ಮಧುಗಿರಿ
ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ನೇರಳೆಕೆರೆ ಗ್ರಾಮ ಪಂಚಾಯಿತಿಗೆ ಸೇರಿದ ಗಡ್ಡೇತಿಮ್ಮನಹಳ್ಳಿ ಗ್ರಾಮ ಹನುಮಂತೇಗೌಡನ ಮಗ ಲಕ್ಷ್ಮೀನಾರಾಯಣ (27) ಎನ್ನುವ ಯುವಕನು ಆಗಸ್ಟ್ 26 ರಂದು ಬೆಳಿಗ್ಗೆ ತನ್ನ ಮನೆಯಲ್ಲಿಟ್ಟಿದ್ದ ಸಿರಾಪ್ (ಔಷದಿ) ಕುಡಿಯುವ ಬದಲಾಗಿ ಆಕಸ್ಮಿಕವಾಗಿ ತಮಗೆ ಸೇರಿದ ದನ-ಕರು, ಕುರಿ, ಮೇಕೆ ಇತ್ಯಾದಿ ಪ್ರಾಣಿಗಳಿಗೆ ಬೀಳುವ ಪಿಡದಗಳನಿಯಂತ್ರಣಕ್ಕೆ ತಂದಿದ್ದ ಪಿಡದ ಔಷದಿ ಸೇವನೆ ಮಾಡಿ ನಂತರ ತನ್ನ ಹೊಲದ ಹತ್ತಿರ ಶೇಂಗಾ ಬೆಳೆಯ ಹೊಲದ ಕೆಲಸ ಮಾಡುತ್ತಿರುವ ವಿಷ ನೆತ್ತಿಗೆರಿದ ಶರೀರವನ್ನು ಲೇಪಿಸಿದಾಗ ಲಕ್ಷ್ಮೀನಾರಾಯಣನು ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸದರಿ ಘಟನೆಯ ಬಗ್ಗೆ ಮೃತನ ತಂದೆ ಹನುಮಂತೆಗೌಡನು ಮಿಡಿಗೇಶಿ ಪೋಲೀಸ್ ಠಾಣೆಗೆ ಆಗಸ್ಟ್ 26 ರಂದು ನೀಡಿದ ಲಿಖಿತ ದೂರಿನನ್ವಯ ಮಿಡಿಗೇಶಿ ಪೋಲೀಸ್ ಠಾಣಾಧಿಕಾರಿ ಪುರುಷೋತ್ತಮ್ ಜಿ ರವರು ಘಟನಾಸ್ಥಳಕ್ಕೆ ಬೇಟಿನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮಧುಗಿರಿ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಶವಪರೀಕ್ಷೆ ಮಾಡಿಸಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
