ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್-2021 ತಂತ್ರಜ್ಞಾನದ ಸ್ಪರ್ಷ: ಕರ್ನಾಟಕದ ಸಾಧನೆ

ಬೆಂಗಳೂರು:

ಕ್ರೀಡಾಕೂಟವೊಂದರಲ್ಲಿ ಕ್ರೀಡಾಪಟುಗಳಿಗೆ ನೆರವಾಗುವ ಆಪ್‌ ಸಿದ್ಧಗೊಳಿಸಿ, ಕ್ರೀಡಾಕೂಟವನ್ನು ತಂತ್ರಜ್ಞಾನದ ಮೂಲಕ ಯಶಸ್ವಿಗೊಳಿಸುವಲ್ಲಿ ಅದ್ಭುತ ಸಾಧನೆ ಮಾಡಿರುವ ಹಿರಿಮೆ ಕರ್ನಾಟಕಕ್ಕೆ ಸಲ್ಲುತ್ತದೆ.

ಏಪ್ರಿಲ್‌ 24 ರಿಂದ ಮೇ 3ರವರೆಗೆ ಬೆಂಗಳೂರಿನ ಐದು ಕ್ರೀಡಾಂಗಣಗಳಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗಾಗಿ ಸಿದ್ಧಪಡಿಸಿರುವ ಮೊಬೈಲ್‌ ಆಪ್‌ ಭಾರತದ ಕ್ರೀಡಾ ಇತಿಹಾಸಲ್ಲೇ ಮೊದಲ ಬಾರಿಗೆ ಬಳಸಿರುವ ವಿಶೇಷ ತಂತ್ರಜ್ಞಾನವಾಗಿದೆ.

ಆತಿಥೇಯ ವಿಶ್ವವಿದ್ಯಾನಿಲಯವಾಗಿರುವ ಜೈನ್‌ ಡೀಮ್ಡ್‌ ಟು ಬಿ ವಿಶ್ವವಿದ್ಯಾಲಯದ ನೆರವಿನೊಂದಿಗೆ ಕರ್ನಾಟಕ ಸರಕಾರ ಈ ಆಪ್‌ ಸಿದ್ಧಗೊಳಿಸಿದೆ. “ಖೇಲೋ ಇಂಡಿಯಾ ಯೂನಿ ಆಪ್‌ʼʼ ನಿಮ್ಮ ನೆರವಿಗೆ ಸಜ್ಜಾಗಿದೆ.

ಚಾಮರಾಜನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ

ಈ ಮೊಬೈಲ್‌ ಅಪ್ಲಿಕೇಷನ್‌ ಆಪ್‌ ಸ್ಟೋರ್‌ ಮತ್ತು ಗೂಗಲ್‌ ಪ್ಲೇಗಳಲ್ಲಿ ಈಗಾಗಲೇ ಲಭ್ಯವಿದ್ದು, ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಹಿಂದೆ ಕ್ರೀಡಾಕೂಟಗಳು ನಡೆದಾಗ ಪ್ರತಿಯೊಂದು ಮಾಹಿತಿಯನ್ನು ಮಾಹಿತಿ ಕೇಂದ್ರಗಳ ಮೂಲಕ ಪಡೆಯಬೇಕಾಗಿರುತ್ತಿತ್ತು. ಸ್ಪರ್ಧೆಗೆ ಸಜ್ಜಾವು ಒತ್ತಡದಲ್ಲಿರುವ ಕ್ರೀಡಾಪಟುಗಳಿಗೆ ಈ ಕೆಲಸಕ್ಕಾಗಿ ಹೆಚ್ಚು ಸಮಯವನ್ನು ವ್ಯಯ ಮಾಡಬೇಕಾಗಬೇಕಿತ್ತು.

ಆದರೆ ಈಗ ಒಂದ ಕ್ಲಿಕ್‌ ಮೂಲಕ ಅಂಗೈಯಲ್ಲೇ ಎಲ್ಲ ಮಾಹಿತಿ ದೊರೆಯಲಿದೆ.
ವಿವಿಧ ವಿಶ್ವವಿದ್ಯಾನಿಲಯಗಳ ಮಾಹಿತಿ, ಕ್ರೀಡಾಪಟುವಿಗೆ ಸಂಭಧಿಸಿದ ವಿಶ್ವವಿದ್ಯಾನಿಲಯ ಪಾಲ್ಗೊಳ್ಳುತ್ತಿರುವ ಕ್ರೀಡೆಗಳು, ಸಂಪೂರ್ಣ ವೇಳಾಪಟ್ಟಿ, ಕ್ರೀಡಾಪಟುವೊಬ್ಬರ ವೈಯಕ್ತಿಕ ವೇಳಾಪಟ್ಟಿ, ಸ್ಕೋರ್‌ಕಾರ್ಡ್‌, ವಸತಿ ವಿವರ, ಸಾರಿಗೆ ಸೌಲಭ್ಯ, ಆಹಾರ ಸೌಲಭ್ಯ, ಕ್ರೀಡಾಂಗಣ ನಕ್ಷೆ ಮೊದಲಾದ ಮಾಹಿತಿ ಲಭ್ಯವಿರುತ್ತದೆ.

ಏ.22 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗೆ ಕ್ಷಣಗಣನೆ: 6.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

1. ನನ್ನ ಗೇಮ್ಸ್‌: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ಗಾಗಿ ನಿರ್ಮಿಸಲಾದ ಮೊಬೈಲ್‌ ಆಪ್‌ನಲ್ಲಿ ಕ್ರೀಡಾಪಟುಗಳು ಮತ್ತು ಸಿಬ್ಬಂದಿ ವರ್ಗ ತಿಳಿದುಕೊಳ್ಳಬೇಕಾದ ಮೊದಲ ಅಂಶ ಮೈ ಗೇಮ್ಸ್‌ (MY GAMES) ಅಂದರೆ ನನ್ನ ಆಟ. ಕ್ರೀಡಾಪಟು ತಾನು ಪಾಲ್ಗೊಳ್ಳಬೇಕಾದ ಕ್ರೀಡೆಗಳ ಮಾಹಿತಿಯನ್ನು ಈ ವಿಭಾಗದಲ್ಲಿ ನೋಡಬಹುದು, ಆ ಕ್ರೀಡೆ ಎಲ್ಲಿ ನಡೆಯುತ್ತದೆ. ಹಿಂದಿನ ಕ್ರೀಡಾಕೂಟದಲ್ಲಿ ಈ ಕ್ರೀಡೆಯಲ್ಲಿ ಯಾರು ಪ್ರಭುತ್ವ ಸಾಧಿಸಿದ್ದರು. ಸ್ಪರ್ಧಿಸುವ ಕ್ರೀಡೆ ಎಲ್ಲಿ ನಡೆಯಲಿದೆ ಎಂಬ ಕುರಿತು ಮಾಹಿತಿ ಲಭ್ಯ ವಿರುತ್ತದೆ.

2. ಮುಂಬರುವ ಕ್ರೀಡೆಗಳು: ಒಂದು ಕ್ರೀಡೆ ಮುಗಿದ ನಂತರ ಮುಂದೆ ಕ್ರೀಡಾಪಟುವೊಬ್ಬ ಭಾಗವಹಿಸಬೇಕಾದ ಮುಂದಿನ ಕ್ರೀಡೆಗಳ ಬಗ್ಗೆ UP COMING GAMES ಮಾಹಿತಿ ನೀಡುತ್ತದೆ. ಈ ರೀತಿ ಮಾಹಿತಿ ಕ್ರೀಡಾಪಟುಗಳು ಮತ್ತು ಕೋಚ್‌ಗೆ ಲಭ್ಯವಾಗುವುದರಿಂದ ತಮ್ಮ ಸಿದ್ಧತೆಗಳನ್ನು ಸೂಕ್ತ ರೀತಿಯಲ್ಲಿ ಮಾಡಿಕೊಳ್ಳಬಹುದು.

3. ಸ್ಕೋರ್‌ ಕಾರ್ಡ್‌: ಕ್ರೀಡಾಕೂಟವೊಂದು ನಡೆಯುತ್ತಿರಬೇಕಾದರೆ ಕ್ರೀಡಾಪಟುಗಳ ಸಾಧನೆಯ ವಿವರ ಮತ್ತು ಫಲಿತಾಂಶ ಕ್ಲಪ್ತ ಸಮಯದಲ್ಲಿ ಸಿಗಬೇಕಾದ ಅನಿವಾರ್ಯತೆ ಇರುತ್ತದೆ. ಇದು ಅವರ ಮುಂದಿನ ಸ್ಪರ್ಧೆಗಳಿಗೆ ಪೂರಕವಾಗಬಲ್ಲದು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಈ ಆಪ್‌ ಸಿದ್ಧಗೊಳಿಸಿದೆ.

ರಾಜ್ಯದಲ್ಲಿ ಏ.19,20 ರಂದು ಮಳೆ; 14 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

4. ಚಿತ್ರಗಳು: ಕ್ರೀಡಾಪಟುಗಳು ಪಾಲ್ಗೊಂಡಿರುವ ದೃಶ್ಯಗಳನ್ನು ಮೊಬೈಲ್‌ ಆಪ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದು ಸಾಕಷ್ಟು ಕ್ರೀಡಾಭಿಮಾನಿಗಳನ್ನು ತಲಪುವುದರಿಂದ ಸ್ಪರ್ಧಿಸಿದ ಕ್ರೀಡಾಪಟುವಿನಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ.

