ಬೆಂಗಳೂರು
ಕೃಷ್ಣಾ ಮೇಲ್ದಂಡೆ ಯೋಜನೆಯ 2021-22ನೇ ಸಾಲಿನ ಹಿಂಗಾರು ಹಂಗಾಮಿನ ಅವಧಿಯನ್ನು ದಿನಾಂಕ:18.03.2022ರಿಂದ ವಿಸ್ತರಿಸುವ ಕುರಿತು.
• ದಿನಾಂಕ: 23.11.2021ರಂದು ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಅಧಿಕಾರಿ ಸದಸ್ಯರುಗಳೊಂದಿಗೆ ಜರುಗಿದ 2021-22ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ದಿನಾಂಕ:08.12.2021 ರಿಂದ 17.03.2022ರ ವರೆಗೆ 14 ದಿನ ಚಾಲೂ ಹಾಗೂ 10 ದಿನ ಬಂದ್ ಪದ್ಧತಿ ಅನುಸರಿಸಿ 5 ಪಾಳೆಯಲ್ಲಿ 60 ದಿನಗಳಿಗೆ ನೀರು ಪೂರೈಸಲಾಗುವುದು ಹಾಗೂ 4 ಪಾಳೆಯಲ್ಲಿ 40 ದಿನ ಬಂದ್ ಅನುಸರಿಸಿ ಒಟ್ಟಾರೆ 100 ದಿನಗಳಿಗೆ ಹಿಂಗಾರು ಹಂಗಾಮಿಗೆ ನೀರು ಪೂರೈಸಲು ತೀರ್ಮಾನಿಸಲಾಯಿತು.
• ಪ್ರಸ್ತುತ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ರೈತ ಸಂಘಟನೆ ಹಾಗೂ ರೈತ ಪ್ರತಿನಿಧಿಗಳಿಂದ ಸಾಕಷ್ಟು ಮನವಿ ಪತ್ರಗಳನ್ನು ಸ್ವೀಕರಿಸಲಾಗಿದ್ದು, ಪತ್ರಗಳಲ್ಲಿ ಕಾಲುವೆ ಜಾಲದಲ್ಲಿ ನೀರನ್ನು ದಿನಾಂಕ:10.04.2022ರವರೆಗೆ ವಿಸ್ತರಿಸಲು ವಿನಂತಿಸಿಕೊಂಡಿರುತ್ತಾರೆ.
• ದಿನಾಂಕ:10.03.2022 ರಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಸೂಚಿತ ಅಚ್ಚುಕಟ್ಟು ಪ್ರದೇಶಕ್ಕೆ ಸಂಬಂಧಪಟ್ಟ ನಾಲ್ಕು ವಲಯದ ಮುಖ್ಯ ಅಭಿಯಂತರರು ಹಾಗೂ ಸಂಬಂಧಪಟ್ಟ ನೀರಾವರಿ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ ಕೆಳಗಿನ ವಿವರಗಳನ್ನು ಅವಲೋಕಿಸಿದೆ.
• ದಿನಾಂಕ:14.03.2022ರಂದು ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯು 49.465 + 12.92 =62.385 ಟಿ.ಎಂ.ಸಿ. ಇರುವುದು. ದಿನಾಂಕ:01.12.2021 ರಿಂದ 30.06.2022 ರವರೆಗೆ ಕುಡಿಯುವ ಮತ್ತು ಕೃಷಿಯೇತರ ಬಳಕೆಗಾಗಿ ಕಾಯ್ದಿರಿಸಿದ ನೀರು 3.54 ಟಿ.ಎಂ.ಸಿ. ದಿನಾಂಕ:01.12.2021 ರಿಂದ 13.03.2022ರ ವರೆಗೆ ಇದಕ್ಕಾಗಿ ಬಳಕೆಯಾದ ನೀರು 7.95 ಟಿ.ಎಂ.ಸಿ., ದಿನಾಂಕ:14.03.2022 ರಿಂದ 30.06.2022ರ ವರೆಗೆ ಇದಕ್ಕಾಗಿ ಬೇಕಾಗಿರುವ 38.54-7.95=30.59 ಟಿ.ಎಂ.ಸಿ.
• ದಿನಾಂಕ:14.03.2022 ರಂದು ಕೃಷಿಗಾಗಿ ಉಳಿಯುವ ನೀರು 32.594 ಟಿ.ಎಂ.ಸಿ., ದಿನಾಂಕ:14.03.2022 ರಿಂದ 17.03.2022ರ ವರೆಗೆ ಚಾಲ್ತಿಯಲ್ಲಿರುವ ನಾಲ್ಕು ದಿನಗಳಿಗೆ ಬೇಕಾಗುವ ನೀರು 4.24 ಟಿ.ಎಂ.ಸಿ.
• ಕೃಷ್ಣಾ ಮೇಲ್ದಂಡೆ ಯೋಜನೆಯ ಯೋಜನಾ ವರದಿ ಅನುಸಾರ ನೀರಾವರಿಗಾಗಿ ಬಳಸಲು ಹಂಚಿಕೆಯಾದ ನೀರಿನ ಪ್ರಮಾಣ 146.971 ಟಿ.ಎಂ.ಸಿ. 2021-22ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಎರಡು ಜಲಾಶಯಗಳ ನಡುವ ದಿನಾಂಕ:03.03.2022ರವರೆಗೆ ನೀರಾವರಿ ಗಾಗಿ ಈಗಾಗಲೇ ಬಳಸಿರುವ ನೀರಿನ ಪ್ರಮಾನ 124.282 ಟಿ.ಎಂ.ಸಿ.
