ತುಮಕೂರು :
ಇಲ್ಲಿನ ಹಜತ್ ಮದಾರ್ ಮಖಾನ್ (ವಕ್ಫ್) ಸಂಸ್ಥೆಯ ವ್ಯವಸ್ಥಾಪಕ ಸಮಿತಿಗೆ ನಡೆದ ಚುನಾವಣೆಗೆ ಬಿರುಸಿನ ಮತದಾನ ನಡೆಯಿತು. ಈ ಸಾಂಸ್ಥಿಕ ಚುನಾವಣೆಗೆ ಒಟ್ಟು 3149 ನೋಂದಾಯಿತ ಮತದಾರರಿದ್ದು, ಈ ಪೈಕಿ 2860 ಮಂದಿ ಮತ ಚಲಾಯಿಸಿದರು. ಆಡಳಿತ ಮಂಡಳಿಗೆ 15 ಮಂದಿ ಸದಸ್ಯರು ಚುನಾಯಿತರಾಗಬೇಕಿದ್ದು, ಆಯ್ಕೆಗಾಗಿ ಮತದಾನ ನಡೆದಿದೆ. ಒಟ್ಟು 80 ಮಂದಿ ಸ್ಪರ್ಧಿಗಳು ಕಣದಲ್ಲಿದ್ದರು. ಓರ್ವ ಮತದಾರ 15 ಮಂದಿಗೆ ಮತದಾನ ಮಾಡಬಹುದಾಗಿತ್ತು.
ಮೂರು ಸಿಂಡಿಕೇಟ್ಗಳನ್ನು ಮಾಡಿಕೊಳ್ಳಲಾಗಿದ್ದು, ಇದಲ್ಲದೆ ಮೂರು ಮಂದಿ ಪ್ರತ್ಯೇಕವಾಗಿ ಸೇರಿದಂತೆ 35 ಮಂದಿ ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣಾಧಿಕಾರಿಯಾಗಿ ಏಜಾಜ್ ಅವರು ಕರ್ತವ್ಯ ನಿರ್ವಹಿಸಿದರು. ಚುನಾವಣೆಯು ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಯಲೆಂದು ರಾಜ್ಯಮಟ್ಟದ ಸಿಬ್ಬಂದಿಯನ್ನೆ ನೇಮಕ ಮಾಡಲಾಗಿತ್ತು. ಆಡಳಿತ ಮಂಡಳಿಗೆ ಓರ್ವ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ 15 ಮಂದಿಯನ್ನು ಆಯ್ಕೆ ಮಾಡುವ ಚುನಾವಣೆ ಇದಾಗಿದೆ. ವಕ್ಫ್ ಸಮಿತಿಯ ವ್ಯಾಪ್ತಿಗೆ ಒಂದು ಐಟಿಐ ಕಾಲೇಜು, ಒಂದು ಮಸೀದಿ, ಶಾದಿಮಹಲ್, ಒಂದು ದರ್ಗಾ, ಒಂದು ಶಾಂಪಿಂಗ್ ಕಾಂಪ್ಲೆಕ್ಸ್, 14 ಎಕರೆ ಖಾಲಿ ಜಾಗ, 2 ಆಂಬ್ಯುಲೆನ್ಸ್ಗಳು ಸೇರಿವೆ. ಇವುಗಳ ನಿರ್ವಹಣೆಗಾಗಿಯೇ ವಕ್ಫ್ ಸಮಿತಿಯನ್ನು ನೇಮಕ ಮಾಡಲಾಗುತ್ತದೆ.
ಈ ಎಲ್ಲದರಿಂದ ವರ್ಷಕ್ಕೆ 2 ಕೋಟಿ 8 ಲಕ್ಷ ರೂ. ಆದಾಯ ಬರಲಿದ್ದು, ಇದರ ಉಳಿಕೆ ಹಣದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಖರ್ಚು ಮಾಡಲು ಅವಕಾಶ ಇದೆ. ಬಡವರ ಶಿಕ್ಷಣ, ನಿರ್ಗತಿಕರಿಗೆ ಸಹಾಯ ಸೇರಿದಂತೆ ಅವಶ್ಯಕ ವಿಷಯಗಳಿಗಾಗಿ ಉಳಿಕೆ ಹಣವನ್ನು ವಿನಿಯೋಗಿಸಬಹುದು. ಇದೇ ಪ್ರಥಮ ಬಾರಿಗೆ ವಕ್ಫ್ ಮಂಡಳಿಗೆ ಚುನಾವಣೆ ನಡೆದಿದೆ. ಇದುವರೆಗೂ ನಾಮನಿರ್ದೇಶನದ ಮುಖೇನ ಆಡಳಿತಮಂಡಳಿಅಸ್ತಿತ್ವಕ್ಕೆಬರುತ್ತಿತ್ತು. 2011 ರಲ್ಲಿ ವಕ್ಸ್ಗೆ ಸಂಬಂಧಿಸಿದ ಬೈಲಾ ರಚನೆಯಾಗಿದೆ. ಈವರೆಗೆ ನಾಮನಿರ್ದೇಶನದ ಮೂಲಕವೇ ಆಡಳಿತ ಮಂಡಳಿ ಕಾರ್ಯನಿರ್ವಹಿಸಿಕೊಂಡು ಬರುತ್ತಿತ್ತು.
ಇದೇ ಪ್ರಥಮ ಬಾರಿಗೆ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಆಯ್ಕೆಯಾದವರು ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ವಕ್ಫ್ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಮಾಜಿ ಜಿಲ್ಲಾ ವಕ್ಸ್ ಸಲಹಾ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ನಿವೃತ್ತ ಪೊಲೀಸ್ ಅಧಿಕಾರಿ ಆರೀಫುಲ್ಲಾ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ವಕ್ಫ್ ಮೇಲ್ವಿಚಾರಣೆ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