ಕೊರಟಗೆರೆ: -ರಂಗಧಾಮಯ್ಯ
ರಾಜ್ಯ ಸಮಿಶ್ರ ಸರ್ಕಾರದ ಮಾದರಿಯಲ್ಲಿಯೇ ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಕೂಡಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಹಂಚಿಕೊಂಡು ಅಧಿಕಾರ ಚುಕ್ಕಾಣಿ ಹಿಡಿಯಲು ಎರಡೂ ಪಕ್ಷದ ನಾಯಕರಲ್ಲಿ ರಹಸ್ಯ ಮಾತುಕತೆ ನಡೆಯುತ್ತಿದೆ.
ಕೊರಟಗೆರೆ ಪಟ್ಟಣದ ಅಭಿವೃದ್ದಿ ದೃಷ್ಟಿಯಿಂದ ಎರಡೂ ಪಕ್ಷದ ನಾಯಕರು ಸಮ್ಮತಿ ಸೂಚಿಸಿ ಎರಡೂ ಪಕ್ಷಗಳು ಸೇರಿ ಅಧಿಕಾರ ಹಿಡಿವ ಲಕ್ಷಣಗಳು ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ದಟ್ಟವಾಗಿ ಗೋಚರಿಸುತ್ತಿದೆ.
ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ 15 ವಾರ್ಡ್ಗಳಿದ್ದು, 8 ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾದರೆ, ಕಾಂಗ್ರೆಸ್ನಿಂದ 5 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಒಟ್ಟಾರೆ ಬಿಜೆಪಿ ಹಾಗೂ ಪಕ್ಷೇತರ ತಲಾ ಒಬ್ಬೊಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು 8 ಜನ ಸಂಖ್ಯೆ ಬಲವಿದ್ದರೆ ಸಾಕು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಲಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆಯಾದರೂ, ಕಾನೂನು ವ್ಯಾಪ್ತಿಯಲ್ಲಿ ಬೇರೆಯೆ ಬೆಳವಣಿಗೆಗಳಿವೆ. ಶಾಸಕರು-ಸಂಸದರ ಮತ ಇಲ್ಲಿ ಗಣನೆಗೆ ಬರುವುದರಿಂದ ಜೆಡಿಎಸ್ಗೆ ಸಹ 9 ಸಂಖ್ಯಾಬಲ ಬೇಕಿರುವುದರಿಂದ 8 ಜನರಲ್ಲಿ ಅಧಿಕಾರ ಹಿಡಿಯಲು ಸಮಸ್ಯೆಯಾಗುವುದರಿಂದ ಬೇರೆಯವರನ್ನು ಅಂಗಲಾಚುವ ಬದಲು, ಜೆಡಿಎಸ್ ನಾಯಕರಿಗೆ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷದೊಂದಿಗೆ ಕೈ ಜೋಡಿಸುವ ಸಂದಿಗ್ದ ಸ್ಥಿತಿ ಬಂದಿದೆ.
ಕೊರಟಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಹೊರಬಿದ್ದಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಬಂದರೆ, ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿಗೆ ಮೀಸಲಿದ್ದು, ಜೆಡಿಎಸ್ ನಲ್ಲಿ ಎರಡೂ ಸ್ಥಾನಗಳಿಗೂ ಮೀಸಲಿಟ್ಟ ಅನ್ವಯ ಸದಸ್ಯರಿದ್ದರೂ ಸಂಖ್ಯಾಬಲದ ಕೊರತೆಯಿದೆ. ಬಿಜೆಪಿ ಇಲ್ಲದೆ ಪಕ್ಷೇತರ ಅಭ್ಯರ್ಥಿಗೆ ಮಾರು ಹೋಗುವ ಬದಲು ರಾಜ್ಯ ಸಮ್ಮಿಶ್ರ ಸರ್ಕಾರದ ಮಾದರಿಯಲ್ಲಿ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿ ಅಧ್ಯಕ್ಷ ಹುದ್ದೆಯನ್ನು ತಮ್ಮ ಬಳಿ ಉಳಿಸಿಕೊಂಡು, ಉಪಾಧ್ಯಕ್ಷರ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟು ಕೊಡುವ ಅಲೋಚನೆಯಲ್ಲಿ ಜೆಡಿಎಸ್ ನಾಯಕರು ಇದ್ದಂತೆ ಕಂಡು ಬರುತ್ತಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯುವ ಹೊಸಿಲಿಗೆ ಬಂದಿದ್ದರೂ, ಕ್ಷೇತ್ರದ ಅಭಿವೃದ್ದಿ ದೃಷ್ಟಿಯಿಂದ ಉಪಮುಖ್ಯಮಂತ್ರಿಯಾಗಿರುವ ಡಾ. ಜಿ ಪರಮೇಶ್ವರ್ ರವರನ್ನು ನಿರ್ಲಕ್ಷಿಸಿ ಕಾಂಗ್ರೆಸ್ಗೆ ತೊಡೆತಟ್ಟಿ ಅಧಿಕಾರ ಹಿಡಿದರೆ, ಕೊರಟಗೆರೆಯಲ್ಲಿ ಅಭಿವೃದ್ದಿ ಕೆಲಸ ಕೈಗೊಳ್ಳಲು ಸಾಧ್ಯವಿಲ್ಲ. ಅದರ ಬದಲು ಪರಮೇಶ್ವರ್ ಹಾಗೂ ಕುಮಾರಸ್ವಾಮಿ ಜೊತೆ ಕೆಲವು ನಾಯಕರು ಮಾತುಕತೆ ನಡೆಸಿ ಕಾಂಗ್ರೆಸ್-ಜೆಡಿಎಸ್ ಕೈ ಜೋಡಿಸುವ ಆಲೋಚನೆಯಲ್ಲಿ ಎರಡೂ ಪಕ್ಷಗಳು ಇರುವಂತಿವೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸಹ ರಾಜಕೀಯ ಚಾಣಾಕ್ಷತನ ತೋರುತಿದ್ದು, ಪ.ಪಂನಲ್ಲಿ ಅಧಿಕಾರ ಹಿಡಿಯಲು ಸಾಮಾನ್ಯವಾಗಿ 9 ಸಂಖ್ಯಾಬಲ ಬೇಕು. ಜೆಡಿಎಸ್ನಲ್ಲಿ 8 ಜನ ಮಾತ್ರ ಗೆದ್ದಿರುವಂತಹದು.್ದ ಕಾಂಗ್ರೆಸ್ನ 5 ರ ಜೊತೆಗೆ ಸಚಿವರಾದ ಡಾ. ಜಿ ಪರಮೇಶ್ವರ್ ಹಾಗೂ ಸಂಸದ ಮುದ್ದಹನುಮೇಗೌಡರ ಮತ ಸೇರಿದರೆ 7 ಸಂಖ್ಯಾಬಲ ಬರಲಿದೆ. ಉಳಿದಂತೆ ಕಾಂಗ್ರೆಸ್ ಪಕ್ಷದ ನಟರಾಜು ಕೆಲವೊಂದು ಕಾರಣದಿಂದ ಪಕ್ಷದಲ್ಲಿ ಟಿಕೆಟ್ ವಂಚಿತನಾಗಿ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾನೆ. ಅದರಲ್ಲೂ ಮುರಳೀಧರ ಹಾಲಪ್ಪನವರ ಶಿಷ್ಯ. ಬೇರೆ. ಪರಮೇಶ್ವರ್ ಪಕ್ಷಕ್ಕೆ ಬಾ ಎಂದರೆ ಬಂದೆ ಬರುತ್ತಾರೆ. ಅಲ್ಲಿಗೆ ಕಾಂಗ್ರೆಸ್ನ ಸಂಖ್ಯೆಯ ಬಲ 8 ಜನ. ಉಳಿದಂತೆ ಅಭಿವೃದಿ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿಯನ್ನು ಮನವೊಲಿಸಿದರೆ 9 ಜನ ಆಗುತ್ತದೆ. ಅಧಿಕಾರ ಹಿಡಿಯಲು ಬಹುಮತ ಇದೆ ಎಂದು ಕಾಂಗ್ರೆಸ್ ಸಹ ವಿವಿಧ ರಾಜಕೀಯ ಚಟುವಟಿಕೆಗಳನ್ನು ಎಣೆಯುತ್ತಿರುವುದು ಕಂಡಾಗ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ವಾಸ್ತವ ನೆನಪಾಗುತ್ತಿದೆ.
ಜೆಡಿಎಸ್ಗೂ ಒಂದಿಷ್ಟು ಸಮಸ್ಯೆ ಇದೆ. 17 ಸಂಖ್ಯಾಬಲದಲ್ಲಿ 9 ಗೆಲುವಿನ ಸಂಖ್ಯೆಯಾಗಿದ್ದು, 8 ಸದಸ್ಯಬಲವಿರುವ ಜೆಡಿಎಸ್ಗೆ ದುರಾದೃಷ್ಟವೆಂದರೆ ಬೆಮೆಲ್ ಕಾಂತರಾಜು ಇಲ್ಲಿ ಮತ ಹಾಕಲು ಅವರ ಗುರುತಿನ ಚೀಟಿ ನೆಲಮಂಗಲದಲ್ಲಿರುವುದರಿಂದ ಇಲ್ಲಿ ಮತ ಚಲಾವಣೆಗೆ ಕಾನೂನು ತೊಡಕು ಇದೆ. ಈಗ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೇರಲು ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿ ಇಲ್ಲ್ಲವೆ ಬಿಜೆಪಿ ಅಭ್ಯರ್ಥಿಯ ಬೆಂಬಲ ಅನಿವಾರ್ಯವಾಗಿರುವುದರಿಂದ ಜೆಡಿಎಸ್ಗೆ ನುಂಗಲಾರದ ತುತ್ತಾಗಿದೆ. ಅನಿವಾರ್ಯವಾಗಿ ಬೇರೆಯವರ ಕೈ ಜೋಡಿಸುವ ಬದಲು ರಾಜ್ಯದ ಮಾದರಿಯಲ್ಲಿ ಕೊರಟಗೆರೆಯಲ್ಲಿ ಎರಡೂ ಪಕ್ಷಗಳು ಒಂದಾಗುವ ಮನಸ್ಥಿತಿಗೆ ಬಂದಿರುವುದು ಕಂಡು ಬರುತ್ತಿದೆ.
ಪ್ರಸಕ್ತ ರಾಜಕೀಯ ವಿದ್ಯಮಾನದಲ್ಲಿ ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆಯಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಹಂಚಿಕೊಂಡರೆ, ಜೆಡಿಎಸ್ನಿಂದ ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆಚಿiÀiÁದ್ದರಿಂದ, ಜೆಡಿಎಸ್ನಿಂದ ಭಾರತಿ ಸಿದ್ದಮಲ್ಲಪ್ಪರವರನ್ನು ಅಧ್ಯಕ್ಷರನ್ನಾಗಿ ಮತ್ತು ಉಪಾಧ್ಯಕ್ಷ ಪಟ್ಟ ಕಾಂಗ್ರೆಸ್ನಿಂದ ಎನ್.ಕೆ ನರಸಿಂಹಪ್ಪನಿಗೆ ವಹಿಸಿಕೊಡಲು, ಎರಡು ಪಕ್ಷದ ನಾಯಕರು ಒಂದು ಸುತ್ತಿನ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಸದ್ಯದ ಸನ್ನಿವೇಶದಲ್ಲಿ ಈ ಅಂಶವೇ ಅಂತಿಮವಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.
ಒಟ್ಟಾರೆ ಕೊರಟಗೆರೆ ಪ.ಪಂ ಚುನಾವಣೆಯಲ್ಲಿ ಮೊದಲು ಇದ್ದ ಜಿದ್ದಾ ಜಿದ್ದಿನ ವಾತಾವರಣ ಈಗ ಸ್ವಲ್ಪ ಮಟ್ಟಿಗೆ ತಿಳಿಯಾದಂತೆ ಕಂಡು ಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ವೈರತ್ವ, ಅಭಿವೃದ್ದಿ ದೃಷ್ಟಿಯಿಂದ ಎಲ್ಲ್ಲರೂ ಒಂದಾಗಿ ಹೋಗೋಣ ಎಂಬ ಮನಸ್ಥಿತಿಗೆ ಬಂದತೆ ಕಂಡು ಬರುತ್ತಿದೆ. ಎರಡು ಪಕ್ಷಗಳ ಉನ್ನತ ನಾಯಕರು ಸುಮಧುರ ಬಾಂಧವ್ಯದಲ್ಲಿದ್ದಾರೆ. ಹೀಗಿರುವಾಗ ನಾವು ಕಚ್ಚಾಡಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಮಾರಕವಾಗುವುದು ಬೇಡ ಎಂಬ ಮನಸ್ಥಿತಿಯಲ್ಲಿದ್ದಂತೆ ಕಂಡು ಬರುತ್ತಿದ್ದರೂ ರಾಜಕೀಯದ ಚದುರಂಗದಾಟದಲ್ಲಿ ದಾಳ ಯಾವಾಗ ಬೇಕಾದರೂ ಉರುಳಬಹುದು. ಎರಡೂ ಪಕ್ಷಗಳು ಭಿನ್ನವಾಗಿ ಆಲೋಚಿಸಿದ್ದರೆ ಅಚ್ಚರಿಪಡುವಂತಿಲ್ಲ. ಇದರ ಮಧ್ಯೆ ಕ್ಷೇತ್ರದ ಅಭಿವೃದ್ದಿ ದೃಷ್ಟಿಯಿಂದ ಎರಡೂ ಪಕ್ಷಗಳು ಒಂದಾದರೂ ಆಶ್ಚರ್ಯ ಪಡುವಂತಿಲ್ಲ. ಇವೆಲ್ಲದರ ನಡುವೆ ಕೊರಟಗೆರೆ ಮತದಾರ ಯಾವ ಪಕ್ಷವಾದರೆ ಏನು, ಕೊರಟಗೆರೆ ಅಭಿವೃದ್ದಿ ಪಥದಲ್ಲಿ ಸಾಗಿದರೆ ಸಾಕು ಎಂಬ ಆಲೋಚನೆಯಲ್ಲಿರುವುದು ಕಂಡು ಬರುತ್ತಿದೆ.