ಪೌರಕಾರ್ಮಿಕರು ಮತ್ತು ಆರಕ್ಷಕರ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ

ತಿಪಟೂರು:

     ಕೊರೊನಾ ಮೊದಲನೇ ಅಲೆ, ಎರಡನೇ ಅಲೆ ಯಾವುದೇ ಇರಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪ್ರಜೆಗಳ ಸೇವೆಯೇ ನಮ್ಮ ಆದ್ಯ ಕರ್ತವ್ಯವೆಂದು ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಮತ್ತು ಆರಕ್ಷಕರ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲವೆಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.

      ತಿಪಟೂರು ಕಾಂಗ್ರೆಸ್ ವತಿಯಿಂದ ನಗರಸಭೆ ಹಾಗೂ ಡಿ.ವೈ.ಎಸ್ಪಿ ಕಛೇರಿ ಆರವಣದಲ್ಲಿ ನಗರದ ಪೌರ ಕಾರ್ಮಿಕರಿಗೆ ಮತ್ತು ಆರಕ್ಷಕರಿಗೆ ಜೀವರಕ್ಷಕ ಫೇಸ್‍ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಮಾತನಾಡಿದ ಅವರು ಜೀವ ಇದ್ದಾಗ ರಕ್ಷಿಸಿಕೊಳ್ಳ ಬೇಕೆ ವಿನಃ, ಜೀವ ಹೋದ ಮೇಲೆ ಎಷ್ಟು ಬೇಡಿದರು ದಕ್ಕುವುದಿಲ್ಲ. ಇಂತಹ ಸಂದರ್ಭದಲ್ಲಿ ಜನರಿಗಾಗಿ ನಾವು ಪ್ರಾಣಕೊಡಲು ಸಿದ್ದರೆಂದು ಪೌರ ಕಾರ್ಮಿಕರು ಮತ್ತು ಆರಕ್ಷಕರು ಸೇವೆಸಲ್ಲಿಸುತ್ತಿರುವುದು ಶ್ಲಾಘನೀಯವೆಂದರು.

ಆರಕ್ಷಕರೊಂದಿಗೆ ಸಹಕರಿಸಿ :

      ಆರಕ್ಷಕರು ಸಹ ಮನುಷ್ಯರೇ ಅವರೊಂದಿಗೆ ನೀವು ಇಲ್ಲಸಲ್ಲದ ಕಾರಣಗಳನ್ನು ಹೇಳಿಕೊಂಡು ಪದೇಪದೇ ರಸ್ತೆಗೆ ಇಳಿಯಬೇಡಿ, ಇದರಿಂದ ಆರಕ್ಷಕರಿಗೆ ಕಿರಿಕಿರಿಯಾಗುತ್ತದೆ. ನಿಮಗೆ ಆರಕ್ಷಕರೊಬ್ಬರೇ ಕಾಣುತ್ತಾರೆ. ಆದರೆ ಆರಕ್ಷಕರಿಗೆ ನಿಮ್ಮಂತಹ ಸಾವಿರಾರು ಜನರ ಸಮಸ್ಯೆಗಳನ್ನು ಕೇಳಿಕೇಳಿ ಅವರ ತಾಳ್ಮೆಯೂ ಕಳೆದಿರುತ್ತದೆ ಹಾಗೂ ಅವರ ರಕ್ತದೊತ್ತಡವು ಹೆಚ್ಚಾಗಿರುತ್ತದೆ ಇಂತಹ ಸಂದರ್ಭದಲ್ಲಿ ಅವರಿಗೆ ಸಿಟ್ಟು ಬರುವುದು ಸಹಜ ಆದ್ದರಿಂದ ನೀವು ಸಹ ಚಿಕ್ಕಪುಟ್ಟ ಕಾರಣಗಳನ್ನು ಹೇಳಿಕೊಂಡು ರಸ್ತೆಗಿಳಿಯದೆ ಮನೆಯಲ್ಲಿದ್ದರೆ ನೀವು ಕ್ಷೇಮ, ಅವರು ಕ್ಷೇಮವಾಗಿರುತ್ತಾರೆ ರಸ್ತೆಗಿಳಿಯುವ ಮೊದಲು ನಿಮ್ಮ ಕುಟುಂಬವನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಕರೆನೀಡಿದರು.

      ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ 130 ಹಾಗೂ ಆರಕ್ಷಕ ಇಲಾಖೆಗೆ 55 ಫೇಸ್‍ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ಕೆ.ಪಿ.ಸಿ.ಸಿ ಹಾಗೂ ನಗರಸಭಾ ಸದಸ್ಯ ವಿ.ಯೋಗೀಶ್, ತಾ.ಪಂ ಸದಸ್ಯ ಹಾಗೂ ಮಾಜಿ ತಾ.ಪಂ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಪ್ರಕಾಶ್, ಲೋಕನಾಥ್ ಸಿಂಗ್, ವೃತ್ತ ನಿರೀಕ್ಷಕರಾದ ಜಯಲಕ್ಷ್ಮಿ ಸದಾಶಿವ್, ಶಿವಕುಮಾರ್, ಪಿ.ಎಸ್.ಐಗಳಾದ, ಕೃಷ್ಣಕುಮಾರ್, ದ್ರಾಕ್ಷಾಯಿಣಿ, ಪೌರಾಯುಕ್ತ ಉಮಾಕಾಂತ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link