ಮತ ಚಲಾವಣೆ ಸಮಯದಲ್ಲಿ ಜೈ ಬಜರಂಗ ಬಲಿ ಎನ್ನಿ : ಮೋದಿ

ಅಂಕೋಲಾ

     ಕಾಂಗ್ರೆಸ್‌ದು ನಿಂದನೆ ಸಂಸ್ಕೃತಿ’ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೇ 10 ರಂದು ಮತಗಟ್ಟೆಗಳಲ್ಲಿ ಮತ ಚಲಾಯಿಸುವ ಸಂದರ್ಭದಲ್ಲಿ ಜೈ ಬಜರಂಗ ಬಲಿ ಎಂದು ಹೇಳುವ ಮೂಲಕ ಅವರನ್ನು ಶಿಕ್ಷಿಸುವಂತೆ ಕರ್ನಾಟಕದ ಜನತೆಗೆ ಮನವಿ ಮಾಡಿದ್ದಾರೆ.

     ತಾವು “ಭ್ರಷ್ಟ ವ್ಯವಸ್ಥೆಯನ್ನು” ಹಾಳು ಮಾಡಿರುವ ಕಾರಣ ಕಾಂಗ್ರೆಸ್ ಮತ್ತು ಅದರ ನಾಯಕರು ತನ್ನನ್ನು ದ್ವೇಷಿಸುತ್ತಾರೆ ಮತ್ತು ಬಾಯಿಗೆ ಬಂದಂತೆ ನಿಂದಿಸುತ್ತಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. “ಈ ಚುನಾವಣೆಯಲ್ಲಿ ಕಾಂಗ್ರೆಸ್, ನಿವೃತ್ತಿಯಾಗುತ್ತಿರುವ ತನ್ನ ನಾಯಕನ ಹೆಸರಿನಲ್ಲಿ ಮತ ಕೇಳುತ್ತಿದೆ. ಅವರು ಮತ ಕೇಳುವ ಇನ್ನೊಂದು ಮಾರ್ಗವೆಂದರೆ ಮೋದಿಯನ್ನು ನಿಂದಿಸುವುದು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

      ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಯಾರಾದರೂ ಈ ನಿಂದನೆ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಾರೆಯೇ..? ಯಾರನ್ನಾದರೂ ನಿಂದಿಸಲು ಯಾರು ಇಷ್ಟಪಡುತ್ತಾರೆಯೇ..? ಯಾರಾದರೂ ಸಣ್ಣ ಮನುಷ್ಯನನ್ನೂ ನಿಂದಿಸುವುದನ್ನು ಇಷ್ಟಪಡುತ್ತಾರೆಯೇ..? ನಿಂದಿಸುವವರನ್ನು ಕರ್ನಾಟಕ ಕ್ಷಮಿಸುತ್ತದೆಯೇ?” ಎಂದು ಪ್ರಶ್ನಿಸುತ್ತಾರೆ.

       “ಈ ಬಾರಿ ನೀವು ಏನು ಮಾಡುತ್ತೀರಿ..? ನೀವು ಅವರನ್ನು ಶಿಕ್ಷಿಸುತ್ತೀರಾ..? ನೀವು ಮತಗಟ್ಟೆಯಲ್ಲಿನ ಮತದಾನ ಮಾಡುವ ಗುಂಡಿಯನ್ನು ಒತ್ತಿದಾಗ ‘ಜೈ ಬಜರಂಗ ಬಲಿ’ ಎಂದು ಹೇಳುವ ಮೂಲಕ ಅವರನ್ನು ಶಿಕ್ಷಿಸಿ” ಎಂದು ಜನರಿಗೆ ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap