ದೆಹಲಿ:
ಕಾಂಗ್ರೆಸ್ನಿಂದ ವಂಚನೆಗೆ ಒಳಗಾದ ಮಂದಿ ಶೀಘ್ರವೇ #MeToo ಅಭಿಯಾನ ಆರಂಭಿಸಬಹುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
“ಕಾಂಗ್ರೆಸ್ ಸೇರಲು ಇಚ್ಛಿಸುತ್ತಿರುವವರನ್ನು ಯಾರಿಂದಲೂ ಸರಿಪಡಿಸಲು ಆಗುವುದಿಲ್ಲ. ಎಲ್ಲ ವಿಪಕ್ಷಗಳೂ ಕೈಜೋಡಿಸಲು ಮುಂದಾದರೆ ಏನಾಗುತ್ತದೆ. ಕಾಂಗ್ರೆಸ್ನಿಂದ ವಂಚನೆಗೊಳಗಾದ ನಂತರ ಅವರೂ ಕೂಡಾ #MeToo ಅಭಿಯಾನ ಆರಂಭಿಸಲು ಮುಂದಾಗುತ್ತಾರೆ” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಮಾಜಿ ಸಚಿವ ಜಸ್ವಂತ್ ಸಿಂಗ್ ಪುತ್ರ ಮನ್ವೇಂದ್ರ ಸಿಂಗ್ ಹಾಗು ಮಹಾರಾಷ್ಟ್ರ ಬಿಜೆಪಿ ನಾಯಕ ಆಶಿಶ್ ದೇಶಮುಖ್ ಕಾಂಗ್ರೆಸ್ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಂಗ್ ಮಾತುಗಳು ಸ್ವಾರಸ್ಯ ಪಡೆದಿವೆ.
#MeToo ಆಪಾದನೆಗಳನ್ನು ನಿರ್ವಹಣೆ ಮಾಡಲು ಸಿಂಗ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿರುವ ಕೇಂದ್ರ, ಚಾಲ್ತಿಯಲ್ಲಿರುವ ಕಾನೂನುಗಳ ಚೌಕಟ್ಟಿನೊಳಗೆ ಏನಾದರೂ ಮಾಡಬಹುದೇ ಎಂಬುದನ್ನು ಪರಿಶೀಲನೆ ಮಾಡಲು ತಿಳಿಸಿದೆ. ಈ ಸಮಿತಿಯಲ್ಲಿ ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಮನೇಕಾ ಗಾಂಧಿಯಂಥ ಕೇಂದ್ರದ ಇತರ ಸಚಿವರೂ ಇದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/rajnath-singh_650x400_81470.gif)