ಪಾವಗಡ;-
ಅಖಂಡ ಮಂಡಲಕ್ಕೆಲ್ಲ ಅಧಿಪತಿ ಇದ್ದಂತೆ ಗುರು,ಗುರು ಇಲ್ಲದೆ ಭೋದನೆ ಇಲ್ಲ,ಒಬ್ಬ ವ್ಯಕ್ತ ಉನ್ನತ ಸ್ಥಾನದಲ್ಲಿ ಇರಬೇಕಾದರೆ ಶಿಕ್ಷಕನೇ ಮುಖ್ಯ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೊಗಡು ವೆಂಕಟೇಶ್ ರವರು ತಿಳಿಸಿದರು.
ಅವರು ಬುಧವಾರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ತುಮಕೂರು,ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ಉತ್ತರ ಮಧುಗಿರಿ ಶೈಕ್ಷಣಿಕ ಜಿಲ್ಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಪಾವಗಡ ರವರ ಸಹಯೋಗದಲ್ಲಿ ಏರ್ಪಡಿಸಿದ ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 131 ನೇ ಜಯಂತಿ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಾಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರು ಯಾವುದೇ ಒತ್ತಡದಲ್ಲಿ ಕೆಲಸ ಮಾಡಬಾರದು.ಮಾನಿಸಿಕವಾಗಿ, ಸದೃಡವಾಗಿ,ಚಿಂತಶೀಲರಾಗಬೇಕು,ಮನಸ್ಸು ಸಂತೋಷವಾಗಿ ಕೆಲಸ ಮಾಡಬೇಕಾದರೆ, ಸರ್ಕಾರ ಸೈನಿಕರಿಗೆ ಯಾವರೀತಿ ಸೌಲಭ್ಯ ಕೊಡುತೊ ಅದೇ ರೀತಿಯಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೆ ಮಾತ್ರ ನೆಮ್ಮಿದಿಯಿಂದ ಭೂದನೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ದೇಶದ ಎಲ್ಲ ರಂಗದಲ್ಲಿ ಇರುವವರನ್ನು ತಿದ್ದುವುದು ಮುಖಾಂತರ ಸ್ಥಾನ ಕಲ್ಪಿಸುವುದು ಶಿಕ್ಷಕ,ಅಂತರಿಕವಾಗಿ, ಬಾಹಿರವಾಗಿ,ನಮ್ಮ ದೇಶದಲ್ಲಿ ಉನ್ನತ ಸ್ಥಾನಕ್ಕೆ ಏರಲು ಅಳತೆ ತೆಗೆದುಕೊಳ್ಳೋದು ಶಿಕ್ಷಣ,ಆಗ ಮಾತ್ರ ದೇಶ ಅಭಿವೃದ್ಧಿಯಾಗಿದೆ ಎಂದು ಪರಿಗಣಿಸುತ್ತಾರೆ ಎಂದರು.
ತಹಶೀಲ್ದಾರ್ ವರದರಾಜು ಕಾರ್ಯಾಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಕರು ಒತ್ತಡಕ್ಕೆ ಮನಿದರು ಸಹ ಮುಗ್ದವಾದ ಮನುಸ್ಸು ನಿಂದ ಮಕ್ಕಳ ಸಾಧನೆ ಗೋಸ್ಕರ ಶ್ರಮವಹಿಸುತ್ತಾರೆ.ಒಳ್ಳಯ ಸಮಾಜ ನಿರ್ಮಾಣ ಮಾಡಬೇಕಾದರೆ ಶಿಕ್ಷಕರ ಪಾತ್ರ ಅತಿ ಮುಖ್ಯ ಎಂದರು.
ನಿವೃತ ಪ್ರಾಧ್ಯಾಪಕರಾದ ಚಳ್ಳಕೆರೆ ಜಿ.ವಿ.ಶ್ರೀರಾಮರೆಡ್ಡಿ ಪ್ರಧಾನ ಬಾಷಣಕಾರರಾಗಿ ಮಾತನಾಡುತ್ತಾ ಸರ್ವಪಲ್ಲಿ ರಾಧಕೃಷ್ಣನ್ ಅತ್ಯತ್ತಮದ ವ್ಯಕ್ತ ಇವರು ವಿವಿಧ ರಂಗದಲ್ಲಿ ಉತ್ತಮವಾಗಿ ಬೆಳದ ಕಾರಣ ಇವರು ದಿನಾಚರಣೆಯನ್ನು ಮಾಡಲು ಕೇಳಿಕೊಂಡಾಗ ಇದು ನನ್ನ ಬೆಳವಣೆಗೆ ಅಲ್ಲ,ಶಿಕ್ಷರ ಬೆಳೆಸಿದ ವ್ಯಕ್ತ ನಾನು ಇವರ ದಿನಾಚರಣೆ ಮಾಡಿದ್ದರೆ ಮಾತ್ರ ಅರ್ಥ ಇರುತ್ತದೆ ಎಂದು ತಿಳಿಸಿದ ಕಾರಣ ಇಂದು ಶಿಕ್ಷರ ದಿನಾಚರಣೆ ಅಚರಿಸುತ್ತಿದ್ದಾರೆ ಎಂದರು.
ಗುರು ಸ್ಥಾನದಲ್ಲಿ ಇರುವವರು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿರಬಾರದು,ಶಿಸ್ತು ಪಾಲನೇ ಮಾಡಬೇಕು,ಮಕ್ಕಳಿಗೆ ಉತ್ತಮ ವಿದ್ಯೆಯನ್ನು ನೀಡಿದರೇ ಮಾತ್ರ ನಾಡು ಮತ್ತು ದೇಶ ಸುಬದ್ರವಾಗಿರಲು ಸಾಧ್ಯ ಎಂದರು.
ಈ ಸಂಧರ್ಭದಲ್ಲಿ ತಾ.ಪಂ ಉಪಾಧ್ಯಕ್ಷಣಿ ಕೃಷ್ಣವೇಣಿಅಧಿನಾರಾಯಣರವರು ಡಾ.ರಾಧಕೃಷ್ಣನ್ರವರ ಬಾವಚಿತ್ರವನ್ನು ಅನಾವರಣಗೊಳಿಸಿದ್ದರು. ಕಾರ್ಯಾಕ್ರಮದಲ್ಲಿ.ಬಿ.ಇ.ಒ ಕುಮಾರಸ್ವಾಮಿ, ಸಿ.ಆರ್.ಪಿ ಪವನ್ಕುಮಾರ್ರೆಡ್ಡಿ,ರೋಟರಿ ಅಧ್ಯಕ್ಷ ಮೊಹಮದ್ಇಮ್ರಾನ್, ನರಸಿಂಹ,ಹನುಮಂತರಾಯಪ್ಪ, ಧನಂಜಯ್ಯ,ರಂಗಸ್ವಾಮಿ,ಬಸವರಾಜು ರವರು ಮಾತನಾಡಿದರು.
ದಿನಾಚರಣೆ ಅಂಗವಾಗಿ ನಿವೃತ ಶಿಕ್ಷಕರಾದ ಶ್ರೀನಿವಾಸ್ನಾಯಕ, ಅಂತರಗಂಗಶಂಕರಪ್ಪ, ಬಾಸ್ಕರ್,ಸಂಜೀವರೆಡ್ಡಿ,ಉತ್ತಮ ಶಿಕ್ಷಕರಿಗೆ ಹಾಗೂ ನಿಧನರಾದ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.