ತುಮಕೂರು :
ನಗರ ಹೊರವಲಯದ ಎಚ್. ಎಂ. ಗಂಗಾಧರಯ್ಯ ಸಭಾಂಗಣದಲ್ಲಿ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೆ) ಹತ್ತನೇ ಘಟಿಕೋತ್ಸವ ಶನಿವಾರ ನಡೆಯಿತು.
ಕುಲಾಧಿಪತಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಹೆಲ್ತ್ ಕೇರ್ ಗ್ಲೋಬಲ್ ಸಂಸ್ಥೆ ಯ ಛೇರ್ಮನ್ ಡಾ: ಬಿ.ಎಸ್. ಅಜಯ್ ಕುಮಾರ್ ಪದವಿ, ಚಿನ್ನದ ಪದಕ ಪ್ರದಾನ ಮಾಡಿದರು.
192 ಮಂದಿ ವೈದ್ಯಕೀಯ ಸ್ನಾತಕ, ಸ್ನಾತಕೋತ್ತರ ಪದವಿ, 45 ಮಂದಿ ದಂತ ವೈದ್ಯಕೀಯ ಪದವಿ, 646 ಮಂದಿ ಎಂಜಿನಿಯರಿಂಗ್ ಪದವಿ ಹಾಗೂ 18ಮಂದಿಗೆ ಡಿಲಿಟ್ ಪದವಿ ಪ್ರದಾನ ಮಾಡಲಾಗುತ್ತಿದೆ.
ಕುಲಪತಿ ಡಾ. ಪಿ. ಬಾಲಕೃಷ್ಣ ಶೆಟ್ಟಿ, ಕುಲಸಚಿವ ಡಾ. ಎಂ. ಜೆಡ್ ಕುರಿಯನ್, ಕನ್ನಿಕಾ ಪರಮೇಶ್ವರ, ಡಾ. ಜಿ. ಎಂ. ಶಿವಕುಮಾರಪ್ಪ ಮತ್ತಿತರ ಗಣ್ಯರು ಪಾಲ್ಗೊಂಡಿದ್ದಾರೆ.
ಶ್ರದ್ಧಾಂಜಲಿ
ಘಟಿಕೋತ್ಸವ ಆರಂಭದಲ್ಲಿ ನಾಯಕ ನಟ ಪುನೀತ್ ರಾಜಕುಮಾರ್ ನಿಧನಕ್ಕೆ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