ತುಮಕೂರು :
ಲಾಕ್ಡೌನ್ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಘೋಷಿಸಿದ ಲಾಕ್ಡೌನ್ ಪರಿಹಾರ ತ್ವರಿತ ಬಿಡುಗಡೆಗೊಳಿಸಬೇಕು. ಜೊತೆಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಮನೆ ಕೆಲಸಗಾರರ ಸಂಘ, ಟೈಲರ್ ಗಳ ಸಂಘ , ಪುಟ್ ಪಾತ್ ವ್ಯಾಪಾರಿಗಳ ಸಂಘ, ಅಟೋ ಚಾಲಕರು ಜಂಟಿಯಾಗಿ ಡಿಸಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅವರು ರಾಜ್ಯದಲ್ಲಿ ಲಾಕ್ ಡೌನ್ ಪರಿಹಾರಕ್ಕೆ ಅರ್ಜಿಸಲ್ಲಿಸಿರುವ ಮನೆ ಕೆಲಸಗಾರರು, ಹಮಾಲಿ ಕಾರ್ಮಿಕರು, ಟೈಲರ್ಗಳು, ಮೆಕ್ಯಾನಿಕ್ ಸಹಾಯಕರು, ಆಟೊ, ಬಸ್, ಲಾರಿ, ಟೆಂಪೇ ಚಾಲಕರು, ಮಡಿವಾಳರುು, ಕ್ಷೌರಿಕರು, ಕುಂಬಾರರು, ಪುರಿ ಭಟ್ಟಿ ಕಾರ್ಮಿಕರು, ಚಿನ್ನ ಬೆಳ್ಳಿ ಕೆಲಗಾರರು ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಈ ಕೊಡಲೆ ಪರಿಹಾರ ಹಣವನ್ನು ನೀಡಬೇಕು. ಇದಕ್ಕೆ ಅಗತ್ಯ ಅರ್ಥಿಕ ಅನುಧಾನವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಇ – ಶ್ರಮ್ ಕಾರ್ಡ್ ಅನ್ನು ಉಚಿತವಾಗಿ ನೀಡಬೇಕು, ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳಾದ ಪಿಂಚಣಿ, ಮಕ್ಕಳ ವಿಧ್ಯಾಬ್ಯಾಸಕ್ಕೆ ವಿದ್ಯಾರ್ಥಿ ವೇತನ, ಚಿಕಿತ್ಸಾ ವೆಚ್ಚ ಮರುಪಾವತಿ, ಮಕ್ಕಳ ಮದವೆಗೆ ಸಹಾಯಧನ,ಯೋಜನೆಗಳನ್ನು ರೂಪಿಸಿಬೇಕು ,ಅದಕ್ಕೆ ಅಗತ್ಯವಾದ ಅನುದಾನವನ್ನು ಕೇಂದ್ರ – ರಾಜ್ಯ ಸರ್ಕಾರಗಳು ನೀಡಬೇಕು. ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಹಾಲಿ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಉಚಿತ ವಾಗಿ ಸ್ಮಾಟ್ ಕಾರ್ಡ ನೀಡ ಬೇಕು, ಹಲವು ತಿಂಗಳುಗಳಿಂದ ನಿಲ್ಲಿಸಲಾಗಿರುವ ನೋಂದಣಿ ಕಾರ್ಯವನ್ನು ತಕ್ಷಣವೇ ಅರಂಬಿಸಿ ,ನೋಂದಾವಣಿಕಾರ್ಯವನ್ನು ಸರಳೀಕರಿಸಬೇಕು. ಮನೆ- ನಿವೇಶನ ಇಲ್ಲದೆ ಇರುವ ಎಲ್ಲಾ ಅಸಂಘಟಿತ ಕಾರ್ಮಿರಿಗೆ ವಸತಿ ಯೋಜನೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಮನೆ ಇಲ್ಲದೆ ಇರುವ ಎಲ್ಲರಿಗೂ ಅರ್ಜಿ ಸಲ್ಲಿಸಲು ಮತ್ತೋಂದು ಅವಕಾಶ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಅಸಂಘಟಿ ಕಾರ್ಮಿಕರ ಸಂಕಟಗಳನ್ನು ಪರಿಹಾರ ಕಾಣಲು ಸಮಿತಿಯೊಂದನ್ನು ರಚಿಸಬೇಕು . ಮತ್ತು ಅದನ್ನು ಪ್ರತಿ 3 ತಿಂಗಳಿಗೆ ಒಮ್ಮೆ ಕಡ್ಡಾಯ ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕಾರ:
ಮನವಿ ಸ್ವೀಕರಿಸಿದ ಕಾರ್ಮಿಕ ಧಿಕಾರಿ ರಮೇಶ್ ಅವರು ಎಲ್ಲಾ ಅರ್ಹ ಅರ್ಜಿದಾರರಿಗೆ 2000 ರೂ ಬರಲಿದೆ. ಅಸಂಘಟಿತರ ಕಲ್ಯಾಣಯೊಜನೆ ಬಗ್ಗೆ ಸರ್ಕಾರ ಗಮನ ಹರಿಸಲಿದೆ ಎಂದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮನೆ ಕೆಲಸಗಾರರ ಸಂಘದ ಅನಸೂಯ , ಟೈಲರ್ ಗಳ ಸಂಘದ ಮಂಜುಳ ಆಟೊ ಚಾಲಕರ ಸಂಘದ ಸಿದ್ದರಾಜು , ಪುಟ್ ಪಾತ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಜಶೇಖರ್ ಕಟ್ಟಡ ಕಾರ್ಮಿಕರ ಸಂಘದ ಕಲೀಲ್ , ಮಾತನಾಡಿದರು.
ತುಮಕೂರು ಜಿಲ್ಲೆಯಲ್ಲಿ ಸರಿ ಸುಮಾರು 55,500 ರಷ್ಟು ಅರ್ಜಿಗಳನ್ನು ಸಲ್ಲಿಸಿದ್ದು 7-8 ಸಾವಿರ ಕಾರ್ಮಿಕರಿಗಷ್ಟೆ ಲಾಕ್ ಡೌನ್ ಪರಿಹಾರ ಸಿಕ್ಕಿದೆ. ಉಳಿದ 47500 ಮಂದಿ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಇನ್ನು ಬಂದಿಲ್ಲ. ಇದಕ್ಕೆ ಸೂಕ್ತವಾದ ಅರ್ಥಿಕ ಮಂಜೂರಾತಿ ರಾಜ್ಯ ಸರ್ಕಾರದಿಂದ ನೀಡಬೇಕು.
-ಸೈಯದ್ ,ಮುಜೀಬ್ ಸಿಐಟಿಯು ಜಿಲ್ಲಾಧ್ಯಕ್ಷ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
