ತಿಪಟೂರು :
ತಾಲ್ಲೂಕಿನ ಹೊನ್ನವಳ್ಳಿ ಗ್ರಾಮ ಪಂಚಾಯಿತಿಚುನಾವಣೆಯನ್ನುಮತ್ತೆಬಹಿಷ್ಕರಿಸಿದ್ದು ನೀರು ಬರುವವರೆಗೂ ನಮ್ಮಒಗ್ಗಟ್ಟನ್ನುಯಾರು ಮುರಿಯರಾರರು ಎಂಬ ಸೂಚನೆಯನ್ನು ಹೊನ್ನವಳ್ಳಿಯ ಜನತೆ ಮತ್ತೆ ತೋರಿಸಿದ್ದಾರೆ.
ಕಳೆದ ಲೋಕಸಭಾಚುನಾವಣೆ ವೇಳೆ ನಮಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಇಲ್ಲ, ಹೇಮಾವತಿ ಮತ್ತುಎತ್ತಿನ ಹೊಳೆ ಯೋಜನೆಗೆ ಭೂಮಿಕೊಟ್ಟಿದ್ದೇವೆಆದರೆ ದೀಪದ ಬುಡದಲ್ಲಿಕತ್ತಲುಎಂಬಂತೆ ನಮಗೆ ನೀರು ಸಿಗುತ್ತಿಲ್ಲವೆಂದು ಚುನಾವಣಾ ಬಹಿಷ್ಕಾರ ಮಾಡುತ್ತೇವೆಂದು ಘೊಷಿಸಿದ್ದರೆ.ಆದರೆರಾಜಕೀಯ ಮೇಲಾಟದಲ್ಲಿಇದ್ದಗುಂಪನ್ನು ಹೊಡೆದು ನಮ್ಮನ್ನುಚುನಾವಣೆಯಲ್ಲಿ ಗೆಲ್ಲಿಸಿದರೆ ನಿಮಗೆ ನೀರುಕೊಡುತ್ತೇವೆಂದು ಸಭೆಗಳು ನಡೆದು ಮತ ಪಡೆದ ರಾಜಕಾರಣಿಗಳು ಮತ್ತೆತಿರುಗಿಯುಕ್ಷೇತ್ರವನ್ನು ನೋಡಿಲ್ಲ ಹೀಗಾಗಿ ಈ ಬಾರಿಯಗ್ರಾಮ ಪಂಚಾಯಿತಿಯಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
ನಾವು ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದು, ಕೆಲವು ಶುದ್ದಕುಡಿಯುವ ನೀರಿನ ಘಟಕಗಳು ನೀರಿಲ್ಲದೇ ನಿಂತಿವೆ ಹಾಗೂ ಜನುವಾರುಗಳ ಸ್ಥಿತಿಯನ್ನಂತು ಕೇಳುವಹಾಗಿಲ್ಲ ಇಂತಹ ಸಂದಿಗ್ಧಪರಿಸ್ಥಿತಿಯಲ್ಲಿ ನಮ್ಮ ಕೆರೆಗಳ ಪಾಲಿನ ನೀರನ್ನು ಸಹ ಸೂಕ್ತವಾಗಿ ನೀಡಿಲ್ಲಇನ್ನು ಬಿಟ್ಟಿರುವ ನೀರು ನೀರು ಬೀಳುವ ಸ್ಥಳದಿಂದ ಕದಲುತ್ತಿಲ್ಲ ಹಾಗೂ ನಮ್ಮ ಕೆರೆಗಳಿಗೆ ಎಷ್ಟು ನೀರು ಹಂಚಿಕೆಯಾಗಿದೆ, ಅಷ್ಟು ನೀರು ಬಂದಿದೆಯೇಎಂಬುದು ಸಹ ತಿಳಿಯದೆ ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ನಮ್ಮ ಮನವಿಯದನಿಯು ಕೇಳುತ್ತಿಲ್ಲವೆ ಇಲ್ಲಇವರೇನು ಮಾಡುತ್ತಾರೆ ನಮ್ಮನ್ನು ಕೇಳುವವರ್ಯಾರು ಎಂದು ಸುಮ್ಮನಾಗಿರುವಂತಿದೆ ಅದಕ್ಕಾಗಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಎನ್ನುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
