ತಿಪಟೂರು :
ನಗರದ ರಾಮಮಂದಿರ ರಸ್ತೆಯಲ್ಲಿ ಸಿಟಿ ಯುನಿಯನ್ ಬ್ಯಾಂಕ್ ಸಮೀಪ ಈ ವಿದ್ಯುತ್ ಪರಿವರ್ತಕದ ತಂತಿಗಳು, ಬಲಿ ಪಡೆಯಲು ಕಾಯುತ್ತಾ ಇರುವಂತಿದೆ ಅಪಯ ಆಹ್ವಾನಿಸಿವೆ.
ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಮತ್ತು ವಾಹನಗಳು ಸಂಚರಿಸುತ್ತಿದ್ದು ಸ್ವಲ್ಪ ಹೆಚ್ಚುಕಡಿಮೆಯಾದರು ಪ್ರಾಣಾಪಾಯಾವಾಗುತ್ತದೆ. ಈ ಬಗ್ಗೆ ಗೊತ್ತಿದ್ದರೂ ಸಹ ಇದರಿಂದ ಏನು ಅಪಘಾತವಾಗಿಲ್ಲ ಆದಾಗ ನೋಡೋಣ ಎಂಬ ಉದಾಸೀನ ಬಾವವನ್ನು ಕೆ.ಪಿ.ಟಿ.ಸಿಎಲ್ ತೆಗೆದುಕೊಂಡಿರುವಂತೆ ಕಾಣುತ್ತಿದೆ. ಯಾವಾಗಲು ತೊಂದರೆಯಾಯಿತು ಎಂಬ ಭಯದಲ್ಲಿಯೇ ಪಾದಾಚಾರಿಗಳು ಓಡಾಟ ನಡೆಸುತ್ತಿದ್ದಾರೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/03/9-TPR2-e1615357177125.jpeg)