ತಿಪಟೂರು : ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ

 ತಿಪಟೂರು : 

     ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮುಖಾಂತರಜಾರಿಗೆತಂದಿರುವರೈತ ಕಾಯಿದೆಗಳನ್ನು ತಕ್ಷಣವೇ ಹಿಂದೆ ತೆಗೆದುಕೊಳ್ಳಬೇಕೆಂದು ಈ ಬಗ್ಗೆ ದೆಹಲಿಯಲ್ಲಿ ನಡೆಯುತ್ತಿರುವರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕರಾಜ್ಯರೈತ ಸಂಘ (ರಿ) ರಾಜ್ಯಾಧ್ಯಕ್ಷ ಜಿ.ಎ.ಲಕ್ಷೀನಾರಾಯಣಗೌಡ ತಿಳಿಸಿದರು.

      ನಗರದ ಹಾಸನವೃತ್ತದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದಗ್ರಾಮ ಸರ್ವೋದಯ ಸಮಾವೇಶದಲ್ಲಿ ಮಾತನಾಡಿದಅವರುಕರ್ನಾಟಕರಾಜ್ಯರೈತ ಸಂಘವು ರಾಜ್ಯದರೈತ ಸಮುದಾಯವನ್ನುತಲೆತಲಾಂತರದಿಂದ ಭಾದಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ನಾಲ್ಕು ದಶಕಗಳಿಂದಲೂ ನಿರಂತರವಾಗಿ ಹೋರಾಡುತ್ತಿದೆ.

      ಗ್ರಾಮೀಣಜನರ ಬದುಕನ್ನು ಸುಧಾರಿಸಲು ಸತತವಾಗಿ ಪ್ರಯತ್ನಿಸುತ್ತಿದೆವೆ, ಪ್ರತಿಯೊಂದುಗ್ರಾಮದಲ್ಲೂರೈತ ಸಂಘ ರಚಿಸುವಗುರಿ ಹೊಂದಿದ್ದುರೈತರನ್ನು ಜಾಗೃತಗೊಳಿಸುತ್ತಾ ರೈತರ ಸಂಘಟನೆಯನ್ನು ಬಲಪಡಿಸಬೇಕೆಂದು ತಿಳಿಸಿದ ಅವರುರೈತರಿಗೆಇತ್ತೀಚಿನ ವರ್ಷಗಳಲ್ಲಿ ಸೂಕ್ತ ಮಳೆ, ಬೆಳೆ, ಬೆಳೆಬಂದರೆ ಬೆಲ ಕುಸಿತ ಹಾಗೂ ಸರ್ಕಾರಗಳ ರೈತವಿರೋಧಿನೀತಿ ಹಾಗೂ ಅನೇಕ ವೈರುಧ್ಯಗಳ ಕಾಲದೊತ್ತಡಕ್ಕೆ ಸಿಲುಕಿ ಕವಲೊಡೆದುರೈತರುದುರ್ಬಲಗೊಳ್ಳುತ್ತಿದ್ದಾನೆ. ಇದಕ್ಕಾಗಿರೈತ ಸಂಘಟನೆಯುಅದೇಕಾಲದಕರೆಗೆಓಗೊಟ್ಟು, ಮತ್ತೆಒಗ್ಗೂಡಿಎಚ್ಚರದ ಹೆಜ್ಜೆಯಿಡುತ್ತಾಮತ್ತೊಂದುಹೊಸ ಸವಾಲುಗಳನ್ನು ಎದುರುಗೊಳ್ಳಲು ಮತ್ತೊಂದು ಮಹಾ ಹೋರಾಟಕ್ಕೆ ಸಿದ್ಧಗೊಳ್ಳಲೇಬೇಕಾದ ಅಗತ್ಯ ಮತ್ತು ಅನಿವಾರ್ಯತೆಯನ್ನು ಮನಗಾಣುತ್ತಿದೆ.

