ಬಿಜೆಪಿಗೆ ಸುಮಲತಾ ಬೆಂಬಲ : ಕಾರ್ಯಕರ್ತರ ಮುಂದಿನ ನಡೆಯೇನು ?

ಬೆಂಗಳೂರು

    ಇತ್ತ ಸುಮಲತಾ ಅಂಬರೀಶ್ ಅವರೇನೋ ನಾನು ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ ಎಂದು ಘೋಷಿಸಿಬಿಟ್ಟರು ಆದರೆ ಇದರಿಂದ ಮಂಡ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿದ್ದು  ಇದುವರೆಗೂ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುತ್ತಿದ್ದ ನಾಯಕರು, ಕಾರ್ಯಕರ್ತರು ಜೆಡಿಎಸ್, ಕಾಂಗ್ರೆಸ್, ರೈತಸಂಘದಲ್ಲಿದ್ದು ಅವರ ಮುಂದಿನ ನಡೆಯೇನು ಎಂಬುದು ಈಗ  ಕುತೂಹಲಕ್ಕೆ ಕಾರಣವಾಗಿದೆ.

   ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಯಾನಿಯಾಗಿ ಚುನಾವಣೆ ಎದುರಿಸಿದ ವೇಳೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪ್ರತ್ಯಕ್ಷವಾಗಿ ಸುಮಲತಾ ಅವರಿಗೆ ಬೆಂಬಲ ನೀಡಿತ್ತು. ಇದಲ್ಲದೆ, ರೈತ ಸಂಘ ಸೇರಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿದ್ದ ಕೆಲವು ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ಆದೇಶವನ್ನು ತಿರಸ್ಕರಿಸಿ ಸುಮಲತಾ ಅವರ ಬೆಂಬಲಕ್ಕೆ ನಿಂತಿದ್ದರು.

    ಇದರ ಪರಿಣಾಮವೇ ಭಾರೀ ವಿರೋಧ, ಪೈಪೋಟಿ ನಡುವೆ ಸುಮಲತಾ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಇಲ್ಲಿ ತನಕ ಪಕ್ಷೇತರ ಸಂಸದೆಯಾಗಿದ್ದ ಸುಮಲತಾ ಅಂಬರೀಶ್ ಅವರು ಇನ್ನು ಮುಂದೆ ಬಿಜೆಪಿಗೆ ಬೆಂಬಲ ನೀಡುವುದರೊಂದಿಗೆ ಬಿಜೆಪಿಯಲ್ಲಿ ಒಬ್ಬರಾಗುವುದರಿಂದ ರಾಜಕೀಯವಾಗಿ ಈ ಹಿಂದಿಗಿಂತಲೂ ಹೆಚ್ಚಿನ ವಿರೋಧಿಗಳು ಹುಟ್ಟಿಕೊಳ್ಳುವುದು ಖಚಿತವಾಗಲಿದೆ.

    ಇದುವರೆಗೆ ಅವರಿಗೆ ಜೆಡಿಎಸ್ ಮಾತ್ರ ವಿರೋಧಿಯಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕೂಡ ವಿರೋಧಿಯಾಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳ ವಿರೋಧದ ನಡುವೆ ರಾಜಕಾರಣ ಹೇಗೆ ಮಾಡುತ್ತಾರೆ ಎನ್ನುವುದೇ ಕುತೂಹಲಕಾರಿಯಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap