ತಿಪಟೂರು : ಅಧಿಕಾರಿಗಳ ಬೇಜವಾಬ್ದಾರಿಗೆ ರೈತರ ಅಲೆದಾಟ.

ಹೊನ್ವವಳ್ಳಿ : 

     ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ರೈತಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಕೊಡುವ ಟಾರ್ಪಾಟಲ್ ಪಡೆಯಲು ಬೆಳಿಗ್ಗೆ ಯಿಂದಲೇ ಬಂದಿದ್ದ ರೈತರಿಗೆ ಸಂಜೆ,ನಾಳೆ ಬನ್ನಿ ಟಾರ್ಪಾಟಲ್ ವಿತರಿಸಲಾಗುತ್ತದೆ ಎಂದು ಕೃಷಿಕೇಂದ್ರದ ನೌಕರರಾದ ನೇತ್ರಾವತಿ ತಿಳಿಸಿದಾಗ ರೈತರು ಸಿಟ್ಟಾದ ಘಟನೆ ನಡೆಯಿತು.

      ಕಳೆದ ಕೆಲವು ದಿನಗಳಿಮದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಲ್ ವಿತರಿಸಲಾಗುತ್ತದೆ ಎಂದು ತಿಳಿದು ರೈತರು ಏನೇನು ದಾಖಲೆಗಳು ಬೇಕು ಎಂದಾಗ ಕೇವಲ ಆಧಾರ್‍ಕಾರ್ಡ್ ಸಾಕೆಂದು ತಿಳಿಸಿದ ಕೃಷಿ ಕೇಂದಅಧಿಕಾರಿಯ ಮಾಹಿತಿಯಂತೆ ಇಂದು ಬೆಳಿಗ್ಗೆ ಇಂದಲೇ ಕೃಷಿ ಕೇಂದ್ರದ ಹತ್ತಿರ ರೈತರು ಜಮಾವಣೆ ಗೊಂಡಿದ್ದರು ಆದರೆ ಬೆಳಿಗ್ಗೆ ಇಂದ ಸುಮ್ಮನೆ ಇದ್ದಅಧಿಕಾರಿ ಮದ್ಯಾಹ್ನದ ವೇಳೆಗೆ ಟಾರ್ಪಾಲ್ ಪಡೆಯಲು ಆಧಾರ್‍ಕಾರ್ಡ್ ಜೊತೆಗೆ ಪಹಣಿ ಬ್ಯಾಂಕ್ ಪಾಸ್‍ಪುಸ್ತಕ ಮತ್ತಿತರೆ ದಾಖಲೆಗಳನ್ನು ತರಬೇಕೆಂದು ರೈತರಿಗೆ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ರೈತರು ನಾವು ಅವತ್ತಿನಿಂದಲೂ ಕೇಳಿದಾಗ ಕೇವಲ ಆದಾರ್‍ಕಾರ್ಡ್ ಸಾಕೆಂದು ಹೇಳಿದ್ದಿರಾ ಈಗ ಏಕೆ ಎಲ್ಲವೂ ಬೇಕು ಎಂದಿದ್ದಕ್ಕೆ ನಾವು ಕಂಪ್ಯೂಟರ್‍ನಲ್ಲಿ ನೋಡಿರಲಿಲ್ಲ ಈಗ ಎಲ್ಲಾ ದಾಖಾಲೆಗಳನ್ನು ಬೇಕೆಂದು ತಿಳಿಸಿದ್ದಾರೆ ಆದ್ದರಿಂದ ನಾಳೆ ಎಲ್ಲಾ ದಾಖಲೆಗೊಂದಿಗೆ ಬಂದರೆ ಟಾರ್ಪಾಲ್ ವಿತರಿಸುತ್ತೇವೆ ಎಂದು ಬೇಜವಾಬ್ದಾರಿಯಿಂದ ಅಧಿಕಾರಿಗಳು ಉತ್ತರಿಸಿದಾರೆ.

       ನಾವು ದಾಖಲೆಗಳನ್ನು ಕೊಡುತ್ತೇವೆ ಆದರೆ ಸೂಚನಾ ಫಲಕದಲ್ಲಿ ಯಾವ ಯಾವ ದಾಖಲೆಗಳು ಬೇಕು ಎನ್ನುವುದನ್ನು ಹಾಕುವುದನ್ನು ಬಿಟ್ಟು ಕೇವಲ ಆಧಾರ್‍ಕಾರ್ಡ್ ಸಾಕೆಂದು ಹೇಳಿ ಈಗ ಕಂಪ್ಯೂಟರ್‍ನಲ್ಲಿದೆ ಅದಕ್ಕಾಗಿ ಎಲ್ಲಾ ದಾಖಲೆಗಳು ಬೇಕು ಎಂದರೇ ಹೇಗೆ ಸೂಕ್ತ ವಿದ್ಯುತ್ ಇದ್ದಾಗ ಕೃಷಿ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ ಇಂತಹ ಸಂದರ್ಭದಲ್ಲಿ ನಾವು ಟಾರ್ಪಾಲ್ ತೆಗೆದುಕೊಂಡು ಹೋಗಲು 2 -3 ದಿನ ಅಲೆದರೆ ನಮಗೆ ಆಗುವ ನಷ್ಟವನ್ನು ಕೊಡುವವರು ಯಾರು ಎಂದು ರೈತರು ಆಕ್ರೋಷ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link