ಕುಣಿಗಲ್
ಕನಕದಾಸರ ಆದರ್ಶ ತತ್ವಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಬದುಕನಲ್ಲಿ ಬದಲಾವಣೆಗಳನ್ನ ತರಬೇಕಾಗಿದೆ ಎಂದು ಶಾಸಕ ಡಾ ಹೆಚ್.ಡಿ.ರಂಗನಾಥ್ ತಿಳಿಸಿದರು.
ತಾಲ್ಲೂಕು ಆಡಳಿತ ಮತ್ತು ಕನಕದಾಸರ ಸಂಘ ಇವರುಗಳ ಆಶ್ರಯದಲ್ಲಿ ಕಂದಾಯ ಭವನದಲ್ಲಿ ಸಂತ ಶ್ರೇಷ್ಠ ಕನಕದಾಸರ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,ಸರ್ಕಾರ ಈ ಸಂತರ ಜೀವನ ಬದುಕು ಇತಿಹಾಸವನ್ನ ಸಮಾಜಕ್ಕೆ ತಿಳಿಸುವಂತಹ ಕಾರ್ಯಗಳನ್ನ ಕೈಗೊಳ್ಳುತ್ತಿದ್ದು,ಮನುಷ್ಯರು ಈ ಜಾತಿ ಸಮರದಿಂದ ಹೊರಬಂದು ಬದಲಾವಣೆಯ ಬದುಕನ್ನ ಈ ಸಮಾಜಕ್ಕೆ ನೀಡುವಂತಾಗಬೇಕು,ವಿದ್ಯಾರ್ಥಿಗಳು ಈ ದೆಸೆಯಲ್ಲಿ ಜಾತಿ ವ್ಯವಸ್ಥೆಯ ಹೋಗಲಾಡಿಸಲು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕನಕದಾಸರ ಬದುಕು,ಆದರ್ಶ,ಇತಿಹಾಸವನ್ನ ಸಮಾಜಕ್ಕೆ ಸಾರುವಂತಾಗಬೇಕಾಗಿದೆ ಎಂದರು.
ತಹಸೀಲ್ದಾರ್ ವಿಶ್ವನಾಥ್, ಬಿಒಓ ತಿಮ್ಮರಾಜು, ಕಸಾಪ ಅಧ್ಯಕ್ಷ ಕ.ಚ.ಕೃಷ್ಣಪ್ಪ, ಕುರುಬ ಸಂಘದ ಅಧ್ಯಕ್ಷ ದೊಡ್ಡಯ್ಯ,ದಲಿತ ಮುಖಂಡ ವರದರಾಜು, ಹಿಂದುಳಿದ ವರ್ಗಗಳ ಅಧಿಕಾರಿ ಪಾರ್ವತಮ್ಮ, ಪಿಎಸ್ಐ ವಿಕಾಸ್, ಗಣೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಾಂಬೆ ಇಂದ ಸೈಕಲ್ ಸವಾರಿಯ ಮೂಲಕ ದೇಶ ಪರ್ಯಟನೆ ಕೈಗೊಂಡು ಶಾಂತಿ ಧರ್ಮದ ಸಂದೇಶ ಸಾರುತ್ತಿರುವ ನಾಗರಾಜ್ರವರನ್ನ ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/11/15-Kuhni-Kanakadasa.gif)