ತಿಪಟೂರು :
ಕಾವೇರಿ ನಾಲಾ ವಿಭಾಗದಲ್ಲಿ ಅನ್ಯಾಯವಾಂದಂತೆ ಎತ್ತಿನಹೊಳೆ ಯೋಜನೆಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಾಸಕರಾಗಿ ಮೊದಲನೇ ಪತ್ರಿಕಾಗೋಷ್ಠಿಯನ್ನು ಉದ್ದೇಶಿಮಾತನಾಡಿದ ಅವರು ಚುನಾವಣೆಯಾಗಿ ಸುಮಾರು 100 ದಿನಗಳು ಕಳೆದಿವೆ, ಸರ್ಕಾರ ರಚನೆಯಾಗಿ 75 ದಿನಗಳು ಕಳೆದಿವೆ ಆದರೂ ಈ ಸಮಿಶ್ರ ಸರ್ಕಾರದ ಇಬ್ಬಗೆಯ ನೀತಿಯಿಂದ ವಿಧಾನಸೌಧವು ಖಾಲಿಖಾಲಿಯಿದೆ ಮತ್ತು ಹಲವಾರು ಖಾತೆಗಳನ್ನು ಮುಖ್ಯಮಂತ್ರಿಗಳೂ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ ಅದರಲ್ಲೂ ಪ್ರಮುಖ ಖಾತೆಯಾದ ವಿದ್ಯುತ್ ಖಾತೆಯನ್ನು ತಮಲ್ಲೇ ಇಟ್ಟುಕೊಂಡಿರುವುದು ತುಂಬಾ ಹಿನ್ನಡೆಯಾಗಿದೆ. ಇದು ಜನರಿಗೆ ರಾಜ್ಯದಲ್ಲಿ ಸರ್ಕಾರವಿದೆಯೋ ಇಲ್ಲವೋಎಂಬ ಗೊಂದದಲ್ಲಿ ಜನತೆಗೆ ಕಾಡುತ್ತಿದೆ. ಎಲ್ಲಾ ಇಲಾಖೆಗಳ ವರ್ಗಾವಣೆಯು ಜೂನ್, ಜುಲೈ ತಿಂಗಳು ಕಳೆದು ಆಗಸ್ಟ್ ಕೊನೆಯವಾರವಾದರೂ ವಾರ್ಗವಣೆಯಾಗದೆ ಕೆಲ ಅಧಿಕಾರಿಗಳಿಗೆ ಸೂಕ್ತವಾದ ಸ್ಥಳ ನಿಯೋಜನೆಯಾಗದೆ ಸುಮ್ಮನೇ ವೇತನಪಡೆಯುತ್ತಿದ್ದಾರೆ.
ಈ ಬಾರಿಯೇ ಮೊದಲು ಜಲಾಶಯದಿಂದ ನಾಲೆಗಳಿಗೆ ಯಾವುದೇ ಸಭೆನಡೆಸದೇ ನೀರುಬಿಟ್ಟಿರುವುದು ಇದೇ ಮೊದಲು. ಈ ಬಾರಿ ನಾವು ನಾಲೆಯಲ್ಲಿ ನೀರು ಹರಿಯುವ ಕೊನೆಯ ದಿನದವರೆಗೂ ನಾವು ನೀರನ್ನು ನಮ್ಮ ಕೆರೆಗಳನ್ನು ತುಂಬಿಸಿಕೊಳ್ಳಲು ಬಳಸುತ್ತೇವೆ. ಹಾಗೆಯೆ ಕಾವೇರಿ ನಾಲಾ ಯೋಜನೆಯಲ್ಲಿ ಹೆಚ್ಚು ಭೂಮಿಯನ್ನು ಕಳೆದುಕೋಂಡಿರುವುದು ನಮ್ಮ ತಾಲ್ಲೂಕಿನ ರೈತರು ಆದರೆ ಇದರ ಹೆಚ್ಚಿನ ಪ್ರಯೋಜನವನ್ನು ತುರುವೇಕೆರೆ, ಗುಬ್ಬಿ ತಾಲ್ಲೂಕಿನ ಜನರು ಪಡೆದುಕೊಳ್ಳುತ್ತಿದ್ದಾರೆ. ಹಾಗೇಯೇ ಎತ್ತಿನಹೊಳೆ ಯೋಜನೆಯು ಹಿಂದೆ ಬಿ.ಜೆ.ಪಿ ಸರ್ಕಾರವಿದ್ದಾಗ ಈ ಯೋಜನೆಯು ಜಾರಿಗೆ ಬಂದಿತು.
