ಜಿಲ್ಲಾ ಮಟ್ಟದ ವಚನಗಾಯನ ಸ್ಪರ್ಧೆ

ತುಮಕೂರು:

             ವಿಶ್ವಬಂಧು ಪತ್ತಿನ ಸಹಕಾರ ಸಂಘದ ಪ್ರಾಯೋಜಕತ್ವದಲ್ಲಿ ಸರ್ವಸದಸ್ಯರ ಮಹಾಸಭೆ ಹಾಗೂ ಬಸವ ಸ್ಮರಣೋತ್ಸವದ ಅಂಗವಾಗಿ ತುಮಕೂರು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ವಚನ ಗಾಯನ ಸ್ಪರ್ಧೆಯನ್ನು ಸೆ.9 ರ ಭಾನುವಾರ ಬೆಳಗ್ಗೆ 10 ಗಂಟೆಗೆ ವಿದ್ಯೋದಯ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
           ಒಂದು ಪ್ರೌಢಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಪಾಲ್ಗೊಳ್ಳುವ ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥರಿಂದ ಪತ್ರ ಬರೆಸಿಕೊಂಡು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು ಅಥವಾ ಬರುವಾಗ ತರಬಹುದು. 12ನೇ ಶತಮಾನದ ಬಸವಾದಿ ಶರಣರ ಯಾವುದೇ ಒಂದು ವಚನ ಹಾಡಬಹುದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ 3 ಬಹುಮಾನ, ನಗರ ಪ್ರದೇಶದ 3 ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಹಾಗು ನಗದು, ಪ್ರಶಸ್ತಿ ಪತ್ರ ಹಾಗೂ ಭತ್ಯೆ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಚಿಕ್ಕಬೆಳ್ಳಾವಿ ಶಿವಕುಮಾರ್ (9980424427) ಇವರನ್ನು ಸಂಪರ್ಕಿಸುವುದು.

Recent Articles

spot_img

Related Stories

Share via
Copy link
Powered by Social Snap