ಭಾರತ್ ಬಂದ್ ಹಿನ್ನೆಲೆ 4 ಶತಾಬ್ದಿ ರೈಲುಗಳ ಸಂಚಾರ ರದ್ದು!!

ನವದೆಹಲಿ :

     ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ಹಲವೆಡೆ ರೈಲು ಸಂಚಾರ ರದ್ದುಗೊಂಡಿದೆ.

      ಕೃಷಿ ಕಾಯ್ದೆಗೆ ವಿರೋಧ ಮತ್ತು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಭಾರತೀಯ ಕಿಸಾನ್ ಮೋರ್ಚಾ ಭಾರತ್ ಬಂದ್ ಗೆ ಕರೆ ನೀಡಿದ್ದು, ಇಂದು 32 ಪ್ರದೇಶಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಯಾಗಿದ್ದು, 4 ಶತಾಬ್ದಿ ರೈಲುಗಳು ರದ್ದಗೊಂಡಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.

      ಪಂಜಾಬ್, ಹರ್ಯಾಣ ಮತ್ತು ದೆಹಲಿಯ 31 ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಬಾಲ ಮತ್ತು ಫಿರೋಜ್ ಪುರ್ ವಿಭಾಗದಲ್ಲಿ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಉತ್ತರ ವಿಭಾಗದ ರೈಲ್ವೆ ಹೇಳಿದೆ. ಅಮೃತ್ ಸರ್ ನಲ್ಲಿ ಪ್ರತಿಭಟನಾ ನಿರತಾ ರೈತರು ಹಳಿಗೆ ಇಳಿದು ಧರಣಿ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link