ಚಿತ್ರದುರ್ಗ : ಅರಣ್ಯ ಸಂಪತ್ತು ನಾಶವಾದರೆ ಮನುಕುಲಕ್ಕೆ ಪೆಟ್ಟು

ಚಿತ್ರದುರ್ಗ

   ಅರಣ್ಯ ಪ್ರದೇಶ ಕಡಿಮೆಯಾಗಿ ಅಲ್ಲಿರಬೇಕಾದ ಕಾಡು ಪ್ರಾಣಿಗಳು ನಗರದತ್ತ ವಲಸೆ ಬರುತ್ತಿದೆ ಇವುಗಳು ನಗರದತ್ತ ಬಾರದಂತೆ ತಡೆಯಬೇಕಾದರೆ ಅರಣ್ಯ ಪ್ರದೇಶ ಹೆಚ್ಚಾಗಬೇಕಿದೆ ಇದಕ್ಕೆ ಎಲ್ಲರ ಸಹಾಯ ಮತ್ತು ಸಹಕಾರ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜು, ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಸಿರು ಕರ್ನಾಟಕ-2018 ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ, ಸಸಿ ವಿತರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

   ಪರಿಸರ ನಮ್ಮ ಜೊತೆ ಇರಬೇಕಿದೆ ಅಗ ಮಾತ್ರ ಮಾನವನ ಬದುಕು ನೆಮ್ಮದಿಯಾಗಿ ಇರಲು ಸಾಧ್ಯವಿದೆ ಆದರೆ ಮಾನವ ಪರಿಸರದ ವಿರುದ್ದ ಹೋದಾಗ ಅದು ಕೋಪಗೊಂಡು ತನ್ನ ಶಕ್ತಿಯನ್ನು ಪ್ರದರ್ಶನ ಮಾಡುತ್ತಿದೆ. ಪರಿಸರ ನಾಶವಾದರೆ ಭವಿಷ್ಯದ ದಿನಗಳಲ್ಲಿ ಮನುಷ್ಯ ದೊಡ್ಡ ಅನಾಹುತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು
ಸಸಿಗಳನ್ನು ನೆಡುವುದರ ಮೂಲಕ ಅವುಗಳ ಬೆಳವಣಿಗೆಗೆ ಎಲ್ಲರು ಸಹಾಯ ಮಾಡಬೇಕಿದೆ ಎಲ್ಲಿ ಜಾಗ ಖಾಲಿ ಇದೆ ಅಲ್ಲಿ ಸಸಿಗಳನ್ನು ನಡೆವುದರ ಮೂಲಕ ಗಿಡಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಿದೆ ಇದು ಬರೀ ಇಲಾಖೆಯ ಕೆಲಸ ಎಂದು ಭಾವಿಸದೇ ಎಲ್ಲರು ಸಕ್ರೀಯವಾಗಿ ಪಾಲ್ಗೊಳ್ಳಬೇಕಿದೆ ಎಂದು ನ್ಯಾಯಾಧೀಶರು ಕರೆ ನೀಡಿದರು.

