ಕೊಪ್ಪಳ
ಕೊಪ್ಪಳ ತಾಲೂಕಿನ ಮುನಿರಾಬಾದ ಬಳಿಯಿರುವ ತುಂಗಭದ್ರಾ ಜಲಾಶಯದ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿ ಅನೇಕ ತಿಂಗಳುಗಳೇ ಕಳೆದಿದ್ದು, ತಾತ್ಕಾಲಿಕವಾಗಿ ಸ್ಟಾಪ್ ಗೇಟ್ ಅಳವಡಿಸಲಾಗಿದೆ. ಬೇಸಿಗೆಯಲ್ಲಿ ಕ್ರಸ್ಟಗೇಟ್ ಅಳವಡಿಸುವುದಾಗಿ ಮಂಡಳಿ ಹೇಳಿತ್ತು. ಆದರೆ, ಇಲ್ಲಿಯವರಗೆ ಕ್ರಸ್ಟಗೇಟ್ ಅಳವಡಿಸುವ ಬಗ್ಗೆ ಮಂಡಳಿಯಿಂದ ಯಾವುದೇ ನಿರ್ಧಾರವಾಗಿಲ್ಲ. ಹೀಗಾಗಿ, ಮಳೆಗಾಲ ಆರಂಭಕ್ಕೂ ಮುನ್ನವೇ ಗೇಟ್ ಬದಲಾವಣೆಯಾಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.
ತುಂಗಭದ್ರಾ ಜಲಾಶಯ, ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು ಮತ್ತು ನೆರೆಯ ತೆಲೆಂಗಾಣ, ಆಂದ್ರಪ್ರದೇಶದ ಲಕ್ಷಾಂತರ ಜನರ ಜೀವನಾಡಿಯಾಗಿದೆ. ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ತುಂಗಭದ್ರಾ ನೀರೇ ಆಧಾರವಾಗಿದೆ. ಆದರೆ, 2024 ರ ಆಗಸ್ಟ್ 10 ರಂದು ರಾತ್ರಿ ಸಮಯದಲ್ಲಿ ಡ್ಯಾಂನ 19 ನೇ ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ. ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹೋಗಿತ್ತು.
ಕ್ರಸ್ಟಗೇಟ್ ಕೊಚ್ಚಿಕೊಂಡು ಹೋಗಲು ತುಂಗಭದ್ರಾ ಡ್ಯಾಂ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಯ್ತಾ ಅನ್ನೋ ಪ್ರಶ್ನೆ ಉದ್ಭವಿಸಿತ್ತು. ಇದಕ್ಕೆ ಕಾರಣ, ಜಲಾಶಯದ ಕ್ರಸ್ಟಗೇಟ್ ಮತ್ತು ಚೈನ್ಲಿಂಕ್ ಬದಲಾಯಿಸದೆ ಇರುವುದು. ಯಾವುದೇ ಜಲಾಯಶದ ಕ್ರಸ್ಟಗೇಟ್ ಮತ್ತು ಚೈನ್ಲಿಂಕ್ ಅನ್ನು 50 ವರ್ಷಕ್ಕೊಮ್ಮೆ ಬದಲಾಯಿಸಬೇಕು. ಆದರೆ, ತುಂಗಭದ್ರಾ ಜಲಾಶಯಕ್ಕೆ 70 ವರ್ಷಗಳ ಹಿಂದೆ ಕ್ರಸ್ಟಗೇಟ್ ಮತ್ತು ಚೈನ್ಲಿಂಕ್ ಗಳನ್ನು ಅಳವಡಿಸಿದ್ದು, ಇಲ್ಲಿವರಗೆ ಒಮ್ಮೆಯೂ ಬದಲಾಯಿಸಿಲ್ಲ. ಬದಲಾವಣೆ ಮಾಡಬೇಕು ಅನ್ನೋ ತಜ್ಞರ ಸೂಚನೆಯನ್ನು ಕೂಡಾ ಡ್ಯಾಂ ನಿರ್ವಹಣೆ ಮಾಡೋ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಕ್ಕೆ ಇಂತಹದೊಂದು ಘಟನೆ ನಡೆಯಿತು ಅಂತ ಹೇಳಲಾಗುತ್ತಿದೆ. ಇದನ್ನೇ, ತಜ್ಞರು ಕೂಡಾ ಹೇಳಿದ್ದರು
