಿತ್ತು.

       ಸೋಮವಾರ ಕೆಪಿಟಿಸಿಎಲ್‍ನ ಎ.ಇ.ಇ ಜಯಪ್ಪ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಅಕ್ರಮವಾಗಿ ಪಡೆದಿದ್ದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ತಾತ್ಕಾಲಿಕವಾಗಿ ಷೆಡ್‍ಗಳಿಗೆ ಪಡೆದಿದ್ದ ವಿದ್ಯುತ್ ಬಳಸುವಂತೆ ತಿಳಿಸಿದ್ದಾರೆ. ಅದೇರೀತಿ ಪತ್ರಿಕಾ ವರದಿಯಿಂದ ಎಚ್ಚೆತ್ತು ಅಕ್ಕಪಕ್ಕದ ಕಲ್ಲಿನ ಕ್ವಾರಿಗಳಿಗೂ ಭೇಟಿ ನೀಡಿದ್ದಾರೆ. ಇದೇ ರೀತಿ ಎಲ್ಲಾ ಅಧಿಕಾರಿಗಳೂ ಭೇಟಿ ನೀಡಿ ತಮಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರ ಒತ್ತಾಸೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap