ತುಮಕೂರು :
ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ 2012 ಬ್ಯಾಚ್ನ ಐಪಿಎಸ್ ಅಧಿಕಾರಿ ರಾಹುಲ್ಕುಮಾರ್ ಶಹಾಪುರವಾದ್ ಗುರುವಾರ ಮಧ್ಯಾಹ್ನ 1ಕ್ಕೆ ಅಧಿಕಾರಸ್ವೀಕರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆಗೊಂಡಿರುವ ನಿರ್ಗಮಿತ ಎಸ್ಪಿ ಡಾ.ಕೋನಂ ವಂಸಿಕೃಷ್ಣ ಅವರು ನೂತನ ಎಸ್ಪಿಗೆ ಹೂಗುಚ್ಚ ನೀಡಿ ಶುಭಕೋರಿದರು. ಈ ವೇಳೆ ಎಎಸ್ಪಿ ಉದೇಶ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಬಳಿಕ ಡಿವೈಎಸ್ಪಿಗಳೊಂದಿಗೆ ಸಭೆ ನಡೆಸಿದ ನೂತನ ಪೊಲೀಸ್ ವರಿಷ್ಠಾಧಿಕಾರಿಗಳು, ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಲ್ಲದೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಅವರನ್ನು ಭೇಟಿಯಾಗಿ ಜಿಲ್ಲೆಯಕಾನೂನು ಸುವ್ಯವಸ್ಥೆ ಕುರಿತು ಸಮಾಲೋಚನೆ ನಡೆಸಿದ್ದಾರೆ.
![](https://prajapragathi.com/wp-content/uploads/2021/06/sp-tumkur-rahul-2-e1623391711484.jpg)
ತುಮಕೂರು ಜಿಲ್ಲೆ ಧಾರ್ಮಿಕ, ಸಾಂಸ್ಕøತಿಕ, ಶಾಂತಿ ಪ್ರಿಯ ಜನರನ್ನು ಹೊಂದಿರುವ ಸುಂದರ ಜಿಲ್ಲೆ. ಇಂತಹ ಜಿಲ್ಲೆಯ ಎಸ್ಪಿಯಾಗಿ ಕಾರ್ಯನಿರ್ವಹಣೆ ಅವಕಾಶ ದೊರೆತಿರುವುದು ಸಂತಸ ತಂದಿದೆ .ಕಾನೂನು ಸುವ್ಯವಸ್ಥೆ ಸೇರಿ ಪ್ರಸಕ್ತ ಕೋವಿಡ್ ನಿರ್ಬಂಧಗಳ ಪಾಲನೆಗೆ ಒತ್ತುಕೊಡಲಾಗುವುದು. ಜನರ ಸಹಕಾರ ಮುಖ್ಯ.
-ರಾಹುಲ್ಕುಮಾರ್ ಶಹಾಪುರ್ವಾದ್, ನೂತನ ಎಸ್ಪಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/06/sp-tumkur-rahul-1-e1623391721553.jpg)