   ಈ ಕಾಲೇಜಿನಲ್ಲಿ ಹಲವಾರು ಸಮಸ್ಯೆ ಇದೇ ಎಂದು ಗೊತ್ತಿದೆ ಅದರಲ್ಲೂ ಶೌಚಾಲಯದ ಸಮಸ್ಯೆ ಹೆಚ್ಚಾಗಿದೆ ಎಂದು ಮನದಟ್ಟಾಗಿದೆ ಇದರ ಬಗ್ಗೆ ನಗರಸಭೆಯವರಿಗೆ ಸೂಚನೆ ನೀಡಲಾಗಿದೆ ಅವರು ನಿರ್ಮಾಣ ಮಾಡುತ್ತಾರೆ, ಎಂದು ತಿಳಿಸಿ, ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧ ಮಾಡಲಾಗಿದೆ ನೀವುಗಳು ಸಹಾ ಇದಕ್ಕೆ ಸಹಕಾರ ನೀಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಿಯು ಉಪ ನಿರ್ದೆಶಕರಾದ ಶೋಭಾರವರು ಮಾತನಾಡಿ ಚಿತ್ರದುರ್ಗ ಮತ್ತು ಹೊಸದುರ್ಗದ ಗಣಿ ಪ್ರದೇಶಗಳಲ್ಲಿ ವಸೂಲಿಯಾದ ರಾಜಧನದಲ್ಲಿ ಇಲ್ಲಿನ ಕಾಲೇಜಿಗಳಿಗೆ ಮೂಲಭೂತ ಸೌಕರ್ಯವನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಸುಮಾರು 50 ಕೋಟಿ ರೂ.ಗಳ ಪ್ರಸ್ತಾವನೆಯನ್ನು ನೀಡಲಾಗಿದೆ ಎಂದು ತಿಳಿಸಿ ಚಿತ್ರದುರ್ಗ ಮತ್ತು ಹಿರಿಯೂರಿನಲ್ಲಿ ಕೊಠಡಿಗಳ ಕೊರತೆಯಿಂದ ಕಾಲೇಜು ಮತ್ತು ಫೌಢಶಾಲೆಗಳು ಶಿಫ್ಟ್‍ನಲ್ಲಿ ನಡೆಯುತ್ತಿದೆ ಇದನ್ನು ನಿವಾರಣೆ ಮಾಡಲು ಪಿಯು. ಮಂಡಳಿ ನಿರ್ಧಾರ ಮಾಡಿದೆ ಇದಕ್ಕೆ ಬೇಕಾದ ಅಗತ್ಯವಾದ ಕೊಠಡಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ, ಅತಿ ಶೀಘ್ರದಲ್ಲಿಯೇ ಎಲ್ಲಾ ಶಾಲಾ ಕಾಲೇಜಿನಂತೆ ನೀವು ಸಹಾ ಬರಬಹುದೆಂದು ತಿಳಿಸಿದರು.

   ಪರಿಸರದ ಬಗ್ಗೆ ಎಲ್ಲರು ಸಹಾ ಕಾಳಜಿಯನ್ನು ವಹಿಸಬೇಕಿದೆ ಅವುಗಳು ಇದ್ದರೆ ಬಾರಿ ಅನಾಹುತಗಳು ಆಗುವುದು ತಪ್ಪುತ್ತದೆ, ಆದರೆ ಇತ್ತೀಚಿನ ದಿನಮಾನದಲ್ಲಿ ಪರಿಸರದ ಪ್ರಮಾಣ ಕಡಿಮೆಯಾಗುತ್ತದೆ. ಮರಗಳು ಚನ್ನಾಗಿ ಬೆಳೆದರೆ ಮಣ್ಣು ಹರಿದು ಹೋಗದಂತೆ ಹಿಡಿಯುತ್ತದೆ ಆಗ ಕೇರಳ ಮತ್ತು ಕೂಡಗುನಂತಹ ಅನಾಹುತ ನಡೆಯುವುದಿಲ್ಲ ಎಂದು ಶೋಭಾ ಹೇಳಿದರು.
ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರರಾವ್ ಮಾತನಾಡಿ ಅರಣ್ಯ ಕಾಯ್ದೆ 1978ರ ಅನ್ವಯ ಬಯಲು ಪ್ರದೇಶದಲ್ಲಿ ಶೇ.33 ಮಲೆನಾಡು ಪ್ರದೇಶದಲ್ಲಿ ಶೇ. 60 ರಷ್ಟು ಕಾಡು ಇರಬೇಕಿದೆ ಆದರೆ ಈಗ ಅದರ ಪ್ರಮಾಣ ಕಡಿಮೆಯಾಗಿದೆ ಇದರಿಂದ ಇದನ್ನು ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಇದೆ ಇದರಿಂದ ಸರ್ಕಾರ ಹಸಿರು ಕರ್ನಾಟಕ ಎಂಬ ಹೆಸರಿನಡಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

  ಕಾರ್ಯಕ್ರಮದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶೀ ದಿಂಡಲಕೊಪ್ಪ. ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶೀ ಶಿವುಯಾದವ್, ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ್, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್, ಉಪ ಪ್ರಾಂಶುಪಾಲರಾದ ಜಯ್ಯಪ್ಪ ಭಾಗವಹಿಸಿದ್ದರು.
ನಾಗರಾಜ್ ಸ್ವಾಗತಿಸಿದರೆ ಶ್ರೀನಿವಾಸ್ ವಂದಿಸಿದರೆ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪ್ರಬಂಧ ಸ್ಫರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.

Recent Articles

spot_img

Related Stories

Share via
Copy link