ತುಮಕೂರು :
ನಗರದ ಮೂಲಕ ಹಾದುಹೋಗುವರಾಷ್ಟ್ರೀಯ ಹೆದ್ದಾರಿ ಬಟವಾಡಿ ಅಕ್ಕ-ತಂಗಿ ಕೆರೆ ಮೇಲ್ಸುತೆವೆ ಬಳಿ ನಿಂತಿದ್ದ ಕಾಪರ್ ವೈರ್ ಟ್ರಕ್ಗೆ ಸೋಮವಾರ ಮಧ್ಯಾಹ್ನ ದಿಢೀರ್ ಬೆಂಕಿ ತಗುಲಿ ಹೊತ್ತಿ ಹುರಿದಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಟ್ರಕ್ ಚಾಲಕರುಎಂಜಿನ್ ದುರಸ್ಥಿ ಕಾರಣಕ್ಕೆ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿಕೊಂಡಿದ್ದು, ಎಂಜಿನ್ ಬಿಟ್ಟುಕೊಂಡು ರಿಪೇರಿಗೆ ಹೋದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ದಗದಗನೆ ಉರಿಯಲಾರಂಭಿಸಿದೆ. ಸ್ಥಳೀಯರು ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದು, ಸಿಬ್ಬಂದಿ ಸ್ಥಳಕ್ಕೆ ಬಂದು ನೀರು ಹಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