• ಯೋಜನಾ ವರದಿ ಅನುಸಾರ ದಿನಾಂಕ:14.03.2022ರಂದು ಕೃಷಿ ಬಳಕೆಗಾಗಿ ಉಳಿಯುವ ನೀರಿನ ಪ್ರಮಾಣ 22.689 ಟಿ.ಎಂ.ಸಿ.
• ಇದನ್ನು ದಿನಂಪ್ರತಿ 1.06 ರಂತೆ 21 ದಿನಗಳಿಗೆ ನೀರು ಪೂರೈಸಬಹುದಾಗಿದೆ.
ಪ್ರಸ್ತುತ ನೀರು ಹರಿಸುವ ಬಗ್ಗೆ ಚರ್ಚಿಸಿ ಒಟ್ಟಾರೆ ಈ ಕೆಳಗಿನಂತೆ ನಿರ್ಣಯಿಸಲಾಗಿದೆ.
• ನಾರಾಯಣಪುರ ಜಲಾಶಯದ ಕಾಲುವೆ ಜಾಲಗಳಿಗೆ ದಿನಾಂಕ:23.11.2021ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ 0.96 ಹಾಗೂ ಆಲಮಟ್ಟಿ ಜಲಾಶಯದ ಕಾಲುವೆ ಜಾಲಗಳಿಗೆ 0.10 ಟಿ.ಎಂ.ಸಿ. ಒಟ್ಟಾರೆ 1.06 ಟಿ.ಎಂ.ಸಿ. ನೀರು ಪ್ರತಿ ದಿನ ಚಾಲೂ ದಿನಗಳಿಗೆ ಅನುಮೋದನೆಯಾಗಿದೆ.
ಅ)ನಾರಾಯಣಪುರ ಎಡದಂಡೆ ಕಾಲುವೆ ಜಾಲಕ್ಕೆ ನೀರು ಹರಿಸುವ ಬಗ್ಗೆ:
• ನಾರಾಯಣಪುರ ಎಡದಂಡೆ ಕಾಲುವೆಗೆ ಪ್ರತಿದಿನ 8600 ಕ್ಯೂಸೆಕ್ಸ್ ದರದಂತೆ 0.74 ಟಿ.ಎಂ.ಸಿ. ಆಗುವುದು. ಅದರಂತೆ ದಿನಾಂಕ:14.03.2022 ರಿಂದ 03.04.2022ರವರೆಗೆ ಸತತವಾಗಿ 21 ದಿನಗಳಿಗೆ ನೀರು ಪೂರೈಸಲಾಗುವುದು.
ಬ)ನಾರಾಯಣಪುರ ಬಲದಂಡೆ & ಆಲಮಟ್ಟಿ ನೀರಾವರಿ ಯೋಜನೆಯ ಕಾಲುವೆ ಜಾಲಕ್ಕೆ ನೀರು ಹರಿಸುವ ಬಗ್ಗೆ:
• ಸದರಿ ಕಾಲುವೆ ಜಾಲಗಳಿಗೆ ದಿನಾಂಕ:14.03.2022 ರಿಂದ 10 ದಿನ ಚಾಲೂ 08 ದಿನ ಬಂದ್ ಹಾಗೂ ಪುನಃ 10 ದಿನ ಚಾಲೂ ಇರಿಸಿ ಈ ಕೆಳಗಿನಂತೆ ನೀರನ್ನು ಪೂರೈಸಲಾಗುವುದು.
ಕ್ರ.ಸಂ. ನೀರು ಬಿಡುವ ದಿನಾಂಕಗಳು ದಿನಗಳು ನೀರು ನಿಲ್ಲಿಸುವ ದಿನಾಂಕಗಳು ದಿನಗಳು
1 ದಿನಾಂಕ: 14.03.2022 ರಿಂದ 23.03.2022 10 ದಿನಾಂಕ: 24.03.2022 ರಿಂದ 31.03.2022 08
2 ದಿನಾಂಕ:01.04.2022 ರಿಂದ 10.04.2022 10
ಒಟ್ಟು 20
• ಈಗಾಗಲೇ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚಕಟ್ಟು ಪ್ರದೇಶದಲ್ಲಿ ಲಘು ನೀರಾವರಿ ಬೆಳೆಗಳು ಕಟಾವಿಗೆ ಬಂದಿದ್ದು, ಹಿನ್ನೆಡೆಯಾಗಿ ಬಿತ್ತನೆಯಾದ ಈರುಳ್ಳಿ, ಶೇಂಗಾದಂತಹ ಬೆಳೆಗಳನ್ನು ಸಂರಕ್ಷಿಸಲು ಸದರಿ ಹಿಂಗಾರು ಹಂಗಾಮಿನ ಅವಧಿಯನ್ನು ಲಭ್ಯವಿರುವ ನೀರಿನ ಪ್ರಮಾಣಕ್ಕೆ ವಿಸ್ತರಿಸಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತಾಪಿ ವರ್ಗವು ನೀರು ಪೋಲಾಗದಂತೆ ಹಿತವಾಗಿ ಮಿತವಾಗಿ ಬಳಸಲು ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಸಹಕರಿಸಲು ಕೋರಲಾಗಿದೆ.
- ಗೋವಿಂದ ಎಂ.ಕಾರಜೋಳ
- ಜಲ ಸಂಪನ್ಮೂಲ ಸಚಿವರು
