ತುಮಕೂರು :
ಸ್ನೇಹಿತರೊಡನೆ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೋರ್ವ ಮುಳುಗಿ ಸಾವನ್ನಾಪ್ಪಿರುವ ದುರ್ಘಟನೆ ತುಮಕೂರಿನ ಸಮೀಪದ ದುರ್ಗದಳ್ಳಿಯ ಕೆರೆಯಲ್ಲಿ ಭಾನುವಾರ ಸಂಜೆ 6:30 ಕ್ಕೆ ನಡೆದಿದೆ.
ಹೆಬ್ಬೂರಿನ ಸಿ ಎಸ್ ಪುರದ ಮಾವಿನಳ್ಳಿ ನಿವಾಸಿ ಪೃಥ್ವಿ (26) ಸ್ನೇಹಿತ ರೊಡನೆ ದುರ್ಗದಹಳ್ಳಿ ಕೆರೆಯಲ್ಲಿ ಈಜಲು ತೆರಳಿ ಮೃತಪಟ್ಟ ದುರ್ದೈವಿ.
ಮೃತನ ಸ್ನೇಹಿತರಿಗೆ ಈಜು ಬರುವುದಿಲ್ಲ ಎಂದು ತಿಳಿದಿದ್ದರೂ ಅವನೊಬ್ಬನೆ ಈಜಾಡಲು ಮುಂದಾಗುತ್ತಾನೆ. ಕೆಲ ಕಾಲ ಈಜಾಡಿದ ವ್ಯಕ್ತಿ ನೀರಿನಲ್ಲೆ ಇರುವ ಕಾರಣದಿಂದ ಕೈ ಕಾಲು ಗಳನ್ನು ಆಡಿಸಲಾಗದೆ ನೀರಿನೊಳಗೆ ಮುಳುಗಿ ಮೃತಪಟ್ಟಿದ್ದಾನೆ. ಕತ್ತಲಾಗಿರುವ ಕಾರಣದಿಂದ ಸ್ನೇಹಿತರು ಅವನ್ನು ಸರಿಯಾಗಿ ಗಮನಿಸಲಾಗಲಿಲ್ಲ ಆದರೂ ಸ್ನೇಹಿತನನ್ನು ನೀರಿನಿಂದ ಮೇಲೆಳೆಯಲು ಉಳಿದ 6ಜನ ಸ್ನೇಹಿತರು ಪ್ರಯತ್ನ ಪಟ್ಟರೂ ಅವನ್ನನ್ನು ಕಾಪಾಡಲು ಸಾಧ್ಯವಾಗಲಿಲ್ಲ.
ಇದರಿಂದ ಗಾಬರಿಗೊಂಡ ಸ್ನೇಹಿತರು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕಾರ್ಯಚರಣೆ ನಡೆಸಿ ಮೃತದೇಹವನ್ನು ಹೊರತೆಗೆಯಲಾಗಿದೆ.
ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/01/IMG_20210118_080738.jpg)