5. ತುರ್ತು ಸಂಪರ್ಕ: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌, ಐದು ಬೇರೆ ಬೇರೆ ಸ್ಥಳಗಳಲ್ಲಿ ನಡೆಯುವುದರಿಂದ ತುರ್ತು ಸಂಪರ್ಕಗಳ ಅನಿವಾರ್ಯತೆ ಇರುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರಕಾರ ಆಪ್‌ನಲ್ಲಿ ತುರ್ತು ದೂರವಾಣಿ ಸಂಖ್ಯೆಗಳನ್ನು ಅಳವಡಿಸಿದೆ.

6. ವಸತಿ ಬಗ್ಗೆ ಮಾಹಿತಿ: ಆಹಾರ ಮತ್ತು ವಸತಿ ಕ್ರೀಡಾಕೂಟದ ಪ್ರಮುಖ ಅಂಶ. ಕ್ರೀಡಾಕೂಟದಲ್ಲಿ ಕ್ರೀಡೆ ಪ್ರಧಾನವಾಗಿರುವುದು ಸಹಜ, ಆದರೆ ಆಹಾರ ಮತ್ತು ವಸತಿ ಅಸಮರ್ಪಕವಾದರೆ ಇಡೀ ಕ್ರೀಡಾಕೂಟವೇ ವೈಫಲ್ವ ಎಂಬ ನಿಲುವು ಹುಟ್ಟಿಕೊಳ್ಳುವುದೇ ಹೆಚ್ಚು.

ಅದಕ್ಕಾಗಿ ಭಾರತೀಯ ಕ್ರೀಡಾಪ್ರಾಧಿಕಾರ ವಸತಿ ಮತ್ತು ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ರಾಜ್ಯ ಸರಕಾರ ಕ್ರೀಡಾಪಟುಗಳಿಗೆ ಉತ್ತಮ ವಸತಿ ಸೌಲಭ್ಯವನ್ನೂ ಕಲ್ಪಿಸಿದೆ. ಈ ಬಾರಿ 8000ಕ್ಕೂ ಹೆಚ್ಚು ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ವಿವರಗಳನ್ನು ಆಪ್‌ ಮೂಲಕ ಪಡೆದುಕೊಳ್ಳಬಹುದು.

ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ

ಉಳಿದಂತೆ ಸಾರಿಗೆ ಸೌಲಭ್ಯ, ಪದಕಗಳ ಪಟ್ಟಿ, ಕ್ರೀಡಾ ಸ್ಥಳಗಳ ಬಗ್ಗೆ ವಿಸ್ತೃತ ಮಾಹಿತಿ, ದೂರುಗಳು, ಪರಿಹಾರ ಕುರಿತು ವಿವರಗಳು ಆಪ್‌ನಲ್ಲಿ ಇರುತ್ತದೆ.ಆಪ್‌ನಲ್ಲಿ ಪ್ರತಿಯೊಬ್ಬ ಕ್ರೀಡಾಪಟುವಿಗಾಗಿ “ಮೈ ಪಾಸ್‌ʼʼ ಕಲ್ಪಿಸಲಾಗಿದೆ. ಈ “ಇ-ಪಾಸ್‌ʼʼನಲ್ಲಿ, ವಿಶೇಷವಾದ ಗುರುತಿನ ಸಂಖ್ಯೆ ಇದ್ದು, ಕ್ರೀಡಾಪಟುಗಳ ಫೋಟೋ ಇರುತ್ತದೆ.

ಇಲ್ಲಿ ಕ್ರೀಡಾಪಟುಗಳ ಹುಟ್ಟಿದ ದಿನಾಂಕ, ರಕ್ತದ ಗುಂಪು, ಪ್ರತಿನಿಧಿಸುತ್ತಿರುವ ವಿಶ್ವವಿದ್ಯಾನಿಲಯ, ಪಾಲ್ಗೊಳ್ಳುತ್ತಿರುವ ಕ್ರೀಡೆ ಮೊದಲಾದ ಮಾಹಿತಿ ಇರುತ್ತದೆ.ನನ್ನ ಆಹಾರ: ಕ್ರೀಡಾಕೂಟದಲ್ಲಿ ಆಹಾರಕ್ಕೆ ಪ್ರಮುಖ ಆದ್ಯತೆ. ಆದ್ದರಿಂದ ಆಪ್‌ನಲ್ಲಿ ವಿಭಾಗವನ್ನು ಕಲ್ಪಿಸಲಾಗಿದೆ. ಪ್ರತಿನಿತ್ಯವೂ ಬೆಳಿಗ್ಗಿನ ತಿನಿಸು, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟಕ್ಕೆ ಏನೆಲ್ಲ ವೈವಿಧ್ಯತೆ ಇರುತ್ತದೆ ಎಂಬ ವಿವರಗಳನ್ನು ಈ ವಿಭಾಗ ಒಳಗೊಂಡಿರುತ್ತದೆ. ಊಟೋಪಚಾರದಲ್ಲಿ ಏನಾದರೆ ಸಲಹೆ ಸೂಚನೆಗಳನ್ನು ನೀಡುವುದಿದ್ದರೆ, MY FOOD ವಿಭಾಗದಲ್ಲಿ ಊಟೋಪಚಾರ ವಿಭಾಗದ ವಿರ್ವಾಹಕರ ಹೆಸರು ಹಾಗೂಸಂಪರ್ಕಿಸಬಹದಾದ ದೂರವಾಣಿ ಸಂಖ್ಯೆ ಇರುತ್ತದೆ.

ಸಿದ್ದರಾಮಯ್ಯಗೆ ನಾಲ್ಕು ನೇರ ಪ್ರಶ್ನೆ ಕೇಳಿದ ,ಹೆಚ್.ಡಿ.ಕುಮಾರಸ್ವಾಮಿ ಧೈರ್ಯವಿದ್ದರೆ ಉತ್ತರಿಸಿ, ವಿಷಯಾಂತರ ಬೇಡ ಎಂದು ಟಾಂಗ್ ಕೊಟ್ಟ ಮಾಜಿ ಸಿಎಂ

ಪ್ರವಾಸಿ ತಾಣಗಳು:

ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳು ಬೆಂಗಳೂರು ಮತ್ತು ಕರ್ನಾಟಕದ ಪ್ರವಾಸಿ ತಾಣಗಳ ಬಗ್ಗೆ ತಿಳಿದು ಭೇಟಿ ನೀಡಬಹುದು. ಇದಕ್ಕಾಗಿಯೇ “explore Karnataka” ಮತ್ತು “explore Bengaluru” ಎಂಬ ವಿಭಾಗವಿರುತ್ತದೆ. ಒಟ್ಟಾರೆ ಅಂಗೈಯಲ್ಲೇ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಮತ್ತು ಕರ್ನಾಟಕದ ಸಮಗ್ರ ಮಾಹಿತಿ ಕ್ರೀಡಾಪಟುಗಳಿಗೆ ಲಭ್ಯವಾಗಲಿದೆ.

“ಸಿಲಿಕಾನ್‌ ವ್ಯಾಲಿ ಎಂಬ ಹೆಸರಿಗೆ ತಕ್ಕಂತೆ ಬೆಂಗಳೂರು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ 8000 ಪ್ರತಿನಿಧಿಗಳನ್ನು ವಿಶೇಷವಾಗಿ ಸಿದ್ಧಗೊಳಿಸಿರುವ ಮೊಬೈಲ್‌ ಆಪ್‌ ಮೂಲಕ ಡಿಜಿಟಲ್‌ ಆಗಿ ಸ್ವಾಗತಿಸಲು ನಾವು ಸಜ್ಜಾಗಿದ್ದೇವೆ.

ಮೇ 2ನೇ ವಾರ SSLC ಪರೀಕ್ಷೆ ಫಲಿತಾಂಶ

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳಿಗೆ ಒಂದೇ ಹಂತದಲ್ಲಿ ಎಲ್ಲ ಮಾಹಿತಿ ದೊರೆಯುವಂತೆ ಈ ಆಪ್‌ ವಿನ್ಯಾಸಗೊಳಿಸಲಾಗಿದೆ. ಕ್ರೀಡಾಕೂಟಕ್ಕೆ ಈ ಆಪ್‌ ಪ್ರವೇಶದ್ವಾರವಿದ್ದಂತೆ, ನಾವು ಏಪ್ರಿಲ್‌ 24 ರಿಂದ ಮೇ 3ರ ವರೆಗೆ ನಡೆಯಲಿರುವ ಈ ಕ್ರೀಡಾಕೂಟದ ಮೂಲಕ ಐಟಿ ಸಿಟಿ ಯಾಗಿದ್ದ ಬೆಂಗಳೂರನ್ನು ಕ್ರೀಡಾ ಸಿಟಿಯಾಗಿ ಪರಿವರ್ತಿಸಲಿದ್ದೇವೆ,” ಎಂದು ಡಾ. ಶಾಲಿನಿ ರಜನೀಶ್‌,( ಐಎಎಸ್) ಅಪರ ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ‌ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap