ತುಮಕೂರು : ಮನೆಗಳಿಗೆ ಯುಜಿಡಿ ನೀರು ನುಗ್ಗಿ ಅವಾಂತರ!!

ತುಮಕೂರು :

      ಮಹಾನಗರ ಪಾಲಿಕೆಯ 16ನೇ ವಾರ್ಡಿನ ಶಂಕರಾಪುರಂ ಮತ್ತು ಆರ್.ಟಿ.ನಗರಗಳಲ್ಲಿ ಹೋರಿ ಮುದ್ದಪ್ಪ ಕಾಂಪೌಂಡ್‍ನ ಕೆಲವು ಮನೆಗಳಿಗೆ ರಾತ್ರಿ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಯುಜಿಡಿ ನೀರಿನಿಂದ ಆವೃತವಾದ ಮನೆಗಳಲ್ಲಿ ಜನರು ಮೂಗು ಮುಚ್ಚಿಕೊಂಡು ಇಡೀ ರಾತ್ರಿ ಕಳೆಯುವಂತಾಯಿತು.

     ಪ್ರತಿ ಸಲ ಮಳೆ ಬಂದಾಗಲೂ ಒಂದಲ್ಲ ಒಂದು ಅವಾಂತರ ಸೃಷ್ಟಿಯಾಗುತ್ತದೆ. ಈ ಹಿಂದೆ ಯುಜಿಡಿ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಒಂದು ವಾರಗಳ ಕಾಲ ಯುಜಿಡಿ ನೀರನ್ನು ಹೊರ ಹಾಕುವ ಕೆಲಸ ಮಾಡಿದೆವು. ಈಗ ಮಳೆ ಬಂದು ಮತ್ತೆ ಯುಜಿಡಿಯಿಂದ ಮನೆಗಳೆಲ್ಲವೂ ಕೊಚ್ಚೆ ನೀರಿನಿಂದ ತುಂಬಿ ಹೋಗಿದೆ. ನಾವು ಇಲ್ಲಿ ವಾಸಿಸುವುದೇ ಕಷ್ಟವಾಗಿದೆ ಎನ್ನುತ್ತಾರೆ ಈ ಭಾಗದ ಸಾರ್ವಜನಿಕರು.

      ಇಲ್ಲಿನ ನಗರ ವಾಸಿಗಳ ಸಮಸ್ಯೆಗಳನ್ನು ಆಲಿಸಲು ಪಾಲಿಕೆಯ ಮೇಯರ್ ಬಿ.ಜಿ.ಕೃಷ್ಣಪ್ಪ, ಸದಸ್ಯರಾದ ಇನಾಯಿತ್ ಉಲ್ಲಾಖಾನ್, ಆಯುಕ್ತರಾದ ರೇಣುಕ, ಕಾರ್ಯಪಾಲಕ ಇಂಜಿನಿಯರ್ ಆಶಾ, ಇಂಜಿನಿಯರ್ ರವಿ ಅವರುಗಳು ಸ್ಥಳಕ್ಕೆ ಭೇಟ ನೀಡಿ ಪರಿಶೀಲನೆ ನಡೆಸಿದರಲ್ಲದೆ ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಪರಿಹರಿಸುವುದಾಗಿ ತಿಳಿಸಿದರು. ವಾರ್ಡಿನ ಪ್ರಮುಖರಾದ ಎನ್.ವೆಂಕಟೇಶ್, ನಾರಾಯಣ್, ಹೊಸಳಪ್ಪ, ದರ್ಶನ್, ಆನಂದ್, ಮಹೇಶ್, ಬಸವರಾಜು ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap