ತುಮಕೂರು-ರಾಯದುರ್ಗ-ದಾವಣಗೆರೆ ರೈಲು ಮಾರ್ಗ ಯೋಜನೆಗೆ 600 ಕೋಟಿ ಬಿಡುಗಡೆ : ವಿ ಸೋಮಣ್ಣ

   ತುಮಕೂರು

    ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲು ಮಾರ್ಗ ಯೋಜನೆಯ ತ್ವರಿತ ಪೂರ್ಣ ಕ್ಕೆ ಒತ್ತು ಕೊಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 600ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು. ತುಮಕೂರಿನ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತುಮಕೂರು ರಾಯದುರ್ಗ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಮಧುಗಿರಿ ಕೊರಟಗೆರೆ ಭಾಗದಲ್ಲಿ ಸು. 70ಎಕರೆ ಬಾಕಿ ಇದ್ದು, ಪ್ರಸ್ತುತ ಭೂ ಸ್ವಾಧೀನಕ್ಕೆ ತ್ವರಿತಗತಿಯ ಕ್ರಮವನ್ನು ಜಿಲ್ಲಾ ಧಿಕಾರಿಗಳು ವಹಿಸಿದ್ದಾರೆ. , 2026 ಡಿಸೆಂಬರ್ ವೇಳೆ ಗೆ ರಾಯದುರ್ಗ ರೈಲ್ವೆ ಮಾರ್ಗ ಪೂರ್ಣ ಗೊಳಿಸಿ ಲೋಕಾರ್ಪಣೆ ಗೊಳಿಸಲಾಗುವುದು.

    ತುಮಕೂರು ದಾವಣಗೆರೆ ರೈಲ್ವೆ ಮಾರ್ಗ ಕ್ಕೆ ಸಂಬಂಧಿಸಿದಂತೆ ಯೂ ಚಿತ್ರದುರ್ಗ ಭಾಗದಲ್ಲಿ 371ಎಕರೆ ಸ್ವಾಧೀನದ ತೊಡಕಿತ್ತು. ಅದನ್ನು ನಿವಾರಿಸಿ ಕಾಮಗಾರಿಗೆ ವೇಗ ಕೊಡಲು ನಿರ್ದೇಶಿಸಲಾಗಿದೆ ಎಂದರು. ತುಮಕೂರು ಬೆಂಗಳೂರು ದ್ವಿಪಥ ರೈಲು ಮಾರ್ಗ ದ ಎಲೆಕ್ಟ್ರಿಫಿಕೇಶನ್ ಗೆ 399 ಕೋಟಿ ಹಣ ಮಂಜೂರು ಮಾಡಿ ಸರ್ಕಾರಿ ಆದೇಶ ವಾಗಿದೆ ಎಂದ ಸೋಮಣ್ಣ ಅವರು ತುಮಕೂರು ಬೆಂಗಳೂರು ನಡುವೆ ಹೆಚ್ಚುವರಿ ಪ್ಯಾಸೆಂಜರ್ ರೈಲು ಓಡಾಟ, ಹಾಲಿ ಸಂಚರಿಸುತ್ತಿರುವ ರೈಲುಗಳಿಗೆ ಹೆಚ್ಚು ವರಿ ಬೋಗಿಗಳ ಅಳವಡಿಕೆಗಳ ಬೇಡಿಕೆ ಬಗ್ಗೆಯೂ ಅಧಿಕಾರಿಗಳೊಡನೆ ಚರ್ಚಿಸುತ್ತೇನೆ.

    ಶಿವಮೊಗ್ಗ ಚನ್ನೈ ನಡುವೆ ತುಮಕೂರು ಮಾರ್ಗವಾಗಿ ಹೊಸ ರೈಲು ಬಿಡಲು ಈಗಾಗಲೇ ಕ್ರಮ ವಹಿಸಲಾಗಿದೆ. ತುಮಕೂರಲ್ಲಿ ವಂದೇ ಭಾರತ್ ರೈಲು ನಿಲುಗಡೆ, ಕೋವಿಡ್ ಸಂದರ್ಭದಲ್ಲಿ ಸ್ಥಗಿತ ಗೊಳಿಸಿದ್ದ ಹಿರಿಯ ನಾಗರಿಕರಿಗೆ ರಿಯಾಯಿತಿ ದರದ ಟಿಕೆಟ್ ಮರು ಚಾಲನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರೊಡನೆ ಚರ್ಚಿಸುವೆ ಎಂದರು. ಮುಂದಿನ ಚುನಾವಣೆ ವರೆಗೆ ರಾಜಕಾರಣ ಬದಿಗಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯ ನಿರ್ವಹಿಸುವ ಅಗತ್ಯ ವಿದೆ ಎಂದು ಪ್ರತಿಪಾದಿಸಿದ ಸೋಮಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರು ಸಹ ದೆಹಲಿಯಲ್ಲಿ ರಾಜ್ಯದ ಸಂಸದರ ಸಭೆಯಲ್ಲಿ ಜೊತೆ ಯಾಗಿ ಪ್ರಗತಿಗೆ ಶ್ರಮಿಸುವ ಮಾತುಗಳನ್ನಾಡಿದ್ದಾರೆ.

