ತುಮಕೂರು : ದಂಪತಿಗಳ ಜಗಳ : ಗಂಡನ ಕೊಲೆಯಿಂದ ಅಂತ್ಯ!!

 ತುಮಕೂರು :

      ದಂಪತಿಗಳ ಜಗಳವು ಕೊನೆಗೆ ಗಂಡನ ಕೊಲೆಯಿಂದ ಅಂತ್ಯವಾದ ಘಟನೆ ನಗರದ ಬಡ್ಡಿಹಳ್ಳಿ ಬಡಾವಣೆಯಲ್ಲಿ
ನಡೆದಿದೆ.

      ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ವಾಸವಾಗಿರುವ ನಾರಾಯಣ (45) ವರ್ಷ ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತಿದ್ದರು. ಭಾನುವಾರ ಸುಮಾರು 2.30ರ ಸಮಯದಲ್ಲಿ ದಂಪತಿಗಳಿಬ್ಬರು ಜಗಳ ಮಾಡಿಕೊಂಡಿದ್ದು, ಜಗಳ ಅತಿರೇಕಕ್ಕೆ ಹೋಗಿ, ಹೆಂಡತಿಯು ಗಂಡ ನಾರಾಯಣನಿಗೆ ಮನೆಯಲ್ಲಿ ಇದ್ದಂತಹ ಸೀಮೆ ಎಣ್ಣೆಯನ್ನು ಎರಚಿ ಬೆಂಕಿ ಹಚ್ಚಿದ್ದಳು. ನಂತರ ಮನೆಯಿಂದ ಹೊರಗಡೆ ಬಂದು ಚರಂಡಿಯಲ್ಲಿ ಬಿದ್ದನು ಆಗ ಹೆಂಡತಿ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಗಂಡನ ತಲೆ ಮೇಲೆ ಹಾಕಿದ್ದಾರೆ. ಆಗ ಗಟ್ಟಿಯಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ದಂಪತಿಗಳಿಗೆ ಮೂರು ಮಕ್ಕಳಿದ್ದು ಅವರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಸಂಬಂಧ ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap