ಬೆಲವತ್ತ ಗ್ರಾಪಂ ಅಧ್ಯಕ್ಷರಾಗಿ ಶಿವಗಂಗಮ್ಮ ಉಪಾಧ್ಯಕ್ಷರಾಗಿ ಕೆಟಿಆರ್ ಸ್ವಾಮಿ ಅವಿರೋಧ ಆಯ್ಕೆ.

ಗುಬ್ಬಿ:

    ತಾಲ್ಲೂಕಿನ ಬೆಲವತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕರೇಗೌಡನಹಳ್ಳಿ ಕ್ಷೇತ್ರದ ಶಿವಗಂಗಮ್ಮ ಶಿವಕುಮಾರ್ ಅಧ್ಯಕ್ಷರಾಗಿ ಹಾಗೂ ಕೋಡಿಹಳ್ಳಿ ಕ್ಷೇತ್ರದ ಕೆಟಿಆರ್ ಸ್ವಾಮಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. 

    ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಶಿರಸ್ತೇದಾರ್ ಲೋಕೇಶ್ ನಡೆಸಿಕೊಟ್ಟರು. ಈ ಹಿಂದೆ ಅಧ್ಯಕ್ಷರಾಗಿದ್ದ ತಾರದೇವಿ ಹಾಗೂ ಉಪಾಧ್ಯಕರಾಗಿದ್ದ ವೆಂಕಟೇಶ್ ನೀಡಿದ್ದ ರಾಜೀನಾಮೆ ಹಿನ್ನಲೆ ಸಾಮಾನ್ಯ ಮಹಿಳೆ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಶಿವಗಂಗಮ್ಮ ನಾಮಪತ್ರ ಸಲ್ಲಿಸಿದರು. ಸಾಮಾನ್ಯ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಕೆಟಿಆರ್ ಸ್ವಾಮಿ ನಾಮಪತ್ರ ಸಲ್ಲಿಸಿದರು. ಎರಡೂ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಸಿದ ಹಿನ್ನಲೆ ಅವಿರೋಧ ಆಯ್ಕೆ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ನಡೆಸಲಾಯಿತು. 

    ನೂತನ ಅಧ್ಯಕ್ಷೆ ಶಿವಗಂಗಮ್ಮ ಮಾತನಾಡಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಜವಾಬ್ದಾರಿ ಕೆಲಸ ಮಾಡುತ್ತೇನೆ. ಎಲ್ಲಾ ಸದಸ್ಯರ ವಿಶ್ವಾಸಕ್ಕೆ ಪಡೆದು ಅಭಿವೃದ್ದಿ ಕೆಲಸ ಮಾಡುತ್ತೇನೆ ಎಂದರು.

    ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ, ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ವಸಂತಕುಮಾರ್ ಅಭಿನಂದನೆ ಸಲ್ಲಿಸಿದರು. ಗ್ರಾಪಂ ಸದಸ್ಯರಾದ ಆನಂದ್, ರಾಜಶೇಖರ್, ವೆಂಕಟೇಶ್, ವಿಷಕಂಠಯ್ಯ, ರಾಜಣ್ಣ, ರವೀಶ್, ಪ್ರದೀಪ್, ಲತಾ ದಯಾನಂದ್, ಜಯಮ್ಮ, ತಾರದೇವಿ, ಚನ್ನಿಗರಾಮಯ್ಯ, ಮಂಜಮ್ಮ, ಮಂಜುಳಾ ಮುನಿಯಪ್ಪ, ಜಯಮ್ಮ ಕೆಂಪಯ್ಯ, ಜಿ.ರೂಪಕಲಾ, ಪಿಡಿಓ ಕವಿತಾ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap