ತುರುವೇಕೆರೆ : ಮೀನುಗಾರರಿಗೆ ಸೌಲಭ್ಯ ವಿತರಣೆ

 ತುರುವೇಕೆರೆ : 

      ಮೀನುಗಾರರು ಮತ್ತು ಅವರ ಕುಟುಂಬದ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗ ಬೇಕೆಂದು ಶಾಸಕ ಮಸಾಲ ಜಯರಾಂ ಹೇಳಿದರು.

      ಪಟ್ಟಣದಲ್ಲಿ ನಡೆದ ರಾಜ್ಯ ವಲಯ ಯೋಜನೆಯಡಿ ಆಯ್ಕೆಯಾದ ತಾಲ್ಲೂಕಿನ ಫಲಾನುಭವಿಗಳಿಗೆ ಮೀನು ಹಿಡಿಯುವ ದೋಣಿ, ಹುಟ್ಟು ಸೇರಿದಂತೆ ಇತರೆ ಸಲಕರಣೆಗಳನ್ನು ಬುಧವಾರ ವಿತರಿಸುವ ಸಮಾರಂಭದಲ್ಲಿ ಮಾತನಾಡಿದರು.

      ತಾಲೂಕಿನಲ್ಲಿ ಹೇಮಾವತಿ ನಾಲಾ ನೀರು ಸಮೃದ್ಧವಾಗಿ ಹರಿಯುತ್ತಿರುವುದರಿಂದ ಮಲ್ಲಾಘಟ್ಟ, ವಡವಘಟ್ಟ, ಕೊಳಾಲ, ತಂಡಗ, ಸಂಪಿಗೆ, ಸೂಳೇಕೆರೆ, ತುರುವೇಕೆರೆ, ಮಾಯಸಂದ್ರ, ಸಾರಿಗೇಹಳ್ಳಿ ಸೇರಿದಂತೆ ಅನೇಕ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು ಇದರಿಂದ ತಾಲ್ಲೂಕಿನಲ್ಲಿ ಸುಮಾರು 50ರಿಂದ 100 ಟನ್ ತನಕ ಮೀನುಗಾರರಿಗೆ ಮೀನು ಕೃಷಿ ಮಾಡಲು ಅನುಕೂಲಗಳಿವೆ. ಎಲ್ಲ ಸಮುದಾಯದ ಸುಮಾರು 200 ಮೀನು ವೃತ್ತಿ ಕೆಲಸ ಮಾಡುವ ಕುಟುಂಬಗಳು ತಾಲ್ಲೂಕಿನಲ್ಲಿ ಸಕ್ರಿಯವಾಗಿವೆ. ಇಂತಹ ಕುಟುಂಬಗಳಿಗೆ ನಮ್ಮ ಸರ್ಕಾರ ಮನೆ ನೀಡುವುದು, ಕಿಟ್, ದೋಣಿ, ಬಲೆ ಮೊದಲಾದ ಸೌಲಭ್ಯಗಳನ್ನು ನೀಡುತ್ತಾ ಹೆಚ್ಚು ಹೆಚ್ಚು ಮೀನು ಕೃಷಿಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ಹೇಳಿದರು.

      ಇತ್ತೀಚಿನ ದಿನಗಳಲ್ಲಿ ಕೆಲ ರೈತರು ತಮ್ಮ ಜಮೀನುಗಳ ಹೊಂಡಗಳಲ್ಲಿ ಮೀನುಮರಿ ಪಾಲನ ಕೇಂದ್ರಗಳನ್ನು ತೆರೆದುಕೊಂಡು ಉತ್ಪಾದನೆಯಾದ ಮರಿಗಳನ್ನು ಕೆರೆಗಳಲ್ಲಿ ಮೀನು ಸಾಕುವವರಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಎಸ್‍ಸಿಪಿಟಿಎಸ್‍ಪಿ ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿಂದ ತಾಲ್ಲೂಕಿನ ಮೀನುಗಾರರಿಗೆ ಮೀನಿನ ಬಲೆ ಕಿಟ್ ಸಹ ನೀಡಲಾಗುತ್ತದೆ ಎಂದರು.

      ಜಗದೀಶ್, ಕಾಳಯ್ಯ, ಕುಮಾರ್, ಬಸವರಾಜು, ನಾಗರಾಜು. ಕೃಷ್ಣ, ಶಿವರಾಂ, ಅಭಿಲಾಷ್, ಸವಿತಾ ಮತ್ತು ಗಂಗಾಧರ್ ಫಲಾನುಭವಿ ಮೀನುಗಾರರಿಗೆ ದೋಣಿ, ಹುಟ್ಟು ಇನ್ನಿತರ ಪರಿಕರಗಳನ್ನು ವಿತರಿಸಲಾಯಿತು.

     ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಭೈರಪ್ಪ, ಸದಸ್ಯೆ ಹೇಮಾವತಿ, ಎಪಿಎಂಸಿ ಅಧ್ಯಕ್ಷ ಮಧು, ಪ.ಪಂ.ಅಧ್ಯಕ್ಷ ಅಂಜನ್‍ಕುಮಾರ್, ಸದಸ್ಯರಾದ ಪ್ರಭಾಕರ್, ಚಿದಾನಂದ್, ಆಶಾ, ಸ.ನೌ.ಸಂ.ಅಧ್ಯಕ್ಷ ಪರಮೇಶ್, ಇಓ ಜಯಕುಮಾರ್, ಸಿಪಿಐ ನವೀನ್, ಅಬಕಾರಿ ರವಿಶಂಕರ್, ಬಿಇಓ. ರಂಗಧಾಮಯ್ಯ, ಮುಖ್ಯಾಧಿಕಾರಿ ಮಂಜುಳಾದೇವಿ, ಸಹಾಯಕ ಮೀನುಗಾರಿಕೆ ನಿರ್ದೇಶಕ ಮೋಹನ್ ಕುಮಾರ್ ಸೇರಿದಂತೆ ಮೀನುಗಾರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap