ತಿಪಟೂರು : ಮೂವರು ಬಾಲಕರು ನೀರುಪಾಲು

 ತಿಪಟೂರು : 

ಪ್ರಪಂಚಕ್ಕೆಲ್ಲಾ ಗುಡ್‍ಫ್ರೈಡೇ ಆದರೆ ತಿಪಟೂರಿನ ಶಾರದಾನಗರಕ್ಕೆ ಮಾತ್ರ ಬ್ಲಾಕ್ ಪ್ರೈಡೆಯಾಗಿದೆ. ಶಾರದ ನಗರದ ಮೂವರು ಬಾಲಕರು ಈಜಲು ಹೋದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣಘಟನೆಜರುಗಿದ್ದು ಪಾಲಕರ, ಸ್ನೇಹಿತರ ಮತ್ತು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.

      ಶಾಲೆಗೆ ರಜೆಇದ್ದಕಾರಣ ಬೆಳಿಗ್ಗೆ 6 ಜನ ಸ್ನೇಹಿತರು ಮಾರನಗೆರೆ ಕೆರೆಯಲ್ಲಿ ಈಜಾಲು ತೆರಳಿದ್ದರು. ಈ ಸಂದರ್ಭದಲ್ಲಿ ಅರೆಬರೆ ಈಜುತಿಳಿದ್ದ ಬಾಲಕರು ನೀರಿಗೆ ಇಳಿದಾಗ ಒಬ್ಬ ಬಾಲಕ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿ ಅವನನ್ನು ರಕ್ಷಿಸಲು ಹೊದಮತ್ತಿಬ್ಬರು ಆತನನ್ನು ರಕ್ಷಣೆ ಮಾಡಲು ಆಗದೆತಾವು ಸಹ ನೀರನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

      ಮೃತ ಬಾಲಕರು ಶಾರದನಗರ ನಿವಾಸಿಗಳಾದ ತರುಣ್ (11) ದೀಪಕ್ (13) ಕೌಶಿಕ್ (13) ಎಂದು ತಿಳಿದು ಬಂದಿದೆ.
ಘಟನಾಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಮೃತ ಬಾಲಕರ ಶವಗಳನ್ನು ಹೊರತೆಗೆದು ಸರ್ಕಾರಿ ಆಸ್ವತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap