ಏ.2 ರಂದು ಐದು ನಾಮಪತ್ರ ಸಲ್ಲಿಕೆ

ದಾವಣಗೆರೆ

         ಏಪ್ರಿಲ್ 23 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಾ.28 ರಿಂದ ಆರಂಭವಾಗಿದ್ದು, ಏ.2 ರ ಇಂದು ಜಿಲ್ಲೆಯಲ್ಲಿ 5 ನಾಮಪತ್ರ ಸಲ್ಲಿಕೆಯಾಗಿದೆ.

          ಸುಭಾನ್ ಖಾನ್(ಸಾಮಾನ್ಯ), ಕೆಟಿಜೆ ನಗರ, ದಾವಣಗೆರೆ, ವಯಸ್ಸು 52 ವರ್ಷಗಳು ಇವರು ಪಕ್ಷೇತರ ಅಭ್ಯರ್ಥಿಯಾಗಿ, ಮಂಜುನಾಥ ಎ.ಕೆ(ಪ.ಜಾ), ತುಂಗಭದ್ರ ಬಡಾವಣೆ, ಹೊನ್ನಾಳಿ ಪಟ್ಟಣ, ವಯಸ್ಸು 32 ವರ್ಷಗಳು, ಇವರು ಪಕ್ಷೇತರ ಅಭ್ಯರ್ಥಿಯಾಗಿ, ಡಾ.ಶ್ರೀಧರ ಉಡುಪ (ಸಾಮಾನ್ಯ), ನಿಟುವಳ್ಳಿಯ ಹೊಸಬಡಾವಣೆ, ದಾವಣಗೆರೆ, ವಯಸ್ಸು 66 ವರ್ಷಗಳು ಇವರು ಪಕ್ಷೇತರ ಅಭ್ಯರ್ಥಿಯಾಗಿ, ಬಿ.ವಿ.ತಿಪ್ಪೇಸ್ವಾಮಿ(ಸಾಮಾನ್ಯ), ಆವರಗೆರೆ, ದಾವಣಗೆರೆ ತಾಲ್ಲೂಕು, ವಯಸ್ಸು 48 ಇವರು ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ಅಬ್ದುಲ್ ನಜೀರ್ ಸಾಬ್(ಸಾಮಾನ್ಯ), ಹೊಸಹಳ್ಳಿ ಗ್ರಾಮ, ಹೊನ್ನಾಳಿ ತಾಲ್ಲೂಕು, 59 ವರ್ಷಗಳು ಇವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಜಿ.ಎನ್.ಶಿವಮೂರ್ತಿ ಇವರಿಗೆ ಇಂದು ಜಿಲ್ಲಾಡಳಿತ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap