ಕಳಪೆ ರಸ್ತೆ ಕಾಮಗಾರಿ : ಸಾರ್ವಜನಿಕರ ಜೀವಕ್ಕೆ ಯಾರು ಜವಾಬ್ದಾರರರು…?

ನಾಯಕನಹಟ್ಟಿ :

ವರದಿ ಟಿ. ಟಿ.ಹರೀಶ್ ತಿಮ್ಮಪ್ಪಯ್ಯನಹಳ್ಳಿ

  ಲೋಕೋಪಯೋಗಿ ಇಲಾಖೆ ಇಂಜಿನೀಯರ್ ಹಾಗೂ ಗುತ್ತಿಗೆದಾರರು ಡಾಂಬರ್ ಹಾಕಿದ ಬೈಪಾಸ್ ರಸ್ತೆಗೆ ಮತ್ತೆ ಕಳಪೆ ಡಾಂಬರೀಕರಣ ಮಾಡಿದ್ದಾರೆ. ತಮಗೆ ಇಷ್ಟ ಬಂದಂತೆ ಡಾಂಬರೀಕರಣ ಮಾಡಿ ಡಾಂಬರ್ ಹಾಕಿದ ಎರಡು ದಿನಗಳಲ್ಲಿ ಸಣ್ಣ ಸಣ್ಣ ಜಲ್ಲಿಗಳು (ಚಿಪ್ಸ್) ಜೊತೆ ಡಾಂಬರ್ ಮೇಲಕ್ಕೆ ಬಂದಿವೆ. ಇದಕ್ಕೆ ಕಳಪೆ ಗುಣಮಟ್ಟದ ಡಾಂಬರ್ ಬಳಕೆ ಮಾಡಿದ್ದಾರೆ. ಹೌದು ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಡಿ.ಎಂ.ಎಫ್ ನಲ್ಲಿ ಒಂದು ಕೋಟಿರುಗಳು ಅನುದಾನವನ್ನು ನೀಡಿದ್ದರು.

     ಕಳಪೆ ಕಾಮಗಾರಿಯನ್ನು ಮಾಡಿಸುವ ಮೂಲಕ ಸರ್ಕಾರದ ಹಣವನ್ನು ಗುತ್ತಿಗೆದಾರರ ಜೇಬಿಗೆ ಸೇರಿಸಲಾಗುತ್ತದೆ ಎಂದು ಸಾರ್ವಜನಿಕರು ದೂರಿದರು. ಕಾಟಚಾರಕ್ಕೆ ಈ ರಸ್ತೆ ಕಾಮಗಾರಿ ಮಾಡಿದ್ದು, ಈಗಲೂ ಕಿತ್ತು ಹೋಗಿದೆ. ಈ ಭಾಗದಲ್ಲಿ ಸಾರ್ವಜನಿಕರು, ಶಾಲೆ ವಿದ್ಯಾರ್ಥಿಗಳು, ಆಟೋ, ದ್ವೀಚಕ್ರ ವಾಹನ, ಹೋಡಾಡುತ್ತಿರುತ್ತಾರೆ. ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಸ್ವಲ್ಪ ಎಚ್ಚರ ತಪ್ಪಿದರು ಅಪಾಯ ಕಟ್ಟಿಟ್ಟಬುತ್ತಿ, ರಾತ್ರಿ ಸಮಯದಲ್ಲಿ ಈ ಜಾಗದಲ್ಲಿ ಮೈಯಲ್ಲ ಕಣ್ಣಾಗಿಸಿಕೊಂಡು ಹೋಡಾಡಬೇಕಾಗಿದೆ.

   ರಸ್ತೆಯಲ್ಲಿ ವಾಹನಗಳು ಸಂಚಾರಿಸುವಾಗ ಸರ್ಕಸ್ ಮಾಡಿಕೊಂಡು ನಡೆಯಬೇಕಾಗಿದೆ. ಕೂಡಲೇ ಗುತ್ತಿಗೆದಾರರು, ಅಧಿಕಾರಿಗಳು ಪ್ರಾಣ ಅಪಾಯ ಸಂಭವಿಸುವ ಮೊದಲು ಗುಣಮಟ್ಟದ ರಸ್ತೆಯನ್ನು ಮಾಡಬೇಕಾಗಿದೆ. ಬೈಕ್ ಸವಾರರು ಜೀವನನ್ನು ಕೈಯಲ್ಲಿಡಿದುಕೊಂಡು ವಾಹನ ಚಾಲನೆ ಮಾಡಬೇಕಾಗಿದೆ. ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಗುಣಮಟ್ಟದ ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಸನ್ನಿದಿಯ ಪರಿಶುದ್ಧ ಸ್ಥಳದಲ್ಲಿ ಕಳಪೆ ಕಾಮಗಾರಿ ಮಾಡಿದ್ದು, ಅದರಿಂದ ಸ್ಥಳಿಯರು ಗುತ್ತಿಗೆದಾರರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ.

   ತೇರು ಬೀದಿ, ಮುಖ್ಯರಸ್ತೆ ಡಾಂಬರೀಕರಣ ಮಾಡಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆಯ ಮುಂಭಾಗ ಡಾಂಬರ ಮಾಡದೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬೈಪಾಸ್ ರಸ್ತೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಇದೇ ರಸ್ತೆಯಲ್ಲಿ ಹೋಗುತ್ತಾರೆ ಬರುತ್ತಿರುತ್ತಾರೆ. ಯಾರಿಗಾದರೂ ಏನಾದರು ತೊಂದರೆಯಾದರೆ ಆ ಸಂಬಧಪಟ್ಟ ಇಲಾಖೆಯವರು, ಗುತ್ತಿಗೆದಾರರು ನೇರ ಹೊಣೆಯಾಗಿರುತ್ತಾರೆ. ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗೆ ಹಾಗೂ ಸಂಬಂಧಪಟ್ಟ ಅಧಿಕಾರಿ ಇತ್ತಕಡೆ ಗಮನಹರಿಸಬೇಕಾಗಿದೆ.

  ಸರಿಯಾದ ಪ್ರಮಾಣದಲ್ಲಿ ಡಾಂಬರ್ ಮಿಕ್ಸ್ ಮಾಡದೇ ಡಾಂಬರೀಕರಣ ಕಾಮಗಾರಿ ಮಾಡಲಾಗಿದೆ. ಕೇವಲ ಅರ್ಧ ಇಂಚು ಹಾಕುವುದರಿಂದ ರಸ್ತೆ ಕಳಪೆ ಸ್ಪಷ್ಟವಾಗಿ ಕಂಡುಬಂದಿದೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ರಸ್ತೆಯನ್ನು ನೋಡಿ ಸಾರ್ವಜನಿಕರು, ಸುತ್ತಮುತ್ತಲಿನ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ರಸ್ತೆ ಕಾಮಗಾರಿ ಮಾಡುತ್ತಿರುವ ಹಾಗೂ ಗುತ್ತಿಗೆದಾರರು ತಮಗೆ ಇಷ್ಟ ಬಂದಂತೆ ಕೆಲಸ ಮಾಡಿದ್ದಾರೆ. ಇಲ್ಲಿ ಯಾರೂ ಕೇಳುವವರಿಲ್ಲ ಎಂದು ಅಂದುಕೊಂಡಿದ್ದಾರೆ. ರಸ್ತೆ ಗುಣಮಟ್ಟದ ರಸ್ತೆಯನ್ನು ಮಾಡಬೇಕು ಎಂದರು. ಕರ್ನಾಟಕ ರಾಜ್ಯ ಹಸಿರು ಸೇನೆ ವಾಸಿದೇವೆ ಮೇಟಿ ಬಣದ ಹೋಬಳಿ ಅಧ್ಯಕ್ಷರಾದ ನಾಗರಾಜ್ ಮೀಸೆ ಒತ್ತಾಯಿಸಿದ್ದಾರೆ.

  ಐತಿಹಾಸಿಕ ಶ್ರೀ ತಿಪ್ಪೇರುದ್ರಸ್ವಾಮಿ ಸನ್ನಿದಿಯ ಸರಿಯಾದ ಡಾಂಬರ್ ರಸ್ತೆ ಕಳಪೆ ಡಾಂಬರೀಕರಣ ಮಾಡಿರುತ್ತಾರೆ. ರಸ್ತೆ ಮಾಡುವ ಬದಲು ಹಾಗೇ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಸ್ಥಳಿಯರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ. ಹಳೆ ಡಾಂಬರೀಕರಣ ಕೂಡ ಹಾಗೇ ಕಿತ್ತು ಬಂದಿವೆ. ಇದನ್ನು ಕಂಡ ಸ್ಥಳಿಯರು ಅಭಿವೃದ್ಧಿಗಾಗಿ ರಸ್ತೆಯಲ್ಲ, ದುಡ್ಡಿಗಾಗಿ ರಸ್ತೆ ನಿರ್ಮಿಸಿದ್ದಾರೆ ಎಂದು ದೂರಿದರು.

Recent Articles

spot_img

Related Stories

Share via
Copy link