      ರೈತರನ್ನು ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ ಹಾಗೂ ಸಹಬಾಳ್ವೆಯ ಬದುಕಿನತ್ತ ಮುನ್ನಡೆಸಲು ಶ್ರಮಿಸಬೇಕಿದೆ. ಸಾವಿರಾರು ವರ್ಷಗಳಿಂದ ಇಡೀ ಸಮಾಜವನ್ನು ರೋಗಗ್ರಸ್ಥಗೊಳಿಸಿರುವ ರೈತರನ್ನು ವಿಸ್ಪತಿಯ ಹಳ್ಳವಂಡಕ್ಕೆ ತಳ್ಳಿ ಅವರ ನರಕಯಾತನೆಯ ಬದುಕಿಗೆ ಮೂಲ ಕಾರಣವಾಗಿರುವ, ಸಾಮಾಜಿಕ ರೋಗಗಳಾದ ಅಜ್ಞಾನ, ಅಸಮಾನತೆ, ಅಸ್ಪಶ್ಯತೆ ಹಾಗೂ ಮೌಡ್ಯಾಚರಣೆಗಳನ್ನು ಬೇರುಸಮೇತಕಿತ್ತೊಗೆಯಬೇಕುಹಾಗೂ ಎಲ್ಲರ ಸಮಾನ ಎಳೆಯ ಸಮಸಮಾಜನಿರ್ಮಾಣದಗುರಿಯೊಂದಿಗೆ ಸ್ವಾವಲಂಬಿ, ಸದೃಡ, ಸಮೃದ್ಧ ಹಾಗೂ ಆರೋಗ್ಯಪೂರ್ಣವಾದ ಆದರ್ಶಗ್ರಾಮಗಳನ್ನು ಕಟ್ಟುವಆಶಯ ಹೊತ್ತು ಈ ಗ್ರಾಮ ಸರ್ವೋದಯ ಚಳುವಳಿಯು ಸಮಾಜವನ್ನು ಸಮಗ್ರವಾಗಿ ಒಳಗೊಂಡು ಸಾಗಬೇಕು, ಈ ನಿಟ್ಟಿನಲ್ಲಿಕರ್ನಾಟಕರಾಜ್ಯರೈತಸಂಘವು ತಾಲ್ಲೂಕಿನಎಲ್ಲಾರೈತರು, ರೈತರ ಹಿತಚಿಂತಕರು, ರೈತ ಹೋರಾಟದ ಮುಖಂಡರು, ಪ್ರಗತಿಪರ ರೈತರುಗಳು, ರೈತರ ಏಳಿಗೆಗೆ ರೈತರನ್ನು ಹುರಿದುಂಬಿಸುವವರು, ರೈತತಜ್ಞರು, ಪ್ರಜ್ಞಾವಂತಯುವ ಮತ್ತು ವಯಸ್ಕ ರೈತರುಗಳನ್ನು ಒಗ್ಗೂಡಿಸುವಕಾರ್ಯವನ್ನುರೈತಸಂಘಮಡುತ್ತಿದೆಎಂದು ತಿಳಿಸಿದರು ಮತ್ತುಏಪ್ರಿಲ್ 14 ರಂದುತಿಪಟೂರಿನಲ್ಲಿಒಂದುರೈತ ಸಮಾವೇಶವನ್ನು ಮಾಡುವುದಾಗಿ ತಿಳಿಸಿದರು.

      ನಂತರ ಸಭೆ ನಡೆಸಿದ ಹಾಸನ ವೃತ್ತದಿಂದಹೊನ್ನವಳ್ಳಿ ಮತ್ತು ಕಸಬಾ ಹೋಬಳಿ ರೈತರ ನೀರಾವರಿ ಬಗ್ಗೆ ಸಮಸ್ಯೆ ಬಗೆಹರಿಸುವುದಕ್ಕೆಗ್ರಾಹಕರಿಗೆ ಮತ್ತುರೈತರ ಸಮಸ್ಯೆಡೀಸಲ್ ಮತ್ತು ಪೆಟ್ರೋಲ್‍ದರ ಹೆಚ್ಚಳದ ಬಗ್ಗೆ ಹಾಗೂ ತಿಪಟೂರನ್ನುಜಿಲ್ಲೆಯನಾಗಿಮಾಡುವುದುರೈತರು ಬೆಳೆದ ಬೆಳೆ, ಕೊಬ್ಬರಿ, ತೆಂಗು, ತರಕಾರಿ, ಬೆಳೆಯನ್ನು ಎ.ಪಿ.ಎಂ.ಸಿ, ವೈಜಾನಿಕ ಬೆಲೆಗೆ ಕರಿದಿಮಾಡುವುದುತಾಲೂಕಿನಲ್ಲಿಕಲ್ಲುಗಣಿಗಾರಿಕೆಯಿಂದಕುಡಿಯುವ ನೀರು, ಕೆರೆಕಟ್ಟೆ ನೀರು, ಕಲ್ಲುಷಿತ, ಮನೆಗಳಿಗೆ ಹಾನಿ ಮತ್ತುಆರೋಗ್ಯಹಾನಿ ಪರಿಸರ ಮಾಲಿನ್ಯ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕುಎಂಬುದಾಗಿ ಎ.ಪಿ.ಎಂ.ಸಿ ಮಾರುಕಟ್ಟೆಯ ವರೆಗೂಮೆರವಣಿಗೆಜಾಥಾ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link