ದಿಯೋಘರ್:
ಜಾರ್ಖಂಡ್ನಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಇಳಖೆ ತಿಳಿಸಿದೆ. ರಾಂಚಿಯಿಂದ ಸುಮಾರು 250 ಕಿ. ಮೀ ದೂರದಲ್ಲಿರುವ ದಿಯೋಘರ್ ಪಟ್ಟಣದ ಶ್ಯಾಮ್ಗಂಜ್ ರಸ್ತೆಯಲ್ಲಿ ಮಧ್ಯರಾತ್ರಿ 12.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಮತ್ತೊಂದು ದಾಳಿಯ ನಂತರ ಆಡಳಿತದಿಂದ ಭದ್ರತೆ ಕೋರಿದ್ದ ಸ್ಥಳೀಯ ಮೀನು ವ್ಯಾಪಾರಿಯೊಬ್ಬರ ಮನೆಯ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾಗ ಈ ಘಟನೆ ನಡೆರುವುದಾಗಿ ಎಸ್ ಪಿ ಸುಭಾಶ್ ಚಂದ್ರ ಜಾಟ್ ಹೇಳಿದ್ದಾರೆ. ಮೃತ ಪೊಲೀಸ್ ಸಿಬ್ಬಂದಿಯನ್ನು ಸಾಹಿಬ್ಗಂಜ್ ಜಿಲ್ಲೆಯ ನಿವಾಸಿಗಳಾದ ರವಿಕುಮಾರ್ ಮಿಶ್ರಾ ಮತ್ತು ಸಂತೋಷ್ ಯಾದವ್ ಎಂದು ಗುರುತಿಸಲಾಗಿದೆ.
![](https://prajapragathi.com/wp-content/uploads/2023/02/Untitled-8-4.jpg)