ಹಾನಗಲ್ಲ :
ಅಪರಾಧ ಪ್ರಕರಣಗಳಲ್ಲಿನ ಆರೋಪಿಗಳನ್ನು ಅತೀ ಶೀಘ್ರ ಹಾಗೂ ಅತಿ ಹೆಚ್ಚು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಆಡೂರ ಪೊಲೀಸ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ ವರಿಷ್ಠ ಕೆ.ಪರಶುರಾಮ ಗೌರವಿಸಿ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿದರು.
ಹಾನಗಲ್ಲ ತಾಲೂಕಿನ ಆಡೂರು ಪೊಲೀಸ ಠಾಣೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳನ್ನು ಭೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಹೆಚ್ಚು ಶ್ರಮವಹಿಸಿ ನೊಂದವರಿಗೆ ನ್ಯಾಯ ಒದಗಿಸಲು ಸಹಕಾರಿಯಾದ ಆಡೂರು ಪೊಲೀಸ ಕಛೇರಿ ಪಿಎಸ್ಐ ಟಿ.ಮುರುಗೇಶ, ಪೊಲೀಸ ಪೇದೆಗಳಾದ ಆನಂದ ದೊಡ್ಡಕುರುಬರ, ರಮೇಶ ಅಗಸಿಬಾಗಿಲ, ಚಂದ್ರು ಅಂಬಿಗೇರ ಅವರನ್ನು ಜಿಲ್ಲಾ ಪೊಲೀಸ ವರಿಷ್ಠ ಕೆ.ಪರಶುರಾಮ ಹಾವೇರಿಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರಿವಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
