ಚೆನ್ನೈ- ಶಿವಮೊಗ್ಗ ನಡುವೆ ರೈಲು ಸಂಚಾರ ಆರಂಭ

ತುಮಕೂರು:

        ಚೆನ್ನೈ ಮತ್ತು ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12691/2 ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಚೆನ್ನೈ ಮತ್ತು ಶಿವಮೊಗ್ಗ ನಡುವೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಕ್ರಮ ಕೈಗೊಂಡಿದ್ದಾರೆ.

     ಈ ಮೂಲಕ ತುಮಕೂರು ಭಾಗದ ಜನರಿಗೆ ಚನ್ನೈಗೆ ನೇರ ಪ್ರಯಾಣ ಬೆಳೆಸುವ ಅವಕಾಶ ದೊರೆತಿದೆ. ಸದರಿ ರೈಲನ್ನು ತುಮಕೂರು, ಅರಸೀಕರೆ, ಕಡೂರು, ಬೀರೂರು, ತರೀಕೆರೆ ಮತ್ತು ಭದ್ರಾವತಿಯಲ್ಲಿ ನಿಲುಗಡೆ ಮಾಡಲಾಗುತ್ತಿದೆ. ತುಮಕೂರು ಸಂಸದರೂ ಆಗಿರುವ ವಿ.ಸೋಮಣ್ಣ ಅವರ ತೀರ್ಮಾನ ದಿಂದ ಈ ಭಾಗದ ಜನರಿಗೆ ಅನುಕೂಲ ವಾಗಿದೆ. ಎಂದು ಶಾಸಕ ಜ್ಯೋತಿ ಗಣೇಶ್ ತಿಳಿಸಿ ಸಚಿವರನ್ನು ಅಭಿನಂದಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap