ವಿಶ್ವಸಂಸ್ಥೆಯಲ್ಲಿ ಪಾಕ್‌ ಸಂಸದನಿಗೆ ಚಳಿಬಿಡಿಸಿದ ಪತ್ರಕರ್ತ

ಜಿನಿವಾ:

    ವಿಶ್ವಸಂಸ್ಥೆಯ ಮಾಧ್ಯಮ ಸಮ್ಮೇಳನದಲ್ಲಿ ಪತ್ರಕರ್ತರೊಬ್ಬರ ಪ್ರಶ್ನೆಯಿಂದ ಪಾಕಿಸ್ತಾನದ ಮಾಜಿ ಸಚಿವ ಬಿಲಾವಲ್ ಭುಟ್ಟೋ  ಮುಜುಗರಕ್ಕೊಳಗಾಗಿದ್ದಾರೆ. ಭುಟ್ಟೋ ತಮ್ಮ ಭಾಷಣದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತದಲ್ಲಿ ಮುಸ್ಲಿಮರನ್ನು ಕೆಣಕಲು ರಾಜಕೀಯ ಪಿತೂರಿಯಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ವೇಳೆ ಹಿರಿಯ ಪತ್ರಕರ್ತರೊಬ್ಬರು ಭುಟ್ಟೋಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಪತ್ರಕರ್ತ ಅಹ್ಮದ್ ಫಾತಿ, “ಇದೆಲ್ಲವನ್ನೂ ಮುಸ್ಲಿಮರ ಮಾನಹಾನಿ ಮಾಡಲು ಮಾಡಲಾಗುತ್ತಿದೆ ಎಂದು ನೀವು ಹೇಳುತ್ತಿದ್ದೀರಿ, ಆದರೆ ಮುಸ್ಲಿಂ ಸೇನಾಧಿಕಾರಿಗಳೇ ಭಾರತದ ಪರ ಬ್ರೀಫಂಗ್‌ ನಡೆಸಿದರು ಎಂದು ಅವರು ಹೇಳಿದ್ದಾರೆ.

    ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಲ್ಲೇಖಿಸಿ ಪತ್ರಕರ್ತ ಸರ್, ನಾನು ಎರಡೂ ಕಡೆಯ ಬ್ರೀಫಿಂಗ್‌ಗಳನ್ನು ವೀಕ್ಷಿಸಿದ್ದೇನೆ ಮತ್ತು ನನಗೆ ನೆನಪಿರುವಂತೆ, ಭಾರತದ ಕಡೆಯಿಂದ ಬ್ರೀಫಿಂಗ್‌ಗಳನ್ನು ನಡೆಸುತ್ತಿದ್ದ ಮುಸ್ಲಿಂ ಭಾರತೀಯ ಮಿಲಿಟರಿ ಅಧಿಕಾರಿಗಳಿದ್ದರು” ಎಂದು ಹೇಳಿದರು ಎಂದು ಅಹ್ಮದ್ ಫಾತಿ ಹೇಳಿದ್ದಾರೆ. ಕಾರ್ಯಾಚರಣೆಯ ವಿಷಯದಲ್ಲಿ ನೀವು ಹೇಳಿದ್ದು ಸಂಪೂರ್ಣವಾಗಿ ಸರಿ” ಎಂದು ಭುಟ್ಟೋ ಉತ್ತರಿಸಿದರು. ಇದಕ್ಕೆ ಅಹ್ಮದ್ ಫಾತಿ, “ಸರಿ” ಎಂದು ಉತ್ತರಿಸಿದರು. ಮುಂದಿನ ಪ್ರಶ್ನೆ ಕೇಳುವ ಮೊದಲೇ, ಭುಟ್ಟೋ ಮಧ್ಯಪ್ರವೇಶಿಸಿ ಸ್ವಲ್ಪ ಹೊತ್ತು ವಾಗ್ದಾಳಿ ನಡೆಸಿ, ಭಾರತದ ವಿರುದ್ಧ ಆರೋಪಗಳನ್ನು ಮಾಡಿದರು. ಆದರೆ ಪತ್ರಕರ್ತ ತನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದರು.

    ವಿಶ್ವಸಂಸ್ಥೆಯ ಪತ್ರಿಕಾಗೋಷ್ಠಿಯಲ್ಲಿ, ಬಿಲಾವಲ್ ಭುಟ್ಟೋ ಅವರು ಕಾಶ್ಮೀ ರ ಸಮಸ್ಯೆಯನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಎತ್ತುವ ಇಸ್ಲಾಮಾಬಾದ್‌ನ ಪ್ರಯತ್ನಗಳು ಅಡೆತಡೆಗಳನ್ನು ಎದುರಿಸಿವೆ ಎಂದು ಒಪ್ಪಿಕೊಂಡರು. ‘ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ನಾವು ಎದುರಿಸುತ್ತಿರುವ ಅಡೆತಡೆಗಳು ವಿಶ್ವಸಂಸ್ಥೆಯ ಒಳಗೆ ಮತ್ತು ಸಾಮಾನ್ಯವಾಗಿ ಇನ್ನೂ ಅಸ್ತಿತ್ವದಲ್ಲಿವೆ’ ಎಂದು ಅವರು ಹೇಳಿದರು. ಬಿಲಾವಲ್ ಭುಟ್ಟೋ ಅವರು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷರು. ಅವರು ಈ ಹಿಂದೆ ದೇಶದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 

   ಇತ್ತೀಚಿನ ಸಂಘರ್ಷದ ನಂತರ ಭಾರತವು ಜಾಗತಿಕ ಸಂಪರ್ಕ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ, ಪಾಕಿಸ್ತಾನವು ಸಹ ವಿದೇಶಗಳಿಗೆ ನಿಯೋಗಗಳನ್ನು ಕಳುಹಿಸಿದೆ. ಬಿಲಾವಲ್ ಭುಟ್ಟೋ ಈ ನಿಯೋಗಗಳಲ್ಲಿ ಒಂದನ್ನು ಮುನ್ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link