ತುಮಕೂರು
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ತುಮಕೂರಲ್ಲಿ ಬೆಳಿಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಪ್ರಮುಖ ವಾಣಿಜ್ಯ ರಸ್ತೆ ಗಳಾದ ಬಿ. ಎಚ್. ರಸ್ತೆ, ಎಂ. ಜಿ. ರಸ್ತೆ, ಜೆ. ಸಿ. ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ ಭಾಗದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕೆಲವು ಹೋಟೆಲ್, ಬೇಕರಿ, ದಿನಸಿ , ತರಕಾರಿ ಅಂಗಡಿಗಳು ತೆರೆದಿದ್ದವು.
ಸರ್ಕಾರಿ ಶಾಲಾ ಕಾಲೇಜು ವಿವಿ ಓಪನ್ ಆಗಿದ್ದವು. ಉಳಿದಂತೆ ಬಹುತೇಕ ಖಾಸಗಿ ಶಾಲಾ ಕಾಲೇಜು ಗಳು ರಜೆ ಘೋಷಿಸಿ ದ್ದವು.ರಸ್ತೆ ಯಲ್ಲಿ ಜನ ಸಂಚಾರ ವಾಹನ ಸಂಚಾರ ವಿರಳವಾಗಿತ್ತು. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಚಾರ ದಟ್ಟಣೆ ಅಷ್ಟಾಗಿ ಕಂಡು ಬಂದಿರಲಿಲ್ಲ. ಬಸ್ ಗಳ ಸಂಚಾರ ಕಂಡುಬಂದರೂ ಪ್ರಯಾಣಿಕರ ಸಂಖ್ಯೆ
ವಿರಳವಾಗಿತ್ತು.
ಪ್ರಮುಖ ವೃತ್ತ ಬಸ್ ನಿಲ್ದಾಣ, ರಸ್ತೆ ಗಳಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಕೆಲವು ಖಾಸಗಿ ಸಂಸ್ಥೆ ಗಳವರು ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆ 9.30ಆದರೂ ಬಾಗಿಲು ತೆಗೆಯದ ಕಾರಣ ಸಿಬ್ಬಂದಿ ಹೊರಗೆ ನಿಂತು ಕಾಯುತ್ತಿದ್ದ ದೃಶ್ಯ ಕಂಡು ಬಂದಿತು.
ಬ್ಯಾಂಕ್, ಸರ್ಕಾರಿ ಕಚೇರಿ, ಹಾಲು, ಔಷಧ ಮಳಿಗೆ, ಆಸ್ಪತ್ರೆ, ಬ್ಲಡ್ ಬಾಂಕ್ ಗಳಿಗೆ ಬಂದ್ ಬಿಸಿ ತಟ್ಟಿರಲಿಲ್ಲ.ಕನ್ನಡ ಪರ ಸಂಘಟನೆಗಳು ರೈತ ಸಂಘ ಸೇರಿ ವಿವಿಧ ಸಂಘಟನೆ ಗಳವರು ಟೌನ್ ಹಾಲ್ ಬಳಿಯ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಸಿದ್ದತೆ ಮಾಡಿದ್ದು ಬಂದ್ ಯಶಸ್ವಿಯಾಗಿ ಸಲು ಹೋರಾಟಗಾರರು ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