ತಿಪಟೂರು :
ನಗರದ ಗಾಂಧಿನಗರದಲ್ಲಿ ಮಚ್ಚಿನಿಂದ ತೀರ್ವವಾಗಿ ಹಲ್ಲೆಮಾಡಿ ನೇರವಾಗಿ ನಗರ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿಯೊಬ್ಬ ಶರಣಾದ ಘಟನೆ ಸೋಮವಾರ ಸಂಜೆ ಜರುಗಿದೆ.
ಕೊರೋನಾದ ಆರ್ಭಟದ ನಡುವೆಯೆ ಯುಗಾದಿಯ ಹಬ್ಬಕ್ಕೆ ಸರಕುಗಳನ್ನು ಕೊಳ್ಳುತ್ತಿದ್ದ ಜನೆತೆ ಒಂದು ಕಡಯಾದರೆ ಗಾಂಧಿನಗರದ ಅಂಬೇಡ್ಕರ್ ಭವನದ ಹತ್ತಿರ ತಮಿಳು ಕಾಲೋನಿ ನಿವಾಸಿ ಸೀಮೆಎಣ್ಣೆ ವೆಂಕಟೇಶ್ (45) ಎಂಬಾತನು ಸ್ಥಳೀಯ ನಿವಾಸಿ ಸಣ್ಣ ಮಂಜ(28) ಎಂಬುವವನ ಮೇಲೆ ಮಚ್ಚಿನಿಂದ ತೀರ್ವವಾಗಿ ಹಲ್ಲೆನಡೆಸಿದ್ದಾನೆ ನಂತರ ನಗರ ಪೊಲೀಸ್ ಠಾಣೆಗೆ ತೆರಳಿ ಇದೆ ಮಚ್ಚಿಂದ ಸಣ್ಣ ಮಂಜನಿಗೆ ಹೊಡೆದಿದ್ದು ಅವನು ಅಲ್ಲಿಯೆ ಬಿದ್ದಿದ್ದಾನೆಂದು ಶರಣಾಗಿದ್ದಾನೆ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಪ್ರಕರಣವು ನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
