ತುಮಕೂರು : ಮಾಂಗಲ್ಯ ಸರ ಕದಿಯಲು ಹೋಗಿ ಮಹಿಳೆಯ ಸಾವಿಗೆ ಕುತ್ತು ತಂದ ಕಳ್ಳರು

ತುಮಕೂರು :  

    ಮಹಿಳೆಯ ಮಾಂಗಲ್ಯ ಸರ ಕದಿಯಲು ಹೋದ ಖದೀಮರಿಬ್ಬರು ಆಕೆಯ ಸಾವಿಗೆ ಕಾರಣರಾದ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಮೃತ ಮಹಿಳೆಯನ್ನು ಹಂಗರಹಳ್ಳಿ ಗ್ರಾಮದ ವಸಂತಾ (37) ಎಂದು ಗುರುತಿಸಲಾಗಿದೆ. 

      ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಮೇದರ ದೊಡ್ಡಿ ಗ್ರಾಮದ ಬಳಿ ತನ್ನ ಮಗ ಚೇತನ್ ಜೊತೆ ಗಂಡನ ಮನೆಯಾದ ಚನ್ನಪಟ್ಟಣ ತಾಲ್ಲೂಕು ನಾಗವಾರ ಗ್ರಾಮಕ್ಕೆ ಬೈಕ್‍ನಲ್ಲಿ ತೆರಳಿದ್ದರು. ಇದೇ ಗ್ರಾಮದ ಬಳಿ ಇಬ್ಬರು ದರೋಡೆಕೋರರು ಬೈಕ್‍ನಲ್ಲಿ ಹಿಂಬಾಲಿಸಿ ಬಂದು ಚಲಿಸುತ್ತಿದ್ದ ಬೈಕ್‍ನ ಹಿಂಬದಿ ಕುಳಿತಿದ್ದ ವಸಂತಾ ಅವರ ಕೊರಳಿನ ಮಾಂಗಲ್ಯ ಸರಕ್ಕೆ ಕೈ ಹಾಕಿ ಸರವನ್ನು ಕಸಿದುಕೊಂಡು ಪರಾರಿಯಾದರು.

      ಸರ ಕಸಿಯುವ ವೇಳೆ ರಭಸವಾಗಿ ಎಳೆದಿದ್ದರಿಂದ ಆಯಾ ತಪ್ಪಿ ವಸಂತಾ ಅವರು ಬೈಕ್‍ನಿಂದ ಕೆಳಗೆ ಬಿದ್ದಾಗ ಅವರ ತಲೆಗೆ ತೀವ್ರತರಹದ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಎಸ್‍ಪಿ ಉದೇಶ್, ಸಿಪಿಐ ಗುರುಪ್ರಸಾದ್ ಅವರುಗಳು ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link