ಕಾಂಗ್ರೆಸ್ ನಿಂದ ವಂಚನೆಗೊಳಗಾದವರು #Metoo ಎನ್ನುತ್ತಾರೆ..! : ರಾಜನಾಥ್ ಸಿಂಗ್

ದೆಹಲಿ: 

      ಕಾಂಗ್ರೆಸ್‌ನಿಂದ ವಂಚನೆಗೆ ಒಳಗಾದ ಮಂದಿ ಶೀಘ್ರವೇ #MeToo ಅಭಿಯಾನ ಆರಂಭಿಸಬಹುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

      “ಕಾಂಗ್ರೆಸ್‌ ಸೇರಲು ಇಚ್ಛಿಸುತ್ತಿರುವವರನ್ನು ಯಾರಿಂದಲೂ ಸರಿಪಡಿಸಲು ಆಗುವುದಿಲ್ಲ. ಎಲ್ಲ ವಿಪಕ್ಷಗಳೂ ಕೈಜೋಡಿಸಲು ಮುಂದಾದರೆ ಏನಾಗುತ್ತದೆ. ಕಾಂಗ್ರೆಸ್‌ನಿಂದ ವಂಚನೆಗೊಳಗಾದ ನಂತರ ಅವರೂ ಕೂಡಾ #MeToo ಅಭಿಯಾನ ಆರಂಭಿಸಲು ಮುಂದಾಗುತ್ತಾರೆ” ಎಂದು ರಾಜನಾಥ್‌ ಸಿಂಗ್ ಹೇಳಿದ್ದಾರೆ.

      ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಮಾಜಿ ಸಚಿವ ಜಸ್ವಂತ್‌ ಸಿಂಗ್‌ ಪುತ್ರ ಮನ್ವೇಂದ್ರ ಸಿಂಗ್‌ ಹಾಗು ಮಹಾರಾಷ್ಟ್ರ ಬಿಜೆಪಿ ನಾಯಕ ಆಶಿಶ್‌ ದೇಶಮುಖ್‌ ಕಾಂಗ್ರೆಸ್ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಂಗ್‌ ಮಾತುಗಳು ಸ್ವಾರಸ್ಯ ಪಡೆದಿವೆ.

      #MeToo ಆಪಾದನೆಗಳನ್ನು ನಿರ್ವಹಣೆ ಮಾಡಲು ಸಿಂಗ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿರುವ ಕೇಂದ್ರ, ಚಾಲ್ತಿಯಲ್ಲಿರುವ ಕಾನೂನುಗಳ ಚೌಕಟ್ಟಿನೊಳಗೆ ಏನಾದರೂ ಮಾಡಬಹುದೇ ಎಂಬುದನ್ನು ಪರಿಶೀಲನೆ ಮಾಡಲು ತಿಳಿಸಿದೆ. ಈ ಸಮಿತಿಯಲ್ಲಿ ನಿತಿನ್‌ ಗಡ್ಕರಿ, ನಿರ್ಮಲಾ ಸೀತಾರಾಮನ್‌, ಮನೇಕಾ ಗಾಂಧಿಯಂಥ ಕೇಂದ್ರದ ಇತರ ಸಚಿವರೂ ಇದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap