ತುಮಕೂರು :
ಒಳ ಚರಂಡಿಯ ಡ್ರೈನೇಜ್ ನೀರು ರಸ್ತೆಯಲ್ಲಿ ಉಕ್ಕಿ ಇತರೆ ಮನೆಗಳಿಗೆ ತೊಂದರೆ ಉಂಟು ಮಾಡುತ್ತಿದ್ದು, ಅನೈರ್ಮಲ್ಯ ತಪ್ಪಿಸುವಂತೆ ವಿನಾಯಕ ನಗರ ಮೊದಲನೆ ಕ್ರಾಸ್, ಬಾಳೆಕಾಯಿ ಮಂಡಿ ಪಕ್ಕದ ನಿವಾಸಿಗಳು ಒತ್ತಾಯಿಸಿದ್ದಾರೆ.
ಶ್ರೀ ಸಿದ್ಧಿವಿನಾಯಕ ಸಮುದಾಯ ಭವನಕ್ಕೆ ಹೋಗುವ ಹತ್ತಿರದ ರಸ್ತೆಯಲ್ಲಿಯೇ ಈ ರೀತಿ ಪದೆ ಪದೆ ಯುಜಿಡಿ ನೀರು ಲೀಕೇಜ್ ಆಗುತ್ತಿದ್ದು, ತೊಂದರೆಯಾದ ಕೂಡಲೇ ಸಂಬಂಧಪಟ್ಟವರು ಇಲ್ಲಿಗೆ ಆಗಮಿಸಿ ಮುಚ್ಚಳ ತೆಗೆದು ದುರಸ್ತಿಗೊಳಿಸುತ್ತಾ ಬಂದಿದ್ದಾರೆ.
ಮಳೆ ಬಂದಾಗಲೆಲ್ಲಾ ಇಲ್ಲಿ ಈ ರೀತಿಯ ಸಮಸ್ಯೆ ಎದುರಾಗುತ್ತದೆ. ಇತ್ತೀಚೆಗೆ ಮತ್ತೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಇದನ್ನು ಸರಿಪಡಿಸಲು ಹೋದರೆ ಯಾರೋ ಒಬ್ಬರು ಅಡ್ಡಿ ಪಡಿಸುತ್ತಿದ್ದಾರೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಶಾಸಕರು ಇಂತಹ ಸಮಸ್ಯೆಗಳ ಕಡೆಗೆ ಗಮನ ಹರಿಸಿ ಸಮಸ್ಯೆ ನಿವಾರಿಸಬೇಕೆಂದು ಆ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
