ನವದೆಹಲಿ:
ಸುಪ್ರೀಂ ಕೋರ್ಟ್ಗೆ ಐವರು ಹೊಸ ನ್ಯಾಯಾಧೀಶರ ನೇಮಿಸಿದ ಬೆನ್ನಲ್ಲೇ ಕೇಂದ್ರವು ಇಂದು ಮತ್ತೆ ಇಬ್ಬರು ಹೈಕೋರ್ಟ್ ನ್ಯಾಯಾಧೀಶರಿಗೆ ಬಡ್ತಿ ನೀಡಿದೆ ಈ ನೇಮಕಾತಿಯಿಂದ ಸುಪ್ರೀಂಕೋರ್ಟ್ ಗೆ ಸಂಪೂರ್ಣ ಬಲ ಬಂದಂತಾಗಿದೆ.
ಪ್ರಸ್ತುತ ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ಗುಜರಾತ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿದೆ.
“ಭಾರತದ ಸಂವಿಧಾನದ ನಿಬಂಧನೆಗಳ ಪ್ರಕಾರ, ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಈ ಕೆಳಗಿನ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ನ ನ್ಯಾಯಾಧೀಶ ರನ್ನಾಗಿ ನೇಮಿಸಿದ್ದಾರೆ. ಈ ನೇಮಕಾತಿಯಿಂದ ಕೇಸ್ ಗಳ ವಿಲೇವಾರಿ ಸುಲಭವಾಗಲಿದೆ ಮತ್ತು ರಾಜೇಶ್ ಬಿಂದಾಲ್, ಮುಖ್ಯ ನ್ಯಾಯಮೂರ್ತಿ, ಅಲಹಾಬಾದ್ ಎಚ್ಸಿ ಮತ್ತು ಅರವಿಂದ್ ಕುಮಾರ್, ಮುಖ್ಯ ನ್ಯಾಯಮೂರ್ತಿ, ಗುಜರಾತ್ ಹೈಕೋರ್ಟ್,” ಇವರಿಬ್ಬರಿಗೂ ನಮ್ಮ ಶುಭ ಹಾರೈಕೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