    ಪ್ರಧಾನಿಯವರು ವಾರದ ಆರಂಭದ ನಾಲ್ಕು ದಿನ ಮಂತ್ರಾಲಯದಲ್ಲಿ ಕುಳಿತು ಇಲಾಖೆ ಕಾರ್ಯ ಮಾಡುವಂತೆ ನಿರ್ದೇಶಿಸಿದ್ದು ದೇಶಾದ್ಯಂತ ಬಾಕಿಯಿರುವ ರೈಲ್ವೆ ಅಂಡರ್ ಪಾಸ್, ಮೇಲ್ಸೇತುವೆ ಕಾಮಕಾರಿಗಳಿಗೂ ಕಾಯಕಲ್ಪ ಒದಗಿಸಲು ಕ್ರಮ ವಹಿಸಲಾಗುವುದು ಎಂದರು. ವಸಂತಾ ನರಸಾಪುರ ಕೈಗಾರಿಕಾ ಪ್ರದೇಶ ದಕ್ಷಿಣ ಏಷ್ಯಾ ದಲ್ಲೆ ನಂಬರ್ ಒನ್ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಪಡಿಸಲು , ಏರ್ ಪೋರ್ಟ್ ನಿರ್ಮಾಣಕ್ಕೂ ಚಿಂತಿಸಲಾಗಿದೆ. ಆದರೆ ತಮಿಳುನಾಡು ಬೆಂಗಳೂರಿಗೆ ಸಮೀಪದ ಹೊಸೂರಿನಲ್ಲಿ ವಿಮಾನ ನಿಲ್ದಾಣ ಕ್ಕೆ ಮುಂದಾಗಿದೆ ಎಂದರು. ಶಾಸಕ ಜಿ. ಬಿ. ಜ್ಯೋತಿ ಗಣೇಶ್, ಬಿಜೆಪಿ ಮುಖಂಡರುಗಳು ಹಾಜರಿದ್ದರು.

  ಕಾರ್ಪೋರೇಟರ್ ರೀತಿ ಕೆಲಸ

    ತುಮಕೂರಿನ ಸಂಸದರಾದವರೂ ಯಾರು ಬೀದಿಗಿಳಿದಿದ್ದಾರೋ ಗೊತ್ತಿಲ್ಲ. ಆದರೆ ರೈಲ್ವೆ ಜಲಶಕ್ತಿ ಮಂತ್ರಾಲಯದ ಜವಾಬ್ದಾರಿ ವಹಿಸಿಕೊಂಡ ಮೇಲೆ ನಾನೊಬ್ಬ ಕೇಂದ್ರ ಸಚಿವ , ಸಂಸದನೆಂಬುದನ್ನು ಮರೆತು ಕಾರ್ಪೋರೇಟರ್ ರೀತಿ ಕೆಲಸಕ್ಕೆ ಮುಂದಾಗಿದ್ದೇನೆ. ಇನ್ನೂ 15-20ವರ್ಷಗಳ ಕಾಲ ರಾಜ್ಯ ದ ಜನರ ಸೇವೆ ಮಾಡುವ ಆಶಯ ಹೊಂದಿರುವುದಾಗಿ ಹೇಳಿದರು. ಇದೇ ವೇಳೆ ಸಂಸದರ ಕಾರ್ಯಾಲಯವನ್ನು ಐಬಿಯೊಳಗೆ ಮಾಡಲು ರಾಜಕೀಯ ಅಪಸ್ವರದ ಕುರಿತು ಈ ಸೋಮಣ್ಣನಿಗೆ 45ವರ್ಷ ರಾಜಕೀಯ ಅನುಭವವಿದೆ. ಮುಂದೆ ಮಾತಾಡುವುದಾಗಿ ಹೇಳಿದರು. ಪೋಟೋ: ತುಮಕೂರಿನ ನಿವಾಸದಲ್ಲಿ ರೈಲ್ವೆ ಸಚಿವ ವಿ. ಸೋಮಣ್ಣ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕ ಜ್ಯೋತಿ ಗಣೇಶ್ ಇತರ ಮುಖಂಡರಿದ್ದರು.

 

Recent Articles

spot_img

Related Stories

Share via
Copy link