ತುಮಕೂರು : ನಿರ್ಬಂಧ ಮುಗಿದಿಲ್ಲ, ಇನ್ನೂ ಇದೆ

 ತುಮಕೂರು : 

      ಈವರೆಗೆ ವಿಧಿಸಲಾಗಿದ್ದ ಕೋರೊನಾ ಲಾಕ್‍ಡೌನ್ ಜೂನ್ 21ಕ್ಕೆ ಅಂತ್ಯವಾಗಿದ್ದರೂ ಸಹ ಸಂಪೂರ್ಣ ನಿರ್ಬಂಧ ಮುಗಿದಿಲ್ಲ. ಸರ್ಕಾರದ ಮಾರ್ಗಸೂಚಿಗಳು ಮುಂದುವರೆದಿವೆ.

ಬೆಳಗ್ಗೆ 5ರಿಂದ ಸಂಜೆ 5ರವರೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿವೇಳೆ ನಿರ್ಬಂಧಗಳು ಎಂದಿನಂತೆಯೇ ಇವೆ. ಇದರ ಜೊತೆಗೆ ವಾರದ ವೀಕ್ ಎಂಡ್ ಕರ್ಪೂ ಸಹ ಇನ್ನೂ ಸಡಿಲವಾಗಿಲ್ಲ.

      ಶನಿವಾರ ಮತ್ತು ಭಾನುವಾರ ವೀಕ್‍ಎಂಡ್ ಕಫ್ರ್ಯೂ ಪ್ರಕಾರ ಕೆಲವು ಅಗತ್ಯ ವಹಿವಾಹಿಗಷ್ಟೆ ವಿನಾಯಿತಿ ಇದೆ. ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗಿನ 5 ಗಂಟೆ ವರೆಗೆ ಕರ್ಫೂ ಮುಂದುವರಿಯಲಿದೆ, ಈ ಅವಧಿಯಲ್ಲಿ ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರ ವರೆಗೆ ಗಂಟೆಯವರೆಗೆ ಮಾತ್ರವೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಆಹಾರ ದಿನಸಿ, ಹಣ್ಣುಗಳು, ತರಕಾರಿ ಮಾಂಸ, ಡೈರಿ ಹಾಲಿನ ಬೂತ್ ಗಳಿಗೆ ಮದ್ಯಮಾರಾಟ, ಸಾರ್ವಜನಿಕ ವಿತರಣೆಗೆ ಅವಕಾಶವಿದೆ. ಹೋಟೆಲ್ ಗಳಲ್ಲಿ ತಿಂಡಿ ತಿನಿಸು ತೆಗೆದುಕೊಂಡು ಹೋಗಲು ಮತ್ತು ಡೋರ್ ಡೆಲಿವರಿಗೆ ಅವಕಾಶವಿದೆ.

      ಲಾಕ್ ಡೌನ್ ಸಡಿಲಿಕೆಯಾಗಿದ್ದರೂ ಎಲ್ಲಾ ಕ್ಷೇತ್ರಗಳಿಗೂ ಇನ್ನೂ ಪೂರ್ಣ ವಿನಾಯಿತಿ ಸಿಕ್ಕಿಲ್ಲ. ಮದುವೆ ಸಮಾರಂಭಗಳಿಗೆ ನಿರ್ಬಂಧ ಮುಂದುವರೆದಿದೆ. ಜನ ಸೇರುವಂತಹ ಸಭೆ, ಸಮಾರಂಭಗಳು, ಕೊರೋನಾ ಹರಡುವಂತೆ ಗುಂಪುಗೂಡುವ ಕ್ಷೇತ್ರಗಳಿಗೆ ಪೂರ್ಣ ವಿನಾಯಿತಿ ಸಿಕ್ಕಿಲ್ಲ. ಕೆಲವು ಕ್ಷೇತ್ರಗಳಿಗೆ ಶೇ.50ರಷ್ಟು ಅವಕಾಶ ಕಲ್ಪಿಸಲಾಗಿದೆ.

      ಹೀಗೆ ರಾಜ್ಯದಲ್ಲಿ ಇನ್ನೂ ಸಂಪೂರ್ಣವಾಗಿ ಲಾಕ್ ಡೌನ್ ನಿರ್ಬಂಧ ತೆರವುಗೊಂಡಿಲ್ಲವಾದ ಕಾರಣ ಜನತೆ ಎಚ್ಚರಿಕೆ ವಹಿಸಬೇಕಾಗಿದೆ. ಸರ್ಕಾರದ ಮಾರ್ಗಸೂಚಿಗಳು ಇನ್ನೂ ಮುಂದುವರೆದಿದ್ದು, ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶಗಳಿವೆ. ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಇನ್ನೂ ಕೆಲವು ದಿನ ಕೋವಿಡ್ ನಿರ್ಬಂಧಗಳು ಜಾರಿಯಲ್ಲಿರುವ ಕಾರಣ ಇವುಗಳ ಅನುಸರಣೆ ತುಂಬಾ ಮುಖ್ಯವಾದುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link