ತುರುವೇಕೆರೆ:
ಯಾವುದೇ ಅಗ್ನಿ ಅವಘಡಗಳು ಸಂಭವಿಸಿದರೆ ಕೂಡಲೇ ಮಾಹಿತಿ ಕೊಡುವ ಜವಬ್ದಾರಿ ತಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಕೈಗಾರಿಕಾ ಉಪನಿರ್ಧೇಶಕರಾದ ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಮಾಯಸಂದ್ರ ಹೋಬಳಿಯ ಭೈತರಹೊಸಳ್ಳಿ- ವರಾಹಸಂದ್ರ ಸಮೀಪ ಹಾದುಹೋಗಿರುವ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೂರೇಷನ್ ಲಿಮಿಟೆಡ್ ವತಿಯಿಂದ ಹಮ್ಮಿಕೊಂಡಿದ್ದ ಮಂಗಳೂರು, ಹಾಸನ, ಯಡಿಯೂರು, ಮೈಸೂರು ಎಲ್.ಪಿ.ಜಿ ಪೈಪ್ ಲೈನ್ನಲ್ಲಿ ಎಲ್.ಪಿ.ಜಿ ಸೋರಿಕೆಯಾದರೆ ಯಾವುದೇ ಅಪಾಯಗಳು ಸಂಭವಿಸದಂತೆ ಪರಿಸ್ಥಿತಿ ನಿಭಾಯಿಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಪ್ಸೈಟ್ ಜಂಟಿ ಅಣುಕು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರು ಮೊದಲು ಎಲ್.ಪಿ.ಜಿ ಅನಿಲದ ಬಗ್ಗೆ ಮೊದಲು ತಿಳಿದುಕೊಳ್ಳಬೇಕಿದೆ. ಎಲ್.ಪಿ.ಜಿಯಿಂದ ಅವಘಡಗಳು ಸಂಭವಿಸಿದರೆ ಹೆಚ್ಚು ಅಪಘಾತಗಳಾಗಲಿವೆ. ಎಲ್.ಪಿ.ಜಿ ಪೈಪ್ನಲ್ಲಿ ಸೋರಿಕೆಯಾಗುತ್ತಿದ್ದರೆ ಅಂತಹ ಸ್ಥಳದಲ್ಲಿ ಯಾವುದೇ ಬೆಳೆಗಳು ಬೆಳೆಯುವುದಿಲ್ಲಾ ಬೆಳೆಗಳು ಗಿಡಗಳು ಇದ್ದರು ಒಣಗಿರುತ್ತವೆ. ಇಂತಹ ಸ್ಥಳಗಳು ಸಾರ್ವಜನಿಕರಿಗೆ ಕಂಡು ಬಂದರೆ ಕೂಡಲೇ ತುರ್ತು ದೂರವಾಣಿಗೆ ಸಂಖ್ಯೆ ಪೋನ್ ಮಾಡಿ ತಿಳಿಸಬೇಕು. ನಂತರ ಅಧಿಕಾರಿಗಳು ಬರುವೆರಗೂ ಸ್ಥಳದಲ್ಲಿಗೆ ಯಾರನ್ನು ಸುಳಿಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ತಾ.ಪಂ.ಉಪಧ್ಯಕ್ಷ ಭೈರಪ್ಪ ಮಾತನಾಡಿ ಗ್ಯಾಸ್ ಲೈನ್ ಹಾದುಹೋಗಿರುವ ಗ್ರಾಮಗಳಿಗೆ ಗ್ಯಾಸ್ ಕಂಪನಿಯಿಂದ ಇದುವರೆವಿಗೂ ಯಾವುದೇ ಅನುಕೂಲವಾಗಿಲ್ಲದಿರುವುದರಿಂದ ಇನ್ನು ಮುಂದಾದರೂ ಇಂತಹ ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಘಟಕ, ಐಮಾಸ್ಕ್ ವ್ಯವಸ್ಥೆ ಮಾಡುವ ಮೂಲಕ ನಮ್ಮೊಂದಿಗೆ ಕೈಜೋಡಿಸುವುದು ಸೂಕ್ತ ಎಂದರು.
ಕಾರ್ಯಕ್ರಮಕ್ಕೂ ಮುನ್ನಾ ಎಲ್.ಪಿ.ಜಿ ಪೈಪ್ ಲೈನ್ ಸೋರಿಕೆಯಾದರೆ ಯಾವ ರೀತಿ ತಡಗಟ್ಟಬಹುದು ಎಂದು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೂರೇಷನ್ ಲಿಮಿಟೆಡ್ ಹಾಗೂ ಅಗ್ನಿ ಶಾಮಕಧಳ ಅಧಿಕಾರಿಗಳು ಅಪ್ಸೈಟ್ ಜಂಟಿ ಅಣುಕು ಪ್ರದರ್ಶನದದಲ್ಲಿ ಪ್ರಾತ್ಯಕ್ಷತೆ ತೋರಿಸುವ ಮೂಲಕ ಆಜು ಬಾಜು ಗ್ರಾಮಸ್ಥರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಎಲ್ಪಿಜಿ ಕಂಪನಿ ಯಡಿಯೂರು ಶಾಖಾ ಮುಖ್ಯಸ್ಥರಾದ ಸುರೇಶ್, ಕೋಸಲ್ ಕ್ರಿಸ್ಪ್ಲಾಂಟ್ ನ ಎಸ್.ಎನ್.ಮಸಾಲ್ಡಿ, ಪಿ.ಎಮ್.ಹೆಚ್.ಬಿ.ಎಲ್. ಅಭಿಷೇಕ್ ಮಿಶ್ರಾ, ಬೈತರಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್, ಸದಸ್ಯ ರವಿ, ಪಿಡಿಓ ರಾಜಣ್ಣ, ಕಂಪನಿಯ ಸಹಾಯಕ ವ್ಯವಸ್ಥಾಪಕ ಪ್ರವೀಣ್, ಸೂಪರ್ವೈಸರ್ ಜಯರಾಮ್ ಸೇರಿದಂತೆ ಕಂಪನಿಯ ನೌಕರರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರುಗಳು ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
