ತಿಪಟೂರು : ರಸ್ತೆ ಮಧ್ಯದಲ್ಲಿ ಗುಂಡಿ : ಮುಚ್ಚುವವರೆ ಇಲ್ಲ

 ತಿಪಟೂರು :

      ಪಟ್ಟಣದ ವಾರ್ಡ್ ನಂಬರ್ 02 ರ ಕೋಟೆ ಪೌಂಡ್ ರಸ್ತೆಯಲ್ಲಿ ಸುಮಾರು 9 ತಿಂಗಳ ಚರಂಡಿ ನಿರ್ಮಾಣ ಮಾಡುವಾಗ ಸಾರ್ವಜನಿಕರು ಓಡಾಡುವ ರಸ್ತೆಯ ಮಧ್ಯದಲ್ಲಿ ಸ್ಲ್ಯಾಬ್ ಓಪನ್ ಮಾಡಿ ಹಾಗೆಯೆ ಬಿಟ್ಟಿದ್ದಾರೆ.

      ಇದರ ಬಗ್ಗೆ ವಾರ್ಡ್ ನಂಬರ್ 2 ರ ನಗರಸಭಾ ಸದಸ್ಯ ಡಾ. ಓಹಿಲ, ತರಕಾರಿ ಗಂಗಾಧರ್ ಅವರು ಸಂಬಂಧಪಟ್ಟ ಎಂಜಿನಿಯರ್ ಹಾಗೂ ಎಇಇ ಅವರನ್ನು ಸ್ಥಳಕ್ಕೆ ಕರೆಸಿ ಇದನ್ನು ತುರ್ತಾಗಿ ಸರಿಪಡಿಸಿಕೊಡಿ ಎಂದು ಕೋರಿದ್ದರು. ಸುಮಾರು ಬಾರಿ ಮೌಖಿಕವಾಗಿ ಹೇಳಿದರೂ ಸಹ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಇದರಿಂದ ಅಲ್ಲಿ ವಾಸಮಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಹೊರತು ಅಧಿಕಾರಿಗಳಿಗೆ ಅಲ್ಲ.

      ಸುಮಾರು ಒಂಬತ್ತು ತಿಂಗಳಿಂದ ರಸ್ತೆ ಮಧ್ಯದಲ್ಲಿ ಇರುವ ಸ್ಲ್ಯಾಬ್ ಮಧ್ಯ ಓಪನ್ ಆಗಿರುವ ಜಾಗವನ್ನು ಮುಚ್ಚಿಲ್ಲ. ಇದನ್ನು ತುರ್ತಾಗಿ ಸರಿಪಡಿಸಿ, ಸಾರ್ವಜನಿಕರಿಗೆ ಸಹಾಯ ಮಾಡಲಿ ಎಂದು ಕೋರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link