ಆದರೆ ಈ ಯೋಜನೆಯನ್ನು ಕಾಂಗ್ರೇಸ್ ಸರ್ಕಾರ ಈ ಯೋನೆಯು ನಿದಾನ ಗತಿಯ ಪ್ರಗತಿಯಿಂದಾಗಿ ಈಗ ಮತ್ತೆ ಟೆಂಡರ್ ಕರೆದಿರುತ್ತಾರೆ. ಆದರೆ ಈ ನಮ್ಮ ತಾಲ್ಲೂಕಿಗೆ ಯಾವುದೇ ಕೆರೆಗಳಿಗೂ ನೀರನ್ನು ತುಂಬಿಸುವ ಯೋಜನೆಯಲ್ಲಿಲ್ಲ ಮಧಗುಗಿರಿ, ಪಾವಗಡ, ಚಿಕ್ಕಬಳ್ಳಾಪುರ, ಕೋಲಾರ ಈ ಭಾಗದ ಕೆರೆಗಳಿಗೆ 24.8 ಟಿ.ಎಂ.ಸಿ ನೀರು ಜಲನೀತಿಯಲ್ಲಿದೆ ಆದರೆ ಇದರಲ್ಲಿ ನಮ್ಮ ತಾಲ್ಲೂಕಿಗೆ 1.5 ಟಿ.ಎಂ.ಸಿ ಯನ್ನು ನಮ್ಮ ತಾಲ್ಲೂಕಿಗೆ ಬಿಡಲೇಬೇಕು.
ಇದರಿಂದ ನೈಸರ್ಗಿಕವಾಗಿ ಯಾವುದೇ ಖರ್ಚು ಇಲ್ಲದೆ ನೇರವಾಗಿ ಕರಡಿ, ಕುಪ್ಪಾಳು, ಅರಳಗುಪ್ಪೆ ಕೆರೆಗಳು ತುಂಬಿಸಬಹುದು 2013 ರ ಜಲನೀತಿಯಲ್ಲಿ ನಮ್ಮ ತಾಲ್ಲೂಕಿಗೆ ಯಾವುದೇ ನೀರಿನ ವಿಂಗಡನೆಯಾಗಿರುವುದಿಲ್ಲ ಆದರೆ ಈಗ ಕೊಟ್ಟಿರುವ ವರದಿಯಂತೆ ನಮ್ಮ ತಾಲ್ಲೂಕಿಗೆ 1.5 ಟಿ.ಎಂ.ಸಿ. ನೀರನ್ನು ಬಿಡಬೇಕು ಇಲ್ಲದಿದ್ದರೆ ಹೋರಟಮಾಡಲಾಗುವುದು ಎಂದರು.
ನಾವು ಶಾಸನಕನಾದ ಮೇಲೆ ಎಲ್ಲಾ ಇಲಾಖೆಗಳಿಗೂ ಬೇಟಿಕೊಟ್ಟು ಯಾವಯಾವ ಇಲಾಖೆಯಲ್ಲಿ ಅಧಿಕಾರಿಗಳು, ಆಸ್ಪತ್ರೆಗಳಲ್ಲಿ ವೈದ್ಯರು, ಇತರೆ ಸಿಬ್ಬಂದಿಗಳನ್ನು ಶೀಘ್ರವಾಗಿ ತುಂಬಲಾಗುವುದು. ಪ್ರತಿ ಸೋಮವಾರ ನಾನು ಸಹ ತಾಲ್ಲೂಕು ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಗ್ರಾಮಸಭೆಗಳನ್ನು ನಡೆಸಿ ಗ್ರಾಮಸ್ಥರುಗಳ ಕುಂದುಕೊರತೆಗಳನ್ನು ಪರಿಶೀಲಿಸಲಾಗುತ್ತದೆ. ಹಾಗೆ ಈಗ ನಾಲೆಯಲ್ಲಿ ಬರುತ್ತಿರುವ ನೀರಿನಿಂದ ಈಗಾಗಲೇ ಮೊದಲೇನ ಹಂತದಲ್ಲಿ ಹೊನ್ನವಳ್ಳಿ, ಬಾಗುವಾಳ, ಬೊಮ್ಮಲಾಪುರ, 2ನೇ ಹಂತದಲ್ಲಿ ಬೆಸುಗೆ, ಕೆರೆಗೋಡಿ, ತಡಸೂರು ಕೆರೆಗಳಿಗೆ 15 ದಿನ, 3ನೇ ಹಂತದಲ್ಲಿ ಉರುಗದಹಳ್ಳಿ, ಚಿಕ್ಕಬಿದರೆ, ಮತ್ತಿಹಳ್ಳಿ ಈಗ 6 ದಿನದಿಮದ ನೀರು ಹೋಗುತ್ತಿದೆ. ಆದರೆ ಹಿಂದೆ ಬರಗಾಲ ಮತ್ತು ಕೆರೆಗಳಲ್ಲಿ ಅವೈಜ್ಞಾನಿಕವಾಗಿ ಮಣ್ಣನ್ನು ತೆಗೆದಿರುವುದರಿಂದ ನಾವು ಬಿಟ್ಟ ನೀರನ್ನು ಭೂಮಿಯೇ ಕುಡಿಯುತ್ತದೆ ಆದ್ದರಿಂದ ಕೆರೆಗಳು ತುಂಬುತ್ತಿಲ್ಲವೆಂದರು.
ಈ ಸಂಬದರ್ಭದಲ್ಲಿ ಎ.ಪಿ.ಎಂ.ಸಿ ಸದಸ್ಯ ದಿವಾಕರ್, ಬಿ.ಜೆ.ಪಿ ನಗರಾಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷ ಗಂಗಾಧರಯ್ಯ, ಮುಖಂಡರಾದ ಬಿಸಲೇಹಳ್ಳಿ ಜಗದೀಶ್ ಮುಂತಾದವರಿದ್ದರು.
